https://youtube.com/shorts/meQfr5hOsT4?si=–SvccKUHgJJVjWK
Subscribe ನ್ಯೂಸಿಕ್ಸ್ ಕನ್ನಡ
newsics.com
ಸವದತ್ತಿ: ಉತ್ತರ ಕರ್ನಾಟಕದ ಶಕ್ತಿ ದೇವತೆ ಸವದತ್ತಿ ರೇಣುಕಾ ಯಲ್ಲಮ್ಮನ ಗುಡ್ಡದಲ್ಲಿ ಸುರಿದ ಮಳೆ ಹಾಗೂ ಭಕ್ತರ ಅತಿಯಾದ ಜನದಟ್ಟಣೆಯಿಂದಾಗಿ ಪರಿಸರ ಮಲಿನವಾಗಿದೆ.
ದೇವಿಯ ಸನ್ನಿಧಾನ ಇಂದು ಕಸ, ಪ್ಲಾಸ್ಟಿಕ್ ಮತ್ತು ಹಳೆಯ ಬಟ್ಟೆಗಳ ರಾಶಿಯಿಂದ ತುಂಬಿ ಹೋಗಿದೆ. ಕಾಯಿಲೆಗಳು ವಾಸಿಯಾಗಲಿ ಅಥವಾ ಹರಕೆ ತೀರಲಿ ಎಂದು ಭಕ್ತರು ತಮ್ಮ ಹಳೆಯ ಬಟ್ಟೆಗಳನ್ನು ಗುಡ್ಡದ ಮೇಲೆ ಬಿಟ್ಟು ಹೋಗುವ ಪದ್ಧತಿ ಇದೆ.
ಲಕ್ಷಾಂತರ ರೂಪಾಯಿ ಕಾಣಿಕೆ ಸಂಗ್ರಹವಾಗುತ್ತಿದ್ದರೂ, ಕಸ ವಿಲೇವಾರಿಗೆ ಶಾಶ್ವತ ವ್ಯವಸ್ಥೆ ಇಲ್ಲ ಎಂದು ಭಕ್ತರು ದೂರಿದ್ದಾರೆ. ಪ್ರತಿದಿನ ಹತ್ತಾರು ಟನ್ ಕಸ ಉತ್ಪತ್ತಿಯಾಗುತ್ತಿದ್ದರೂ, ಅದನ್ನು ಸರಿಯಾದ ಸಮಯಕ್ಕೆ ವಿಲೇವಾರಿ ಮಾಡಲು ಸಮಿತಿ ವಿಫಲವಾಗಿದೆ. ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಸವದತ್ತಿ ಅಭಿವೃದ್ಧಿಗೆ 100 ರಿಂದ 200 ಕೋಟಿ ರೂ. ಅನುದಾನ ಘೋಷಿಸಿದ್ದರೂ ಪರಿಸ್ಥಿತಿ ಸುಧಾರಿಸಿಲ್ಲ.