newsics.com/ನ್ಯೂಸಿಕ್ಸ್
ಬೆಂಗಳೂರು: ಬೆಂಗಳೂರಿನ ನಾಗರಬಾವಿ ಹೋಟೆಲ್ ನಲ್ಲಿ ಅಗ್ನಿ ಅವಘಡ ಸಂಭವಿಸಿ, ದಟ್ಟ ಹೊಗೆಯಿಂದ ಉಸಿರುಗಟ್ಟಿ ಒಬ್ಬರು ಮೃತಪಟ್ಟಿದ್ದು,ನಾಲ್ವರು ಗಾಯಗೊಂಡಿದ್ದಾರೆ.
https://youtube.com/shorts/gjYZnQ_VPsc?si=qVOf4mHBsp6RN8ZV
ಅಗ್ನಿ ಅವಘಡ ಕಾಣಿಸಿಕೊಂಡ ಹೋಟೆಲ್ ನಲ್ಲಿ ಐದು ಜನ ಸಿಲುಕಿದ್ದರು. ಭೀಮ, ಶಿವಾನಂದ, ಸತೀಶ್, ರಾಜಕುಮಾರ್ ಸೇರಿ ಐವರು ಹೊಗೆಯಲ್ಲಿ ಸಿಲುಕಿದ್ದರು.
ಐವರನ್ನು ರಕ್ಷಣೆ ಮಾಡಿ ಅಗ್ನಿಶಾಮಕ ದಳ ಸಿಬ್ಬಂದಿ ಆಸ್ಪತ್ರೆಗೆ ದಾಖಲಿಸಿದ್ದರು. ಚಿಕಿತ್ಸೆ ಫಲಿಸದೆ 45 ವರ್ಷದ ರಾಜಕುಮಾರ್ ಮೃತಪಟ್ಟಿದ್ದಾರೆ. ಉಳಿದ ನಾಲ್ವರಿಗೆ ಸ್ಥಳೀಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಮುಂದುವರೆದಿದೆ. ಹೆಚ್ಚಿನ ವಿವರ ನಿರೀಕ್ಷಿಸಲಾಗಿದೆ.
https://www.newsics.com/2026/05/09/heavy-rains-in-the-state-for-two-more-days-yellow-alert-declared/