newsics.com| ನ್ಯೂಸಿಕ್ಸ್
ವೈರಲ್ ಆಗುವ ಹಂಬಲದಿಂದ, ಉದ್ಯಮಿ ಕೇತನ್ ಸಾವನ್ನು ಸಂಭ್ರಮಿಸಿ ವಿಕೃತವಾಗಿ ನಕ್ಕಿದ್ದ ಮಧ್ಯಪ್ರದೇಶದ ವೈದ್ಯೆ ಡಾ. ಮುಸ್ಕಾನ್ ಸೋನಿ ಇದೀಗ ಸಂಕಷ್ಟಕ್ಕೆ ಸಿಲುಕಿದ್ದಾರೆ.
ಭಾವಿ ಪತ್ನಿ ಮತ್ತು ಆಕೆಯ ಪ್ರಿಯಕರನಿಂದ ಹತ್ಯೆಗೆ ಒಳಗಾಗಿದ್ದಾನೆ ಎನ್ನಲಾದ ಉದ್ಯಮಿ ಕೇತನ್ ಸಾವು ಇಡೀ ದೇಶವನ್ನೇ ಬೆಚ್ಚಿಬೀಳಿಸಿದೆ. ಅಪರಾಧಿಗಳಿಗೆ ಕಠಿಣ ಶಿಕ್ಷೆ ಆಗಬೇಕು ಎಂದು ಹಲವರು ಹೇಳುತ್ತಿದ್ದಾರೆ. ಆದರೆ ಇಲ್ಲೊಬ್ಬಳು ವೈದ್ಯೆ ಕೊಲೆ ಮಾಡಿರುವ ಆರೋಪ ಹೊತ್ತ ಸಿಯಾಳ ಪರವಾಗಿ ಕಮೆಂಟ್ ಮಾಡಿದ್ದಳು. ಅವಳು ಅಂದುಕೊಂಡಂತೆ ರಾತ್ರೋರಾತ್ರಿ ಫೇಮಸ್ ಕೂಡ ಆದಳು.
ಆದರೆ, ಇವಳ ಈ ವಿಕೃತನಕ್ಕೆ ಅಖಿಲ ಭಾರತ ದಂತ ವಿದ್ಯಾರ್ಥಿಗಳು ಮತ್ತು ಶಸ್ತ್ರಚಿಕಿತ್ಸಕರ ಸಂಘ ಡಾ. ಮುಸ್ಕಾನ್ ಸೋನಿಯನ್ನು 5 ವರ್ಷಗಳ ಕಾಲ ಸಂಘದ ಸ್ಥಾನ ಮತ್ತು ಸದಸ್ಯತ್ವದಿಂದ ಅಮಾನತುಗೊಳಿಸಿದೆ.
“ಐ ಹೇಟ್ ಮ್ಯಾನ್” ಎಂಬ ಹ್ಯಾಶ್ಟ್ಯಾಗ್ ಬಳಸಿ ಈಕೆ ತನ್ನ ಇನ್ಸ್ಟಾಗ್ರಾಮ್ ಸ್ಟೋರಿಯಲ್ಲಿ, ಕೊಲೆಗಾತಿಯ ಆರೋಪ ಹೊತ್ತ ಸಿಯಾ ಗೋಯಲ್ ಪರವಾಗಿ ಬರೆದುಕೊಂಡಿದ್ದಳು. ಸಾಲದು ಎನ್ನುವುದಕ್ಕೆ ಕೇತನ್ ಸಾವಿನ ಬಗ್ಗೆ ವಿಕೃತವಾಗಿ ನಕ್ಕಿದ್ದಳು. ಇದು ಭಾರಿ ವೈರಲ್ ಆಗಿ ಟೀಕೆಗೆ ಒಳಗಾಗುತ್ತಲೇ ಒಳಗೊಳಗೆ ತಾನು ಫೇಮಸ್ ಆದೆ ಎಂದು ಖುಷಿಪಟ್ಟಿದ್ದ ಈಕೆ, ಕ್ಷಮೆಯಾಚಿಸಿದ್ದಳು. ಆದರೆ ಅದು ಮಧ್ಯಪ್ರದೇಶದ ಸರ್ಕಾರ ಆಗಿದ್ದರಿಂದ ಇಷ್ಟಕ್ಕೇ ನಿಲ್ಲಿಸದೇ ಲೈಸೆನ್ಸ್ ಅಮಾನತು ಮಾಡಿದೆ.