Newsics
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
NewsicsNewsics
Font ResizerAa
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
  • ಲೈಫ್‌ಸ್ಟೈಲ್
  • ಅನಾವರಣ
Search
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
Follow US
Newsics > Blog > ಪ್ರಮುಖ > ಜು.5ರಂದು ಬೆಂಗಳೂರು ಮೂಲದ ಗೌರಿ ಜೊತೆ ನಟ ಆಮೀ‌ರ್ ಖಾನ್ ಮದುವೆ!
ಪ್ರಮುಖಮನರಂಜನೆ

ಜು.5ರಂದು ಬೆಂಗಳೂರು ಮೂಲದ ಗೌರಿ ಜೊತೆ ನಟ ಆಮೀ‌ರ್ ಖಾನ್ ಮದುವೆ!

Share
3 Min Read
SHARE

ಬಾಲಿವುಡ್‌ನ ಹಿರಿಯ ನಟ ಅಮೀರ್ ಖಾನ್ ಅವರು ಮತ್ತೊಮ್ಮೆ ದಾಂಪತ್ಯ ಜೀವನಕ್ಕೆ ಕಾಲಿಡಲು ಸಜ್ಜಾಗಿದ್ದಾರೆ. ತಮ್ಮ ವಿಭಿನ್ನ ವ್ಯಕ್ತಿತ್ವ ಹಾಗೂ ಇಮೇಜ್‌ಗೆ ತಕ್ಕಂತೆ, ಅಮೀರ್ ಖಾನ್ ಈ ಮದುವೆಯನ್ನೂ ಸಹ ಯಾವುದೇ ಅದ್ದೂರಿತನವಿಲ್ಲದೆ ಸಂಪೂರ್ಣವಾಗಿ ತಮ್ಮದೇ ಆದ ಸರಳ ಶೈಲಿಯಲ್ಲಿ ಮಾಡಿಕೊಳ್ಳುತ್ತಿದ್ದಾರೆ. 59 ವರ್ಷದ ನಟ ಅಮೀರ್ ಖಾನ್ ಹಾಗೂ ಅವರ ಪಾರ್ಟ್‌ನರ್‌ ಗೌರಿ ಸ್ಪ್ರ್ಯಾಟ್ ಅವರು ಅತ್ಯಂತ ಸರಳವಾಗಿ ತಮ್ಮ ಸಂಬಂಧವನ್ನು ಅಧಿಕೃತಗೊಳಿಸಲು ನಿರ್ಧರಿಸಿದ್ದಾರೆ. ಯಾವುದೇ ಪ್ರಚಾರ ಅಥವಾ ಫಿಲ್ಮಿ ಶೋಕಿಗಳಿಲ್ಲದೆ, ಕೇವಲ ಎರಡು ಕುಟುಂಬಗಳು ಮತ್ತು ಅತ್ಯಂತ ಆಪ್ತ ಸ್ನೇಹಿತರ ಸಮ್ಮುಖದಲ್ಲಿ ತಮ್ಮ ಮನೆಯಲ್ಲೇ ರಿಜಿಸ್ಟರ್ಡ್ ಮ್ಯಾರೇಜ್ ಮಾಡಿಕೊಳ್ಳಲಿದ್ದಾರೆ. ಸದ್ದಿಲ್ಲದ ಸಹಿ ಪ್ರಕ್ರಿಯೆ, ಒಂದು ಸಣ್ಣ ಆಪ್ತರ ಕೂಟದೊಂದಿಗೆ ಅಮೀರ್ ಖಾನ್ ಅವರ ಮನೆಯ ಲಿವಿಂಗ್ ರೂಮ್‌ನಲ್ಲೇ ಈ ಹೊಸ ಅಧ್ಯಾಯ ಆರಂಭವಾಗಲಿದೆ.

