newsics.com
ಹೈದರಾಬಾದ್: 2013ರ ಹೈದರಾಬಾದ್ನ ಅವಳಿ ಸ್ಫೋಟ ಪ್ರಕರಣಕ್ಕೆ ಸಂಬಂಧಿಸಿದಂತೆ ಉಗ್ರ ಯಾಸೀನ್ ಭಟ್ಕಳ್ ಸೇರಿದಂತೆ 5 ಮಂದಿಗೆ 2016ರಲ್ಲಿ ಎನ್ಐಎ ಕೋರ್ಟ್ ವಿಧಿಸಿದ್ದ ಮರಣ ದಂಡನೆಯನ್ನು ತೆಲಂಗಾಣ ಹೈಕೋರ್ಟ್ ಮಂಗಳವಾರ ಎತ್ತಿ ಹಿಡಿದಿದೆ.
ನಿಷೇಧಿತ ಉಗ್ರ ಸಂಘಟನೆಯಾದ ಇಂಡಿಯನ್ ಮುಜಾಹಿದೀನ್ನ ಯಾಸೀನ್ ಭಟ್ಕಳ್, ಜಿಯಾವುರ್ ರೆಹಮಾನ್(ಪಾಕ್ ಉಗ್ರ), ಅಸಾದುಲ್ಲಾ ಅಖ್ತರ್ ಅಲಿಯಾಸ್ ಹದ್ದಿ, ತಹ್ಸಿನ್ ಅಖ್ತರ್ ಅಲಿಯಾಸ್ ಮೋನು, ಅಜಾಝ್ ಶೇಖ್ಗೆ ಗಲ್ಲು ಶಿಕ್ಷೆ ವಿಧಿಸಿ ವಿಚಾರಣಾ ನ್ಯಾಯಾಲಯ ನೀಡಿದ್ದ ತೀರ್ಪನ್ನು ಪ್ರಶ್ನಿಸಿ ಸಂಘಟನೆಯು ಹೈಕೋರ್ಟ್ಗೆ ಮೇಲ್ಮನವಿ ಸಲ್ಲಿಸಿತ್ತು.
ಈಗ ಹೈಕೋರ್ಟ್ ವಿಭಾಗೀಯ ಪೀಠ ಎನ್ಐಎ ಕೋರ್ಟ್ನ ತೀರ್ಪನ್ನು ಎತ್ತಿ ಹಿಡಿದಿದೆ. ಸ್ಫೋಟದಲ್ಲಿ 18 ಮಂದಿ ಸಾವಿಗೀಡಾಗಿದ್ದರು.