newsics.com
ಬಿಹಾರ: ದೃಷ್ಟಿಹೀನರಾಗಿದ್ದರೂ ನೀರಿನೊಳಗಡೆ ನೋಡಬಲ್ಲ ವಿಶಿಷ್ಟ ಸಾಮರ್ಥ್ಯ ಹೊಂದಿರುವ ವ್ಯಕ್ತಿ ವಿಹಾರದಲ್ಲಿದ್ದಾರೆ.
ಭುಲ್ಲು ಸಾಹ್ನಿ ವಿಶಿಷ್ಟ ಸಾಮರ್ಥ್ಯ ವಿರುವ ವ್ಯಕ್ತಿ ಎಂದು ತಿಳಿದು ಬಂದಿದೆ. ಇವರು ಹುಟ್ಟಿನಿಂದಲೇ ದೃಷ್ಟಿಹೀನರಾಗಿದ್ದಾರೆ. ಆದ್ರೆ ಇವರಿಗೆ ನೀರಿನಲ್ಲಿ ಕಣ್ಣು ಕಾಣುಸುತ್ತೆ. ಇವರು ನೀರಿಗೆ ಧುಮುಕಿದರೆ ಸಾಕು, ನೀರೊಳಗಿನ ಎಲ್ಲವನ್ನೂ ಇವರು ಸ್ಪಷ್ಟವಾಗಿ ನೋಡಬಲ್ಲರು.
ತಮ್ಮ ಈ ವಿಶಿಷ್ಟ ಸಾಮರ್ಥ್ಯದಿಂದ ಇವರು ಹತ್ತಿರದ ಬಾಯಾ ನದಿ ಹಾಗೂ ಇನ್ನಿತರ ಜಲಮೂಲಗಳಲ್ಲಿ ಮುಳುಗುತ್ತಿದ್ದ ಅನೇಕರ ಜೀವಗಳನ್ನು ಉಳಿಸಿದ್ದಾರೆ. ನೆಲದ ಮೇಲಿದ್ದಾಗ ಕಣ್ಣು ಕಾಣುವುದಿಲ್ಲ, ನೀರಲ್ಲಿ ಸ್ಪಷ್ಟವಾಗಿ ಕಾಣಿಸುತ್ತೆ ಎಂದು ಜಲ ಯೋಧ ಭುಲ್ಲು ಸಾಹ್ನಿ ಹೇಳುತ್ತಾರೆ.
ಭುಲ್ಲು ಅವರ ನಿಸ್ವಾರ್ಥ ಸೇವೆಯನ್ನು ಗುರುತಿಸಿ, ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರು ಭುಲ್ಲು ಅವರಿಗೆ ಪ್ರಶಸ್ತಿ ಮತ್ತು ಪ್ರಶಂಸಾ ಪತ್ರವನ್ನು ನೀಡಿ ಗೌರವಿಸಿದ್ದಾರೆ. ಜೀವಗಳನ್ನು ಉಳಿಸುವಲ್ಲಿ ಮತ್ತು ರಕ್ಷಣಾ ಕಾರ್ಯಾಚರಣೆಯಲ್ಲಿ ಸಹಾಯ ಮಾಡುವಲ್ಲಿ ಭುಲ್ಲು ಅವರ ಪ್ರಯತ್ನಗಳನ್ನು ಸಿಎಂ ಶ್ಲಾಘಿಸಿದರು. ನೀರಿನಲ್ಲಿ ಮುಳುಗುತ್ತಿದ್ದ 14 ಜನರನ್ನು ರಕ್ಷಿಸಿ 13 ಶವಗಳನ್ನು ಹೊರತೆಗೆದ ಭುಲ್ಲು ಅವರಿಗೆ ಬಿಹಾರ ಪೊಲೀಸ್ ಸಪ್ತಾಹ ಕಾರ್ಯಕ್ರಮದಲ್ಲಿ ಪ್ರಶಸ್ತಿ ಪತ್ರ ಮತ್ತು 10,000 ರೂ. ನಗದು ಬಹುಮಾನ ನೀಡಿ ಗೌರವಿಸಲಾಯಿತು.