ಕುಟುಂಬಕ್ಕೆ ಆಪ್ತರಾಗಿರುವ ಮೂಲಗಳ ಪ್ರಕಾರ, ಅಮೀರ್ ಮತ್ತು ಗೌರಿ ಕಳೆದ ಒಂದು ವರ್ಷಕ್ಕೂ ಹೆಚ್ಚು ಸಮಯದಿಂದ ಒಂದೇ ಸೂರಿನಡಿ ಒಟ್ಟಿಗೆ ವಾಸಿಸುತ್ತಿದ್ದಾರೆ. ಅವರು ಈಗಾಗಲೇ ಅತ್ಯಂತ ಸಂತೋಷದ ಹಾಗೂ ಸ್ಥಿರವಾದ ಜೀವನವನ್ನು ಒಟ್ಟಿಗೆ ಕಟ್ಟಿಕೊಂಡಿದ್ದಾರೆ. ಈಗ ಕೇವಲ ಕುಟುಂಬದವರ ಸಮ್ಮುಖದಲ್ಲಿ ಅದನ್ನು ಅಧಿಕೃತಗೊಳಿಸಲು ನಿರ್ಧರಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ. ಈ ವಿವಾಹ ಜುಲೈ 5 ರಂದು ಅಮೀ‌ರ್ ಖಾನ್ ಅವರ ನಿವಾಸದಲ್ಲೇ ಜರುಗಲಿದೆ.

ಅಮೀ‌ರ್ ಖಾನ್ ಅವರ ಬದುಕಿಗೆ ಹೆಜ್ಜೆ ಇಡುತ್ತಿರುವ 47 ವರ್ಷದ ಗೌರಿ ಸ್ಪ್ಯಾಟ್ ಅವರ ಹಿನ್ನೆಲೆ ಕೂಡ ಅಷ್ಟೇ ರೋಚಕವಾಗಿದೆ. ಅವರ ತಾಯಿ ರಿತಾ ಸ್ಪ್ಯಾಟ್ ಬೆಂಗಳೂರು ಮೂಲದವರು. ಗೌರಿ ಅವರಿಗೆ ಈ ಹಿಂದಿನ ಮದುವೆಯಿಂದ ಕ್ವಿನ್ ಎಂಬ ಏಳು ವರ್ಷದ ಮಗನಿದ್ದಾನೆ. ಇನ್ನು ಇವರ ಕುಟುಂಬದ ಇತಿಹಾಸವು ಭಾರತದ ಸ್ವಾತಂತ್ರ್ಯ ಸಂಗ್ರಾಮದೊಂದಿಗೆ ವಿಶಿಷ್ಟವಾದ ನಂಟನ್ನು ಹೊಂದಿದೆ.

