newsics.com
ಬೆಂಗಳೂರು: ನಟ ದರ್ಶನ್ ‘ಡೆವಿಲ್’ ಸಿನಿಮಾದ ಚಿತ್ರೀಕರಣಕ್ಕಾಗಿ ರಾಜಸ್ಥಾನಕ್ಕೆ ತೆರಳಿದ್ದರು. ಚಿತ್ರೀಕರಣ ಮುಗಿಸಿ ಇದೀಗ ಬೆಂಗಳೂರಿಗೆ ವಾಪಸ್ಸಾಗಿದ್ದಾರೆ. ಪತ್ನಿ ವಿಜಯಲಕ್ಷ್ಮಿ ಮತ್ತು ಮಗ ವಿನೀಶ್ ಅವರುಗಳು ಸಹ ರಾಜಸ್ಥಾನಕ್ಕೆ ಹೋಗಿದ್ದರು.
ರಾಜಸ್ಥಾನದಲ್ಲಿ ‘ಡೆವಿಲ್’ ಸಿನಿಮಾದ ಮೂರನೇ ಹಂತದ ಚಿತ್ರೀಕರಣ ಮುಗಿದಿದೆ. ಮುಂದಿನ ಚಿತ್ರೀಕರಣ ಬೆಂಗಳೂರಿನಲ್ಲಿ ನಡೆಯಲಿದೆ.
ಬೆಂಗಳೂರಿಗೆ ವಾಪಾಸ್ಸಾದ ನಟ ದರ್ಶನ್ ಅವರು ರೆಡ್ ಕಲರ್ ಟೀಶರ್ಟ್ ಹಾಗೂ ಬ್ಲ್ಯಾಕ್ ಪ್ಯಾಂಟ್ ಧರಿಸಿಕೊಂಡಿದ್ದರು. ರಾಜಸ್ಥಾನದಿಂದ ಬೆಂಗಳೂರಿಗೆ ಆಗಮಿಸಿದ ನಟ ದರ್ಶನ್ ಜೊತೆ ಪತ್ನಿ ವಿಜಯಲಕ್ಷ್ಮಿ ಹಾಗೂ ಪುತ್ರ ಇದ್ದರು.
ಏಪ್ರಿಲ್ 13 ರಿಂದ ಮತ್ತೆ ಬೆಂಗಳೂರಿನಲ್ಲಿ ಡೆವಿಲ್ ಶೂಟಿಂಗ್ ಶುರುವಾಗಲಿದೆ. ಅರೋಪಿ ದರ್ಶನ್ ಅವರು ಸದ್ಯ ಚೇತರಿಸಿಕೊಂಡಿದ್ದು ಡೆವಿಲ್ ಟೀಮ್ ಸದ್ಯ ಫೈಟ್ ಮಾಸ್ಟರ್ ರಾಮ್ ಲಕ್ಷ್ಮಣ್ ಡೇಟ್ ಗಾಗಿ ಕಾಯ್ತಿದ್ದಾರೆ ಎಂದು ತಿಳಿದು ಬಂದಿದೆ. ರಾಮ್ ಲಕ್ಷ್ಮಣ್ ಡೇಟ್ ಕನ್ಪರ್ಮ್ ಆದ ಕೂಡಲೆ ಡೆವಿಲ್ ಆಕ್ಷನ್ ಸೀಕ್ವೆನ್ಸ್ ಶೂಟ್ ಶುರುವಾಗಲಿದೆ. ಬೆನ್ನು ನೋವಿನಿಂದ ನರಳುತಿದ್ದ ದರ್ಶನ್ ಈಗ ಫೈಟ್ ಮಾಡಲು ಫಿಟ್ ಆಗಿದ್ದಾರೆ. ಏಪ್ರಿಲ್ ನಲ್ಲಿ ಆಕ್ಷನ್ ಸೀಕ್ವೆನ್ಸ್ ನಲ್ಲಿಯೂ ದರ್ಶನ್ ಅವರು ಭಾಗಿಯಾಗಲಿದ್ದಾರೆ ಎನ್ನಲಾಗಿದೆ.