https://youtube.com/shorts/cT9AQdRv8BA?si=HVgZ6-lH8mLj32-K
newsics.com
ಬೆಂಗಳೂರು : ತಮಿಳುನಾಡು ಸಿಎಂ ಪುತ್ರ ಉದಯಾನಿಧಿ ಮಗನ ಮೇಲಿನ ಸಿಟ್ಟಿಗೆ ಬೆಂಗಳೂರಿನ ಕಚೇರಿಗಳಿಗೆ ಬಾಂಬ್ ಬೆದರಿಕೆ ಮೇಲ್ ಬಂದಿದೆ.
13 ಸೈನಡ್ ಗ್ಯಾಸ್ ಪಾಯಿಸನ್ ಪ್ಲಾನ್ ಮಾಡಲಾಗಿದ್ದು, ಒಂದು ಗಂಟೆಯ ಹೊತ್ತಿಗೆ ಬ್ಲಾಸ್ಟ್ ಅಗಲಿದೆ ಎಂದು DRDO, GTRE ಕಚೇರಿಗಳಿಗೆ ಬಾಂಬ್ ಬೆದರಿಕೆ ಮೇಲ್ ಬಂದಿದೆ ಎಂದು ತಿಳಿದು ಬಂದಿದೆ.
Kiruthiha.udhayanidhi@hotmail ಎಂಬ ಐಡಿ ಮೂಲಕ DRDO, GTRE ಕಚೇರಿಗಳಿಗೆ ಬಾಂಬ್ ಬೆದರಿಕೆ ಮೇಲ್ ಬಂದಿದೆ. ಈ ಮೇಲ್ನಲ್ಲಿ ತಮಿಳುನಾಡು ಸಿಎಂ ಮೊಮ್ಮಗನನ್ನ ಕಿಡ್ನ್ಯಾಪ್ ಮಾಡೋದಾಗಿ ಬರೆದಿದ್ದಾರೆ. ಜೊತೆಗೆ ಉದಯಾನಿಧಿ ಮಗ ಇಂಬನಿಧಿಯನ್ನ ಕಿಡ್ನಾಪ್ ಮಾಡಿ, ಆತನಿಗೆ ಮಾರಣಾಂತಿಕ ಹಿಂಸೆ ನೀಡೋದಾಗಿಯೂ ಉಲ್ಲೇಖ ಮಾಡಿದ್ದಾರಂತೆ.
ಅಧಿಕಾರಿಗಳಿಂದ ಮೇಲ್ ಪರಿಶೀಲನೆ ನಡೆದಿದ್ದು, ಬಾಂಬ್ ಬೆದರಿಕೆ ಮೇಲ್ ಕಂಡು ಕೂಡಲೇ ಸ್ಥಳೀಯ ಪೊಲೀಸರಿಗೆ ಕರೆ ಮಾಡಿ ಕಚೇರಿ ಸಿಬ್ಬಂದಿ ಮಾಹಿತಿ ನೀಡಿದ್ದಾರೆ.
ಸ್ಥಳಕ್ಕೆ ಬೈಯಪ್ಪನಹಳ್ಳಿ ಪೊಲೀಸರು ಹಾಗೂ ಬಾಂಬ್ ಸ್ಕ್ವಾಡ್ ಭೇಟಿ ನೀಡಿದ್ದು ಪರಿಶೀಲನೆ ನಡೆಸಲಾಗ್ತಿದೆ. ಮೇಲ್ ಬಗ್ಗೆ ಪೊಲೀಸರು ತನಿಖೆ ನಡೆಸುತ್ತಿದ್ದು, ಅಪರಿಚಿತನಿಗಾಗಿ ಶೋಧ ನಡೆಸಿದ್ದಾರೆ.