ಗೌರಿ ಅವರ ತಾತ (Philip Spratt) ಅವರು ಬ್ರಿಟನ್ ಮೂಲದ ಕಮ್ಯುನಿಸ್ಟ್ ಆಗಿದ್ದು, 1920ರ ದಶಕದಲ್ಲಿ ಭಾರತಕ್ಕೆ ಬಂದಿದ್ದರು. ತದನಂತರ ಅವರು ಭಾರತದ ಸ್ವಾತಂತ್ರ್ಯಕ್ಕಾಗಿ ಬ್ರಿಟಿಷರ ವಿರುದ್ಧವೇ ಹೋರಾಟಕ್ಕಿಳಿದಿದ್ದರು. ಕಡಲಾಚೆಯಿಂದ ಬಂದು, ಜನ್ಮತಃ ತಮಗೆ ಸಂಬಂಧಿಸದ ದೇಶದ ಸ್ವಾತಂತ್ರ್ಯದ ಆಶಯವನ್ನು ತಮ್ಮ ಸಿದ್ಧಾಂತವಾಗಿಸಿಕೊಂಡು ಹೋರಾಡಿದ ಮಹಾನ್ ವ್ಯಕ್ತಿ ಅವರಾಗಿದ್ದರು. ಅಂತಹ ವ್ಯಕ್ತಿಯ ಮೊಮ್ಮಗಳು ಈಗ ಭಾರತವನ್ನು ತನ್ನ ವೈಯಕ್ತಿಕ ಬದುಕಿನ ದಾರಿಯಾಗಿ ಆರಿಸಿಕೊಂಡು ಇಲ್ಲೇ ನೆಲೆಸುತ್ತಿರುವುದು ಕಾಕತಾಳೀಯವಾಗಿದೆ. ಅಮೀರ್ ಖಾನ್ ಮತ್ತು ಗೌರಿ ಇಬ್ಬರೂ ಕೂಡ ತಮ್ಮ ಕುಟುಂಬಗಳ ಸಂಪೂರ್ಣ ಪ್ರೀತಿ ಮತ್ತು ಬೆಂಬಲದೊಂದಿಗೆ ಈ ಹೊಸ ಜೀವನದ ಹಂತಕ್ಕೆ ಕಾಲಿಡುತ್ತಿದ್ದಾರೆ. ಉಭಯ ಕುಟುಂಬಗಳ ಹಿನ್ನೆಲೆ ಹಾಗೂ ಸಮ್ಮತಿ ಈ ದಾಂಪತ್ಯಕ್ಕೆ ದೊರೆತಿದೆ.
ಅಮೀ‌ರ್ ಖಾನ್ ಅವರು ಈ ಹಿಂದೆ ರೀನಾ ದತ್ತಾ ಅವರನ್ನು ವಿವಾಹವಾಗಿದ್ದರು, ಈ ದಂಪತಿಗೆ ಜುನೈದ್ ಮತ್ತು ಇರಾ ಎಂಬ ಇಬ್ಬರು ಮಕ್ಕಳಿದ್ದಾರೆ. ಆ ಬಳಿಕ ಅವರು ಚಲನಚಿತ್ರ ನಿರ್ಮಾಪಕಿ ಬೆಂಗಳೂರಿನ ಕಿರಣ್ ರಾವ್ ಅವರನ್ನು ಕೈಹಿಡಿದಿದ್ದರು. ಕಿರಣ್ ಮತ್ತು ಅಮೀ‌ರ್ ಅವರಿಗೆ ಆಜಾದ್ ಎಂಬ ಮಗನಿದ್ದಾನೆ. 2021 ರಲ್ಲಿ ಕಿರಣ್ ರಾವ್ ಅವರಿಂದ ಅಮೀರ್ ಖಾನ್ ವಿಚ್ಛೇದನ ಪಡೆದಿದ್ದರು.

ಸಾರ್ವಜನಿಕ ವಲಯದಲ್ಲಿ ದಂಪತಿಗಳು ಹೇಗೆ ಅತ್ಯಂತ ಗೌರವಯುತವಾಗಿ ಹಾಗೂ ಪರಸ್ಪರ ಸೌಹಾರ್ದತೆಯಿಂದ ದೂರಾಗಬಹುದು ಎಂಬುದಕ್ಕೆ ಇವರ ಡಿವೋರ್ಸ್ ಒಂದು ಮಾದರಿಯಾಗಿತ್ತು. ಈ ಬಾರಿಯ ಮದುವೆಗೆ ಯಾವುದೇ ಪತ್ರಿಕಾಗೋಷ್ಠಿಗಳನ್ನು ಯೋಜಿಸಿಲ್ಲ, ಕ್ಯಾಮೆರಾಗಳಿಗಾಗಿ ಯಾವುದೇ ಅದ್ದೂರಿ ಪ್ರಕಟಣೆಗಳನ್ನೂ ಸಿದ್ಧಪಡಿಸಿಲ್ಲ. ಕೇವಲ ಇಬ್ಬರು ವ್ಯಕ್ತಿಗಳು, ಎರಡು ಕುಟುಂಬಗಳು ಮತ್ತು ಜುಲೈ 5 ರ ಆ ಒಂದು ದಿನದೊಂದಿಗೆ ಹೊಸ ಪಯಣ ನಿಶ್ಯಬ್ದವಾಗಿ ಆರಂಭವಾಗಲಿದೆ.

