newsics.com
ನಾಸಿಕ್ : ಸ್ವಯಂ ಘೋಷಿತ ದೇವಮಾನವ ನಾಸಿಕ್ನ ಅಶೋಕ್ ಖಾರಟ್ ಪ್ರಕರಣದ ತನಿಖೆಯಲ್ಲಿ ಕೆಲ ಸ್ಫೋಟಕ ತಿರುವು ಪಡೆದುಕೊಂಡಿದೆ.
100 ಮಹಿಳೆಯರ ಜೊತೆ ಗುರೂಜಿ ರಾಸಲೀಲೆ ಕೇಸ್ನಲ್ಲಿ ಮಹತ್ವದ ಬೆಳವಣಿಗೆ, ಪತ್ನಿ ಕಲ್ಪನಾ ನಾಪತ್ತೆ, ಸ್ವಯಂ ಘೋಷಿತ ದೇವಮಾನವ ಅರೆಸ್ಟ್ ಆದ ಬೆನ್ನಲ್ಲೇ ಸಚಿವರಿಗೆ ಕರೆ ಮಾಡಿ ಬಿಡಿಸುವ ಪ್ರಯತ್ನ ಮಾಡಿದ್ದ ಪತ್ನಿ ಈಗ ತಲೆಮರೆಸಿಕೊಂಡಿದ್ದಾರೆ.
ಸುನೀತಾ ಎಂದು ಗುರುತಿಸಿಕೊಂಡಿದ್ದ ಈಕೆ ಅಶೋಕ್ ಖಾರಟ್ ಮದುವೆಯಾದ ಬಳಿಕ ಕಲ್ಪನಾ ಆಗಿ ಹೆಸರು ಬದಲಾಯಿಸಿದ್ದಳು. ಅಶೋಕ್ ಖಾರಟ್ ಅಕ್ರಮಗಳಿಗೆ ಈಕೆಯೂ ಸಾಥ್ ನೀಡಿದ್ದಳು ಎಂಬ ಮಾತುಗಳಿವೆ.
ಅಶೋಕ್ ಖಾರಟ್ ಅರೆಸ್ಟ್ ಆದ ಬೆನ್ನಲ್ಲೇ ಪತ್ನಿ ಕಲ್ಪನಾ ಖಾರಟ್ ಪ್ರಕರಣದ ಗಂಭೀರತೆ ಅರಿತಿದ್ದರು. ಹೀಗಾಗಿ ಸಚಿವರಿಗೆ ಫೋನ್ ಮಾಡಿದ ಬೆನ್ನಲ್ಲೇ ಫೋನ್ ಸ್ವಿಚ್ ಆಫ್ ಮಾಡಿದ್ದರು. ಬಳಿಕ ಸಿಮ್ ಕಾರ್ಡ್ ಮನೆಯಲ್ಲೇ ಬಿಟ್ಟು ನಾಪತ್ತೆಯಾಗಿದ್ದಾಳೆ. ಇಬ್ಬರು ಮಕ್ಕಳನ್ನು ಮನೆಯಲ್ಲೇ ಬಿಟ್ಟು ಈಕೆ ತಲೆಮರೆಸಿಕೊಂಡಿದ್ದಾರೆ. ಪೊಲೀಸರ ತನಿಖೆ ಕುಟುಂಬಸ್ಥರು, ಅಶೋಕ್ ಖಾರಟ್ ಆಸ್ತಿ ಮೇಲೆ ತಿರುಗುವ ಮೊದಲೇ ಇದನ್ನು ಕಲ್ಪನಾ ಅರಿತಿದ್ದರು. ಹೀಗಾಗಿ ಗಂಡನ ಬಿಡಿಸುವ ಪ್ರಯತ್ನ ವಿಫಲವಾದ ಬೆನ್ನಲ್ಲೇ ಕಲ್ಪನಾ ಖಾರಟ್ ನಾಪತ್ತೆಯಾಗಿದ್ದಾಳೆ.
ಲ್ಯಾಂಡ್ ಕೇಸ್ ಹಾಗೂ ಅಶೋಕ್ ಖಾರಟ್ ಮಹಿಳೆಯರನ್ನು ಬಳಸಿಕೊಂಡ ಪ್ರಕರಣದಲ್ಲಿ ಕಲ್ಪನಾ ವಿಚಾರಣೆ ಅತ್ಯಂತ ಪ್ರಮುಖವಾಗಿದೆ.
https://www.newsics.com/2026/04/03/actress-khushboo-refuses-to-act-as-heroine-opposite-rajinikanth/