Newsics
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
NewsicsNewsics
Font ResizerAa
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
  • ಲೈಫ್‌ಸ್ಟೈಲ್
  • ಅನಾವರಣ
Search
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
Follow US
Newsics > Blog > ಕರ್ನಾಟಕ > ಹಳೆ ಪ್ರಕರಣಕ್ಕೆ ಮರುಜೀವ; ಮೌಲ್ವಿ ಅರೆಸ್ಟ್
ಕರ್ನಾಟಕಪ್ರಮುಖ

ಹಳೆ ಪ್ರಕರಣಕ್ಕೆ ಮರುಜೀವ; ಮೌಲ್ವಿ ಅರೆಸ್ಟ್

Share
2 Min Read
SHARE

Subscribe ನ್ಯೂಸಿಕ್ಸ್ ಕನ್ನಡ

newsics.com

2೦22ರಲ್ಲಿ ಲಕ್ಕುಂಡಿ ಗ್ರಾಮದಲ್ಲಿ ಅಪಾರ ಪ್ರಮಾಣದ ಚಿನ್ನದ ಸಂಪತ್ತು ಸಿಕ್ಕಿದ್ದು, ಅದನ್ನು ಮಾರಾಟ ಮಾಡಲು ಸಂಚು ರೂಪಿಸಲಾಗಿತ್ತು. ಅಂದು ನಿಧಿ ಶೋಧ ಮಾಡಿದ್ದ ಮಾಸ್ಟರ್ ಮೈಂಡ್ನನ್ನು ಇದೀಗ ಪೊಲೀಸರು ಅರೆಸ್ಟ್ (Arrest) ಮಾಡಿದ್ದು, ಆ ಮೂಲಕ ಚಿನ್ನದ ನಿಧಿಯ ಅಸಲಿ ಸತ್ಯ ಬಯಲಿಗೆಳೆದಿದ್ದಾರೆ.
ಲಕ್ಕುಂಡಿ ಗ್ರಾಮದ ರಿತ್ತಿ ಕುಟುಂಬದ ಮನೆಯ ಪಾಯ ಮುಚ್ಚುವ ವೇಳೆ 455 ಗ್ರಾಂ ಚಿನ್ನದ ನಿಧಿ ಸಿಕ್ಕಿದೆ. ಈ ವಿಚಾರ ದೇಶ ಸೇರಿದಂತೆ ವಿದೇಶದಲ್ಲಿ ಭಾರೀ ಸುದ್ದಿ ಮಾಡಿದೆ. ಇದೇ ವೇಳೆ ಹಳೆ ಪ್ರಕರಣವೊಂದು ಮರು ಜೀವ ಪಡೆದುಕೊಂಡಿದೆ. 2022ರಲ್ಲಿ ಧಾರವಾಡ ನಿವಾಸಿ ಬಸೀರಾಬೇಗಂ ಅವರು ಗದಗ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ನಿಧಿ ಆಸೆ ತೋರಿಸಿ ವಂಚಿಸಿರುವುದಾಗಿ ದೂರು ನೀಡಿದ್ದರು. ಆಗ ಪೊಲೀಸರು ಆ ಪ್ರಕರಣವನ್ನು ಗಂಭೀರವಾಗಿ ತೆಗೆದುಕೊಳ್ಳದೆ ಕೈಬಿಟ್ಟಿದ್ದರು.
ಲಕ್ಕುಂಡಿಯಲ್ಲಿ ನಿಧಿ ಸಿಕ್ಕ ಬೆನ್ನಲ್ಲೇ, 2026 ಫೆಬ್ರವರಿ 11ರಂದು ಸಮಾಜ ಸೇವಕ ಪೀರಸಾಬ್ ಗೌತಾಳ ಎನ್ನುವವರು, ಸರ್ಕಾರಕ್ಕೆ ಸೇರಬೇಕಾದ ನಿಧಿ ಕಂಡವರ ಪಾಲಾಗಿದೆ ಎಂದು ದೂರು ನೀಡಿದ್ದರು. ಆಗ ಎಸ್ಪಿ ರೋಹನ್ ಜಗದೀಶ್ ತಂಡ ರಚನೆ ಮಾಡಿ ತನಿಖೆ ನಡೆಸಿದ್ದರು. ಆ ವೇಳೆ ಹಂಡೆಯಲಿ ಚಿನ್ನ ಇರುವ ವಿಡಿಯೋ ಕೂಡ ನೀಡಿದ್ರು. ಮತ್ತೊಮ್ಮೆ ಪೊಲೀಸರು ಪ್ರಕರಣವನ್ನು ದಾಖಲಿಸಿಕೊಂಡು ತನಿಖೆ ನಡೆಸಿದ್ದಾರೆ. ಉತ್ತರಾಖಂಡದ ಹಜರತ್ ಎನ್ನುವವನನ್ನ ಪೊಲೀಸರು ವಶಕ್ಕೆ ಪಡೆದು ವಿಚಾರಣೆ ಮಾಡಿದ್ದು, ಈ ವೇಳೆ ಅದು ನಕಲಿ ಚಿನ್ನ ಎನ್ನುವ ಸತ್ಯ ಬಹಿರಂಗವಾಗಿದೆ. 