newsics.com
ಬೆಂಗಳೂರು: ಜಮ್ಮು ಮತ್ತು ಕಾಶ್ಮೀರದ ಪಹಲ್ಗಾಮ್ನ ಉಗ್ರರು ನಡೆಸಿದ ಗುಂಡಿನ ದಾಳಿಗೆ 26ಕ್ಕೂ ಹೆಚ್ಚು ಜನರು ಬಲಿಯಾಗಿದ್ದಾರೆ. ಈ ದಾಳಿಯಿಂದ ಇಡೀ ದೇಶವೇ ಬೆಚ್ಚಿಬಿದ್ದಿದೆ.
ಈ ದಾಳಿಯಲ್ಲಿ ಸಾವನ್ನಪ್ಪಿರುವ ಮತ್ತಿಕೆರೆ ನಿವಾಸಿ ಭರತ್ ಭೂಷಣ್ ಅವರ ಪಾರ್ಥಿವ ಶರೀರ ವಿಶೇಷ ವಿಮಾನದಲ್ಲಿ ಇಂದು ಸಂಜೆಯೊಳಗಾಗಿ ನಗರಕ್ಕೆ ತಲುಪಲಿದೆ. ಮೃತ ಭರತ್ ಅವರ ಅತ್ತೆ ವಿಮಲಾ ಈ ಬಗ್ಗೆ ಮಾತನಾಡಿದ್ದಾರೆ.
“ನಿನ್ನೆ ಮಧ್ಯಾಹ್ನ 2:45ಕ್ಕೆ ಮಗಳು ಸುಜಾತಾ ಕರೆ ಮಾಡಿ ದುರಂತದ ಬಗ್ಗೆ ತಿಳಿಸಿದಳು. ಭರತ್ ಐಟಿ ಕಂಪನಿಯಲ್ಲಿ ಮೊದಲು ಕೆಲಸ ಮಾಡುತ್ತಿದ್ದ. ಮದುವೆಯಾಗಿ ಐದು ವರ್ಷವಾಗಿತ್ತು. ಅಧಾರ್ ಕಾರ್ಡ್ ತೋರಿಸುವಂತೆ ಹೇಳಿ ಉಗ್ರರು ಸಾಯಿಸಿದ್ದಾರೆ. ಇದಕ್ಕೂ ಮುನ್ನ ಮುಸ್ಲಿಂ ಎಂದು ಹೇಳಿದರೆ ಬಿಡುತ್ತೇವೆ. ಬಳಿಕ ಮೋದಿಯನ್ನು ಕರೆದು ಹೇಳಿ ಅಂತ ಅಂದಿದ್ದಾರೆ. ನನ್ನ ಮಗಳ ಎದುರೇ ತಲೆಗೆ ಶೂಟ್ ಮಾಡಿದ್ರಂತೆ. ಇದೇ ತಿಂಗಳು 18ಕ್ಕೆ ಹೋಗಿದ್ದರು. ಇಂದು ಬೆಳಗ್ಗೆ 10 ಗಂಟೆಗೆ ವಾಪಸ್ ಆಗಬೇಕಿತ್ತು. ಮಕ್ಕಳು ಹಾಗೂ ಮಹಿಳೆಯರನ್ನು ಸಾಯಿಸಲ್ಲ ಅಂದ್ರಂತೆ. ಎಂದು ಬೇಸರ ವ್ಯಕ್ತಪಡಿಸಿದರು.