 

ನೂತನ ಸಚಿವರಿಗೆ ವೇದಿಕೆ ಮೇಲೆಯೇ ಖಡಕ್ ಕ್ಲಾಸ್ ತೆಗೆದುಕೊಂಡ ರಾಜ್ಯಪಾಲರು

TAGGED:Actor Aamir Khan married Bengaluru-based Gauri on June 5!
Share This Article
Facebook Twitter Copy Link Print
Previous Article No women ministers ಮಹಿಳಾಪರ ‘ಗ್ಯಾರಂಟಿ’ಗಳಿದ್ದರೂ ಡಿಕೆ ಸಂಪುಟದಲ್ಲಿ ಮಹಿಳೆಗಿಲ್ಲ ಸ್ಥಾನ!
Next Article ದೇಶದ ನಂಬರ್‌ 1 ಶ್ರೀಮಂತ ಮುಖ್ಯಮಂತ್ರಿಯಾದ ಡಿ.ಕೆ.ಶಿವಕುಮಾರ್‌

Popular Posts

US Iran War Updates | ಅಮೆರಿಕ–ಇರಾನ್ ಸಂಘರ್ಷ ಮತ್ತಷ್ಟು ತೀವ್ರ: 11ನೇ ರಾತ್ರಿ ಕೂಡ ವಾಯುದಾಳಿ, ರಾಜತಾಂತ್ರಿಕ ಪ್ರಯತ್ನಗಳಿಗೆ ಹಿನ್ನಡೆ

2 Min Read

Astrology ಇಂದು ದ್ವಿದ್ವಾದಶ ದೃಷ್ಟಿಯೋಗ, ಸಾಧ್ಯಯೋಗ, ಶುಭಯೋಗ: ಈ ರಾಶಿ ಜನರಿಗೆ ಧನ ಲಾಭ

4 Min Read

Add35 Government Schools in Uttara Kannada Report Zero Admissions ಉತ್ತರ ಕನ್ನಡ: 35 ಸರ್ಕಾರಿ ಶಾಲೆಗಳಲ್ಲಿ ಶೂನ್ಯ ದಾಖಲಾತಿ title

1 Min Read

Ravana’s statue ಮಂಡ್ಯ, ಮೈಸೂರು ಭಾಗದಲ್ಲಿ 35 ರಾವಣನ ವಿಗ್ರಹ ಪತ್ತೆ!

1 Min Read

You Might Also Like

ದೇಶಪ್ರಮುಖ

UPI revolution ಇಂಟರ್ನೆಟ್ ಇಲ್ಲದಿದ್ದರೂ ಯುಪಿಐ ಪಾವತಿ! ಕ್ರಾಂತಿಕಾರಕ ಬದಲಾವಣೆಗೆ ಸಿದ್ಧತೆ

4 Min Read
ಕರ್ನಾಟಕಪ್ರಮುಖ

CM D K Shivakumar Pressmeet | ಮತ್ತೆ ಮುಂದೂಡಿದ ಕರ್ನಾಟಕ ಸಚಿವ ಸಂಪುಟ ವಿಸ್ತರಣೆ

2 Min Read
ಪ್ರಮುಖದೇಶ

Maruti Suzuki ಆಗಸ್ಟ್‌ನಿಂದ ಮಾರುತಿ ಸುಜುಕಿ ಕಾರುಗಳ ಬೆಲೆ ದುಬಾರಿ

1 Min Read
ಪ್ರಮುಖದೇಶ

Digital Banking ಬ್ಯಾಂಕ್ ಅಕೌಂಟ್ ಹ್ಯಾಕ್ ಆಗಿದೆಯಾ? ಆತಂಕ ಬೇಡ, ತಕ್ಷಣ ಈ 5 ಕೆಲಸಗಳನ್ನು ಮಾಡಿ

2 Min Read

Social Networks

Facebook-f Instagram Twitter
Welcome Back!

Sign in to your account

Lost your password?