2022 ರಲ್ಲಿ ಗದಗ ನಗರದಲ್ಲಿ ಒಂದು ಹಂಡೆ ಖರೀದಿ ಮಾಡಿದ್ದಾನೆ, ನಂತರ ಮತ್ತೊಂದು ಅಂಗಡಿಯಲ್ಲಿ ಗೋಲ್ಡ್ ಬಣ್ಣದ ಬಿಸ್ಕೆಟ್ ಖರೀದಿ ಮಾಡಿ, ಇದೇ ನಿಧಿಯಂದು ತೋರಿಸಿದ್ದ. ಆ ವಿಡಿಯೋ ಇಟ್ಟುಕೊಂಡು ಸಾಕಷ್ಟು ಜನರಿಗೆ ಮೋಸ ಮಾಡಿದ್ದ ಎಂದು ಎಸ್ಪಿ ಹೇಳಿದ್ದಾರೆ.
22 ಲಕ್ಷ ರೂ. ಹಣ ಸುಲಿಗೆ
ಧಾರವಾಡ ನಿವಾಸಿಯಾದ ಬಸೀರಾಬೇಗಂ ಅವರು ವ್ಯಾಪಾರಸ್ಥರು. ಲಕ್ಕುಂಡಿ ಗ್ರಾಮದ ಸಣ್ಣ ಬಸಪ್ಪ ಹಾಗೂ ದೊಡ್ಡ ಬಸಪ್ಪ ಪಶು ಆಹಾರ ಖರೀದಿ ‌ಮಾಡಲು ಹೋಗಿದ್ದಾಗ, ಆ ಸಮಯದಲ್ಲಿ ಗ್ಯಾಸ್ ಹಾಕಿಸಿಕೊಳ್ಳಲು ಬಂದಿದ್ದ ಉತ್ತರಾಖಂಡದ ಹಜರತ್ ಪರಿಚಯ ಆಗುತ್ತೆ. ಈ ವೇಳೆ ಹಜರತ್ ನಾನು ನಿಧಿ ಶೋಧ ಮಾಡುತ್ತೇನೆ ಅಂತಾ ಹೇಳಿದ್ದಾನೆ. ಹಜರತ್ ನಿಧಿ ಸಿಕ್ಕ ಮೇಲೆ ಸಾಕಷ್ಟು ಹಣ ಬರುತ್ತದೆ ಎಂದು ನಂಬಿಸಿದ್ದ. ಹೀಗಾಗಿ ಪ್ರಮುಖ ಆರೋಪಿ ಹಜರತ್ ಉತ್ತರಾಖಂಡದಿಂದ ಬರಲು ಆತನ ಖರ್ಚು ವೆಚ್ಚ ಅಂತಾ ಮಹಿಳೆಯೊಬ್ಬರಿಂದ ಸುಮಾರು 22 ಲಕ್ಷ ರೂ. ಹಣ ಸುಲಿಗೆ ‌ಮಾಡಿದ್ದಾರೆ. ಇದು ಎಫ್ಐಆರ್ನಲ್ಲಿ ಕೂಡ ಉಲ್ಲೇಖವಾಗಿದೆ.
ಪ್ಲಾನ್ ಮಾಡಿ‌ ಒಂದು ದಿನ ಲಕ್ಕುಂಡಿ ಗ್ರಾಮಕ್ಕೆ ಹಜರತ್ ಬಂದು, ಗದಗನಲ್ಲಿ ಹಂಡೆ ಖರೀದಿ ಮಾಡಿ, ಗೋಲ್ಡ್ ಬಣ್ಣದ ನಕಲಿ ಬಿಸ್ಕೆಟ್ ಇಟ್ಟು, ಸಣ್ಣ ಬಸಪ್ಪ ಹಾಗೂ ದೊಡ ಬಸಪ್ಪ ಅವರ ಜಮೀನಿನಲ್ಲಿ ನಿಧಿ ಶೋಧ ಮಾಡಿದ ಹಾಗೇ ನಾಟಕ ಮಾಡಿದ್ದ. ಸಣ್ಣ ಬಸಪ್ಪನಿಗೆ 20 ಲಕ್ಷ ರೂ ಹಣ ಕೊಡು ಈ ನಿಧಿ ನಿನಗೆ ಕೊಡುತ್ತೇನೆ ಅಂತಾ ಹೇಳಿದ್ದ. ಆಗ ಸ್ವಲ್ಪ ವೈಮನಸ್ಸು ಉಂಟಾಗಿದೆ. ನಿಧಿ ಶೋಧ ಮಾಡಲು ಬಂದ ಹಜರತ್ ಅದನ್ನು ಕಾಲಿನಿಂದ ಒದ್ದು ಆಗ ಆ ಚಿನ್ನವು ಮಣ್ಣಾಗಿದೆ ಎಂದು ವಂಚನೆ ಮಾಡಿ‌ ಎಸ್ಕೇಪ್ ಆಗಿದ್ದಾನೆ. ಈವಾಗ ಪೊಲೀಸರು ಕಿಂಗ್ ಪಿನ್ನನ್ನ ಅರೆಸ್ಟ್ ಮಾಡಿದ್ದು, ಪೊಲೀಸರು ಹೆಚ್ಚಿನ ತನಿಖೆಯನ್ನು ನಡೆಸುತ್ತಿದ್ದಾರೆ.

