newsics.com/ನ್ಯೂಸಿಕ್ಸ್
ಕೋಡಿಮಠ ಸಂಸ್ಥಾನದ ಡಾ. ಶಿವಾನಂದ ಶಿವಯೋಗಿ ರಾಜೇಂದ್ರ ಸ್ವಾಮೀಜಿಗಳು ಹೇಳುವ ಭವಿಷ್ಯವಾಣಿ ಅನೇಕ ಬಾರಿ ನಿಜವಾಗಿದೆ. ಅವರು ಭವಿಷ್ಯ ಹೇಳ್ತಾರೆ ಅಂದ್ರೆ ರಾಜಕಾರಣಿಗಳು ಭಯಪಡ್ತಾರೆ. ಇದೀಗ ಮತ್ತೊಂದು ಸ್ಪೋಟಕ ಭವಿಷ್ಯ ನುಡಿದಿದ್ದಾರೆ.
ಮುಂದಿನ ದಿನಗಳಲ್ಲಿ ದೇಶದಲ್ಲಿ ಅನ್ನ ಮತ್ತು ನೀರಿನ ತೀವ್ರ ಸಮಸ್ಯೆ ಎದುರಾಗಲಿದೆ ಎಂದು ಅವರು ಎಚ್ಚರಿಸಿದ್ದಾರೆ.
ಮದ್ದೂರು ತಾಲೂಕಿನ ಚಾಮನಹಳ್ಳಿ ಗ್ರಾಮದಲ್ಲಿ ಶನಿವಾರ ನಡೆದ ಶ್ರೀ ಬಂಡೆ ಶನೇಶ್ವರಸ್ವಾಮಿಯ ಜಾತ್ರಾ ಮಹೋತ್ಸವ ಹಾಗೂ ಮಹಾ ರಾಜಗೋಪುರ ಉದ್ಘಾಟನಾ ಸಮಾರಂಭದಲ್ಲಿ ಭಾಗವಹಿಸಿ ಅವರು ಮಾತನಾಡುತ್ತಿದ್ದರು.
ಹವಾಮಾನ ವೈಪರಿತ್ಯ ಮತ್ತು ಅಪಮೃತ್ಯುವಿನ ಭೀತಿ
ಅನ್ನ-ನೀರಿನ ಅಭಾವ: ಹವಾಮಾನ ವೈಪರಿತ್ಯದಿಂದಾಗಿ ದೇಶದಾದ್ಯಂತ ಆಹಾರ ಮತ್ತು ಕುಡಿಯುವ ನೀರಿಗೆ ಹಾಹಾಕಾರ ಉಂಟಾಗುವ ಸಾಧ್ಯತೆ ಇದೆ.
ಪ್ರಕೃತಿಯ ಏರುಪೇರು: ಪರಿಸರದಲ್ಲಿ ಅನಿರೀಕ್ಷಿತ ಬದಲಾವಣೆಗಳು ಸಂಭವಿಸಲಿದ್ದು, ಇದು ‘ಅಪಮೃತ್ಯು’ಗಳ (ಅಕಾಲಿಕ ಮರಣ) ಸಂಖ್ಯೆಯನ್ನು ಹೆಚ್ಚಿಸಲಿದೆ.
ರಾಜ್ಯಕ್ಕೆ ಸಮಾಧಾನದ ಸುದ್ದಿ: ದೇಶಾದ್ಯಂತ ಸಮಸ್ಯೆಗಳು ಕಂಡುಬಂದರೂ, ಕರ್ನಾಟಕಕ್ಕೆ ಯಾವುದೇ ರೀತಿಯ ದೊಡ್ಡ ಮಟ್ಟದ ಗಂಡಾಂತರಗಳು ಅಥವಾ ಸಮಸ್ಯೆಗಳು ಉಲ್ಬಣವಾಗುವುದಿಲ್ಲ ಎಂದು ಶ್ರೀಗಳು ಭರವಸೆ ನೀಡಿದ್ದಾರೆ.
ಶನೇಶ್ವರ ಸ್ವಾಮಿಯು ಪ್ರತಿಯೊಬ್ಬ ಮನುಷ್ಯನಿಗೂ ಗುರು ಸ್ಥಾನದಲ್ಲಿದ್ದು, ಸರಿ-ತಪ್ಪುಗಳನ್ನು ತಿದ್ದಿ ಸನ್ಮಾರ್ಗದಲ್ಲಿ ನಡೆಸುತ್ತಾನೆ. ಜನರಲ್ಲಿ ಹೆಚ್ಚುತ್ತಿರುವ ದೈವಾರಾಧನೆಯ ಫಲವಾಗಿ ಮಳೆ-ಬೆಳೆ ಉತ್ತಮವಾಗಿ ರಾಜ್ಯದ ಜನರು ಸಮೃದ್ಧ ಜೀವನ ನಡೆಸಲಿದ್ದಾರೆ ಎಂದು ಶ್ರೀಗಳು ಹರಸಿದರು.
https://www.newsics.com/2026/04/26/heavy-snowfall-srinagar-leh-national-highway-closed/