newsics.com
ಖ್ಯಾತ ಕಾಲಿವುಡ್ ನಟ, ಟಿವಿಕೆ ಮುಖ್ಯಸ್ಥ ದಳಪತಿ ವಿಜಯ್ ಅವರನ್ನು ಗೆಲ್ಲಿಸಬೇಡಿ, ಡಿಎಂಕೆ ಪಕ್ಷವನ್ನು ಬೆಂಬಲಿಸಿ ಎಂದು ನಟಿ ಜ್ಯೂಲಿ ನಾಮಫಲಕಗಳನ್ನು ಹಿಡಿದು ಪ್ರತಿಭಟನೆ ನಡೆಸಿದ್ದಾರೆ.
ಕಳೆದ ಕೆಲ ದಿನಗಳಿಂದ ವಿಜಯ್ ವಿರುದ್ಧ ಜ್ಯೂಲಿ ಕಮೆಂಟ್ ಮಾಡುತ್ತಿದ್ದಾರೆ. ಪೆರಂಬೂರ್ (ಚೆನ್ನೈ) ಮತ್ತು ತಿರುಚ್ಚಿ ಈಸ್ಟ್ ಕ್ಷೇತ್ರಗಳಲ್ಲಿ ವಿಜಯ್ ಸ್ಪರ್ಧಿಸಿದ್ದಾರೆ. ಪೆರಂಬೂರ್ ಕ್ಷೇತ್ರದಲ್ಲಿ ಗೆಲ್ಲಲೇಬೇಕು ಎಂದು ವಿಜಯ್ ಪಣ ತೊಟ್ಟಿದ್ದಾರೆ. ಅಲ್ಲಿಗೆ ಪ್ರಚಾರಕ್ಕೆ ಹೋಗುವ ಮುನ್ನ ಕೂಡ ಜ್ಯೂಲಿ ಮಾಡಿದ್ದ ಕಮೆಂಟ್ಸ್ ಎಲ್ಲರ ಗಮನ ಸೆಳೆದಿತ್ತು.
ವಿಜಯ್ ಪ್ರಚಾರಕ್ಕೆ ಬರ್ತಾರೆ ಎಂದು ಗೊತ್ತಾಗುತ್ತಿದ್ದಂತೆ “ನೀನು ನಾಳೆ ಬರ್ತಿದ್ದೀಯ.. ನಾನು ಇವತ್ತೇ ಶುರು ಮಾಡಿದ್ದೀನಿ ಅಣ್ಣ.. ಬಾ ನೋಡ್ಕೊಳ್ಳೋಣ” ಎಂದು ಜ್ಯೂಲಿ ಸವಾಲು ಹಾಕಿದ್ದ ವೀಡಿಯೋ ವೈರಲ್ ಆಗಿತ್ತು.
ಸದ್ಯ ಚೆನ್ನೈ ಮರೀನಾ ಬೀಚ್ ಅವ್ವೈಯಾರ್ ಪ್ರತಿಮೆ ಎದುರು ಜ್ಯೂಲಿ ವಿಜಯ್ ವಿರುದ್ಧ ಪ್ರತಿಭಟನೆ ಮಾಡಿರುವುದು ಭಾರೀ ಚರ್ಚೆಗೆ ಗ್ರಾಸವಾಗಿದೆ.
ಕೆಲವರ ಜತೆ ಸೇರಿ ವಿಜಯ್ ವಿರುದ್ಧ ನಾಮಫಲಕಗಳನ್ನು ಹಿಡಿದು ಆಕೆ ಪ್ರತಿಭಟನೆ ನಡೆಸಿ ವಿಜಯ್ ವಿರುದ್ಧ ಘೋಷಣೆ ಕೂಗಿದ್ದಾರೆ. ವಿಷಯ ತಿಳಿದ ಪೊಲೀಸರು ಸ್ಥಳಕ್ಕೆ ಆಗಮಿಸಿ ಆಕೆಯನ್ನು ವಶಕ್ಕೆ ಪಡೆದಿದ್ದಾರೆ.
ಚುನಾವಣೆ ಸಮಯದಲ್ಲಿ ಅನುಮತಿ ಇಲ್ಲದೇ ಹೀಗೆ ಪ್ರಚಾರ ಮಾಡುವಂತಿಲ್ಲ ಎಂದು ತಾಕೀತು ಮಾಡಿ ಆಕೆಯಿಂದ ಕ್ಷಮಾಪಣೆ ಪತ್ರ ಬರೆಸಿಕೊಂಡು ಕಳುಹಿಸಿದ್ದಾರೆ.
https://www.instagram.com/reel/DXHijCmkyuH/?igsh=N2lpcDZmMzViN25y
https://www.instagram.com/reel/DXHijCmkyuH/?igsh=N2lpcDZmMzViN25y
ಮಗು ಬೇಕಂದ್ರೆ ನಿನ್ನ ಹೆಂಡ್ತಿನ ನನ್ನ ಜತೆ ಕಳ್ಸು ಎಂದ ಟಿಸಿಎಸ್ ಬಾಸ್: ಐಟಿ ಉದ್ಯೋಗಿ ಹೇಳಿದ್ದೇನು?
40ರ ಅಂಟಿ ಪ್ರೇಮದಲ್ಲಿ ಬಿದ್ದು ಮನೆಬಿಟ್ಟು ಓಡಿ ಹೋದ 21ರ ಹರೆಯದ ಹುಡುಗ