ಮುಂಡಗೋಡ ಅರಣ್ಯದಲ್ಲಿ ರುಂಡವಿಲ್ಲದ ಬೆತ್ತಲೆ ಮಹಿಳೆಯ ಶವ ಪತ್ತೆ!

TAGGED:Old case revived; cleric arrested
Share This Article
Facebook Twitter Copy Link Print
Previous Article ರಾಜಕೀಯಕ್ಕೆ ಎಂಟ್ರಿ ಕೊಟ್ಟ ಬಿಗ್ ಬಾಸ್ ವಿನ್ನರ್; ಯಾವ ಪಕ್ಷ?
Next Article ಮುಂಡಗೋಡ ಅರಣ್ಯದಲ್ಲಿ ರುಂಡವಿಲ್ಲದ ಬೆತ್ತಲೆ ಮಹಿಳೆಯ ಶವ ಪತ್ತೆ!

Popular Posts

GOOD MORNING | Today’s Horoscope ಇಂದಿನ ಪಂಚಾಂಗ/ ರಾಶಿ ಭವಿಷ್ಯ, 11-06-2026, ಗುರುವಾರ

4 Min Read

Heavy Rain 5 ದಿನಗಳ ಕಾಲ ರಾಜ್ಯಾದ್ಯಂತ ಬಿರುಗಾಳಿ ಸಹಿತ ಭಾರೀ ಮಳೆ, ಆರೆಂಜ್, ಯೆಲ್ಲೋ ಅಲರ್ಟ್ ಘೋಷಣೆ

1 Min Read

Kangana Ranaut ರೇಷ್ಮೆ ಪೈಠಣಿ ಸೀರೆಯಲ್ಲಿ ಮಿಂಚಿದ ಕಂಗನಾ ರಣಾವತ್

1 Min Read

PM Narendra Modi ಮಧ್ಯಮ ವರ್ಗದವರು ಯಾವುದೇ ಕಾರಣಕ್ಕೂ ಹಿಂದುಳಿಯದಂತೆ ನಾವು ಹಗಲಿರುಳು ಶ್ರಮಿಸಬೇಕು : NDA ಸಮಾವೇಶದಲ್ಲಿ ಪ್ರಧಾನಿ ಮೋದಿ

1 Min Read

You Might Also Like

ಪ್ರಮುಖಲೈಫ್‌ಸ್ಟೈಲ್

Numerology ನಿಮ್ಮ ಮೊಬೈಲ್ ನಂಬರ್​​ನ ಕೊನೆಯ ಎರಡು ಸಂಖ್ಯೆ ಯಾವುದಿರಬೇಕು?

2 Min Read
ಕರ್ನಾಟಕದೇಶಪ್ರಮುಖ

Gold Rate ಆಭರಣ ಪ್ರಿಯರಿಗೆ ಭರ್ಜರಿ ಗುಡ್‌ನ್ಯೂಸ್ : ಚಿನ್ನದ ದರ ಭಾರಿ ಇಳಿಕೆ ಬೆಳ್ಳಿ ಬೆಲೆಯಲ್ಲಿ ಬರೋಬ್ಬರಿ ₹10,000 ದಾಖಲೆಯ ಕುಸಿತ

1 Min Read
ದೇಶಪ್ರಮುಖ

ಮಮತಾ ಬ್ಯಾನರ್ಜಿಗೆ ಮತ್ತೊಂದು ಶಾಕ್ : ಟಿಎಂಸಿ ರಾಜ್ಯಸಭಾ ಸಂಸದೆ ಸುಷ್ಮಿತಾ ದೇವ್ ರಾಜೀನಾಮೆ

1 Min Read
ಕರ್ನಾಟಕಪ್ರಮುಖ

ವಾರದೊಳಗೆ 200 ವೈದ್ಯರ ಖಾಯಂ ನೇಮಕಾತಿಗೆ ಯು.ಟಿ. ಖಾದರ್ ಆದೇಶ

1 Min Read

Social Networks

Facebook-f Instagram Twitter
Welcome Back!

Sign in to your account

Lost your password?