newsics.com
ಬೆಂಗಳೂರು: ನಗರದ ಗಾಳಿಯಲ್ಲಿ ಅಪಾಯಕಾರಿ ಮಟ್ಟ ಮೀರಿ ನೈಟ್ರೋಜನ್ ಡೈ ಆಕ್ಸೈಡ್ ತುಂಬಿಕೊಂಡಿದೆ. ಈ ವಾಯು ಮಾಲಿನ್ಯವು ಮಾರಣಾಂತಿಕ ಕಾಯಿಲೆಗೆ ಕಾರಣವಾಗುತ್ತವೆ ಎಂದು ಗ್ರೀನ್ ಪೀಸ್ ಇಂಡಿಯಾದ ಇತ್ತೀಚಿನ ವರದಿ ಹೇಳಿದೆ.
ಬೆಂಗಳೂರಿನಲ್ಲಿ ಉಸಿರಾಡುವ ಗಾಳಿಯೂ ಈಗ ಅಪಾಯಕಾರಿ ಮಟ್ಟ ತಲುಪಿದೆ. ನಗರದಲ್ಲಿ ಗಾಳಿಯ ಗುಣಮಟ್ಟ ಕಡಿಮೆಯಾಗಿದೆ. ಬೆಂಗಳೂರಿನ ವಾರ್ಷಿಕ ಸರಾಸರಿ ನೈಟ್ರೋಜನ್ ಡೈ ಆಕ್ಸೈಡ್ ಸಾಂದ್ರತೆಯು 2023 ರಲ್ಲಿ ವಿಶ್ವ ಆರೋಗ್ಯ ಸಂಸ್ಥೆ ನಿಗದಿಪಡಿಸಿದ ಮಾನದಂಡಗಳಿಗಿಂತ ಸುಮಾರು ಎರಡು ಪಟ್ಟು ಹೆಚ್ಚಾಗಿದೆ ಎಂದು ವರದಿ ವಿವರಿಸಿದೆ.
ಬೆಂಗಳೂರಿನಲ್ಲಿ ವಾಹನಗಳ ಹೊಗೆಯಿಂದ ಉತ್ಪತ್ತಿಯಾಗುವ ವಿಷಾನಿಲ ನೈಟ್ರೋಜನ್ ಡೈ ಆಕ್ಸೈಡ್ ಮಿತಿ ಮೀರಿರುವ ಅಂಶವನ್ನು ವರದಿಯಲ್ಲಿ ಉಲ್ಲೇಖಿಸಲಾಗಿದೆ.
ಬೆಂಗಳೂರಿನಲ್ಲಿ ಮೆಜೆಸ್ಟಿಕ್ ಸಿಟಿ ರೈಲ್ವೇ ನಿಲ್ದಾಣ ಏರಿಯಾ ಅತೀ ಹೆಚ್ಚು ಮಾಲಿನ್ಯಭರಿತ ಸ್ಥಳವಾಗಿದೆ ಎಂದು ವರದಿ ಹೇಳಿದೆ.
ಬೆಂಗಳೂರು ಮಾತ್ರವಲ್ಲ, ಜೈಪುರ, ಪುಣೆ, ಮುಂಬೈ, ಕೋಲ್ಕತ್ತಾ, ಹೈದರಾಬಾದ್, ಚೆನ್ನೈ ನಗರಗಳಲ್ಲೂ ವಾಯುಮಾಲಿನ್ಯ ಮಿತಿ ಮೀರಿದೆ ಎಂದು ವರದಿ ತಿಳಿಸಿದೆ.
ಏನೇನು ದುಷ್ಪರಿಣಾಮ?:
ನೈಟ್ರೋಜನ್ ಡೈ ಆಕ್ಸೈಡ್ನಿಂದ ಉಸಿರಾಟದ ಸಮಸ್ಯೆ, ಶೀತ, ಕೆಮ್ಮು ಮುಂತಾದ ಆರೋಗ್ಯ ಸಮಸ್ಯೆ ಉಂಟಾಗಲಿದೆ. ವಾಸನೆ ಗ್ರಹಿಸುವ ಶಕ್ತಿ, ಕಣ್ಣಿನ ಸಮಸ್ಯೆ, ಶ್ವಾಸಕೋಶ ಸಂಬಂಧಿ ಆರೋಗ್ಯ ಸಮಸ್ಯೆಗಳಿಗೆ ಕಾರಣವಾಗಬಹುದು.
ನೈಟ್ರೋಜನ್ ಡೈಆಕ್ಸೈಡ್ ನಿರಂತರವಾಗಿ ದೇಹ ಸೇರುವುದರಿಂದ ದೇಹಕ್ಜೆ ಮಾರಕವಾಗಬಹುದು. ವೈಜ್ಞಾನಿಕ ಅಧ್ಯಯನಗಳು ಹೇಳುವಂತೆ ಸತತವಾಗಿ ನೈಟ್ರೋಜನ್ ಡೈ ಆಕ್ಸೈಡ್ ದೇಹ ಸೇರುವುದರಿಂದ ಅಸ್ತಮಾದ ಅಪಾಯ, ಶ್ವಾಸ ಮಾರ್ಗದ ಉರಿಯೂತ, ಉಸಿರಾಟದ ಕಿರಿಕಿರಿ ಕಾಣಿಸುತ್ತದೆ. ಈಗಾಗಲೇ ಉಸಿರಾಟದ ತೊಂದರೆಗಳು ಇದ್ದರೆ ಮತ್ತಷ್ಟು ಹದಗೆಡಬಹುದು. ಶ್ವಾಸಕೋಶದ ಬೆಳವಣಿಗೆ ದುರ್ಬಲಗೊಳಿಸುತ್ತದೆ. ಅಲರ್ಜಿ, ಉಸಿರಾಟದ ತೊಂದರೆ ಜತೆಗೆ ಹೃದ್ರೋಗ ಮತ್ತು ಶ್ವಾಸಕೋಶದ ಕ್ಯಾನ್ಸರ್ ಸಾಧ್ಯತೆಯನ್ನೂ ಹೆಚ್ಚಿಸುತ್ತದೆ.
2019ರ ವರದಿ ಪ್ರಕಾರ, ಬೆಂಗಳೂರಿನಲ್ಲಿ 2,730 ಮಕ್ಕಳಲ್ಲಿ ಕಂಡುಬಂದಿರುವ ಅಸ್ತಮಾಕ್ಕೆ ವಾತಾವರಣದಲ್ಲಿರುವ ನೈಟ್ರೋಜನ್ ಡೈಆಕ್ಸೆçಡ್ ಮೂಲ ಕಾರಣ.