newsics.com
ಚೈತ್ರಾ ಕುಂದಾಪುರ ನಟಿ ಅನುಷಾ ರೈ ಮೇಲೆ ಕೈ ಮಾಡುವ ಮೂಲಕ ಬಿಗ್ ಬಾಸ್ ನಿಯಮವನ್ನು ಉಲ್ಲಂಘನೆ ಮಾಡಿದ್ದಾರೆ. ಹೌದು, ಚೈತ್ರಾ ಕುಂದಾಪುರ ಹಾಸ್ಯಕ್ಕಾಗಿ ಅನುಷಾಗೆ ಹೊಡೆದರು. ಇದು ಅನುಷಾ ಅವರನ್ನು ಕೆರಳಿಸಿದೆ. ಈ ವಿಚಾರಕ್ಕೆ ಸಂಬಂಧಿಸಿ ದೊಡ್ಡ ಕಿರಿಕ್ ಆಗಿದೆ. ಸದ್ಯ ಕಲರ್ಸ್ ಕನ್ನಡದಲ್ಲಿ ಇದರ ಪ್ರೋಮೋ ಹಂಚಿಕೊಂಡಿದೆ.
ಸದ್ಯ ಕಲರ್ಸ್ ಕನ್ನಡ ವಾಹಿನಿ ರಿಲೀಸ್ ಮಾಡಿರುವ ‘ಬಿಗ್ ಬಾಸ್’ನ ಹೊಸ ಪ್ರೋಮೋದಲ್ಲಿ ಚೈತ್ರಾ ಕುಂದಾಪುರ ಮತ್ತು ಅನುಷಾ ರೈ ಜಗಳ ಮಾಡಿಕೊಂಡಿದ್ದಾರೆ. ಅನುಷಾ ರೈ ಹೇಳಿದ ಮಾತಿಗೆ ಸಿಟ್ಟಿಗೆದ್ದ ಚೈತ್ರಾ ಕುಂದಾಪುರ, “ತಾಯಿ, ಇನ್ಯಾವತ್ತೂ ನಿನ್ನ ಮಾತಾಡ್ಸಲ್ಲ” ಎಂದು ಗರಂ ಆಗಿದ್ದಾರೆ.
ಬಿಗ್ ಬಾಸ್’ ಚದುರಂಗ ಆಟವನ್ನು ಆಡಿಸಲಾಗುತ್ತಿದೆ. ಆಗ ಚೈತ್ರಾ ಕುಂದಾಪುರಗೆ ಒಬ್ಬರನ್ನು ಸೇಫ್ ಮಾಡುವ ಅವಕಾಶ ಸಿಕ್ಕಿದೆ. ಆಗ ಅವರು ಎದುರಾಳಿ ತಂಡದ ಗೌತಮಿ ಜಾಧವ್ ಅವರನ್ನು ಸೇಫ್ ಮಾಡಿದರು. ಇದು ಈಗ ಕಿಡಿ ಹೊತ್ತಿಕೊಳ್ಳಲು ಕಾರಣವಾಗಿದೆ.
ಗಾರ್ಡನ್ ಏರಿಯಾದಲ್ಲಿ ಅನುಷಾ ರೈ ಜೊತೆಗೆ ಭವ್ಯಾ ಗೌಡ, ಧರ್ಮ ಕೀರ್ತಿರಾಜ್, ತ್ರಿವಿಕ್ರಮ್ ಕುಳಿತಿರುತ್ತಾರೆ. ಆಗ ಅಲ್ಲಿಗೆ ಬರುವ ಚೈತ್ರಾಗೆ ಕುಂದಾಪುರಗೆ ಅನುಷಾ ರೈ ಪ್ರಶ್ನೆ ಮಾಡಿದ್ದಾರೆ. “ನಾವಿಷ್ಟು ಜನ ಇದ್ದೇವೆ, ನಾವು ನಿಮ್ಮ ಕಣ್ಣಿಗೆ ಕಾಣಲಿಲ್ಲವೇ” ಎಂದು ಅನುಷಾ ರೈ ಕೇಳಿದ್ದಾರೆ. ಅದಕ್ಕೆ ಉತ್ತರಿಸಿದ ಚೈತ್ರಾ ಕುಂದಾಪುರ, “ಕಾಣಿಸಿದರೂ ನಾನು ಕಾಣಿಸದ ರೀತಿಯಲ್ಲೇ ಹೋಗುತ್ತೇನೆ” ಎಂದಿದ್ದಾರೆ. “ಅದಕ್ಕೆ ಕಣವ್ವ ನಾವು ಕೇಳಲೇ ಇಲ್ಲ” ಎಂದು ಅನುಷಾ ಹೇಳಿದ್ದಕ್ಕೆ ಅವರ ತಲೆಗೆ ಚೈತ್ರಾ ಮೊಟಕಿದ್ದಾರೆ. ಆದರೆ ಇದು ಅನುಷಾ ಕೋಪಕ್ಕೆ ಕಾರಣವಾಗಿದೆ.
ಜಸ್ಟ್ ಶಟ್ಅಪ್ ಓಕೆ.. ಪದೇ ಪದೇ ಹೇಳಬೇಡಿ.. ನಾನು ಸೀರಿಯಸ್ ಆಗಿ ಹೇಳುತ್ತಿದ್ದೇನೆ” ಎಂದು ಚೈತ್ರಾ ಮೇಲೆ ಕೂಗಾಡಿದ್ದಾರೆ ಅನುಷಾ ರೈ. ಆಗ ಚೈತ್ರಾ ಕೂಡ ಅಷ್ಟೇ ಖಡಕ್ ಆಗಿ ತಿರುಗೇಟು ನೀಡಿದ್ದಾರೆ. “ತಪ್ಪಾಯ್ತು ತಾಯಿ, ಇನ್ಯಾವತ್ತೂ ಮಾತನಾಡಲ್ಲ.. ಇದನ್ನ ನೆನಪಲ್ಲಿ ಇಟ್ಟುಕೊಳ್ಳುತ್ತೇನೆ” ಎಂದು ಸಿಟ್ಟಿನಿಂದ ಹೇಳಿ ಅಲ್ಲಿಂದ ಎದ್ದು ಹೋಗಿದ್ದಾರೆ. ಇದರ ಬಗ್ಗೆ ಅನುಷಾ ರೈ ಕ್ಯಾರೇ ಎಂದಿಲ್ಲ. ಕಲರ್ಸ್ ಕನ್ನಡ ರಿಲೀಸ್ ಮಾಡಿರುವ ಈ ಪ್ರೋಮೋದಲ್ಲಿ ಮತ್ತೊಂದು ಜಗಳಕ್ಕೆ ಬಿಗ್ ಬಾಸ್ ಮನೆ ಸಾಕ್ಷಿ ಆಗಲಿದೆಯಾ ಎಂಬ ಅನುಮಾನವನ್ನು ಹುಟ್ಟುಹಾಕಿದೆ. ಈ ಹಿಂದೆ ರಂಜಿತ್ ಅವರನ್ನು ಹಲ್ಲೆ ಮಾಡಿದ್ದಕ್ಕೆ ಮನೆಯಿಂದ ಹೊರಹಾಕಲಾಗಿತ್ತು. ಚೈತ್ರಾ ಅವರನ್ನು ಸಹ ಹೊರಹಾಕಲಾಗುತ್ತದೆಯೇ ಎಂಬುದನ್ನು ಕಾದು ನೋಡಬೇಕಿದೆ.