newsics.com
ಚಿತ್ರದುರ್ಗ: ಮಗು ಹಸುವಿನಿಂದ ಅಳುತ್ತಿದ್ದಾಗ ತಾಯಿ ಪಕ್ಕದ ಮನೆಗೆ ಊಟ ತೆಗೆದುಕೊಂಡು ಬರಲು ಹೋಗಿದ್ದಾಳೆ.ಈ ವೇಳೆ ತಂದೆ ಮಗುವಿನ ಚೀರಾಟಕ್ಕೆ ಕೋಪಗೊಂಡು, ಹಲ್ಲೆ ಮಾಡಿ ಕೊಂದಿರುವ ಘಟನೆ ಚಿತ್ರದುರ್ಗದ ಹಳೆರಂಗಾಪುರದಲ್ಲಿ ನಡೆದಿದೆ.
ಮಂಜುನಾಥ್ (6) ಮೃತ ಮಗು ಎಂದು ತಿಳಿದುಬಂದಿದೆ. ನನಗೆ ಹಸಿವಾಗಿದೆ ಊಟ ಬೇಕು ಎಂದು ಮಗು ಅಳುತ್ತಿದ್ದಾಗ ತಾಯಿ ಪಕ್ಕದ ಮನೆಗೆ ಊಟ ತೆಗೆದುಕೊಂಡು ಬರಲು ಹೋಗಿದ್ದಾಳೆ.ಈ ವೇಳೆ ತಂದೆ ತಿಪ್ಪೇಶ್ ಮಗುವಿನ ಬೆನ್ನು ಹಾಗೂ ದೇಹದ ಇತರೆ ಭಾಗಗಳಲ್ಲಿ ಹಲ್ಲೆ ಮಾಡಿದ್ದಾನೆ. ಕೂಡಲೇ ಮಂಜುನಾಥ ಮೂರ್ಚೆ ಹೋಗಿದ್ದಾನೆ. ತಕ್ಷಣ ತಾಯಿ ಮಂಜುನಾಥನ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದಾಳೆ. ಅಷ್ಟರಲ್ಲಿ ಬಾಲಕ ಮಂಜುನಾಥ ಸಾವನಪ್ಪಿದೆ.
ತಿಪ್ಪೇಶ್ ಹಾಗೂ ಗೌರಮ್ಮ ಕೆಲ ವರ್ಷದ ಹಿಂದೆ ಪ್ರೀತಿಸಿ ಮದುವೆ ಆಗಿದ್ದರು. ತಿಪ್ಪೇಶ್ ತನ್ನ ತಾಯಿ ಶೆಟ್ಟಮ್ಮ ಮಾತು ಕೇಳಿ ಕೃತ್ಯ ಎಸಗಿದ್ದಾನೆ ಎಂದು ಆರೋಪಿಸಲಾಗಿದೆ. ತಿಪ್ಪೇಶ್ ವಿರುದ್ಧ ಪತ್ನಿ ಗೌರಮ್ಮ ಭರಮಸಾಗರ ಠಾಣೆಯಲ್ಲಿ ದುರುದ್ದೇಶದಿಂದ ಮಗನ ಮೇಲೆ ಹಲ್ಲೆ ನಡೆಸಿದ್ದಾನೆ ಎಂದು ದೂರು ನೀಡಿದ್ದಾರೆ.