https://youtube.com/shorts/11hvM0bsJ2E?si=Q5TtqzkdIZKrnxiz
Subscribe ನ್ಯೂಸಿಕ್ಸ್ ಕನ್ನಡ
newsics.com
ಸುಮಾರು 30 ಲಕ್ಷಕ್ಕೂ ಅಧಿಕ ಚಿನ್ನಾಭರಣ ಧರಿಸಿ ಮದುವೆಗೆ ಬಂದಿದ್ದ ಮಹಿಳೆ ನಾಪತ್ತೆ ಪ್ರಕರಣಕ್ಕೆಇದೀಗ ಬಿಗ್ ಟ್ವಿಸ್ಟ್ ಸಿಕ್ಕಿದೆ. ಗುರುವಾರ ರಾತ್ರಿ ನಾಪತ್ತೆಯಾಗಿದ್ದ ಮಹಿಳೆ ಕುಣಿಗಲ್ನಲ್ಲಿ ಪತ್ತೆಯಾಗಿದ್ದಾರೆ.
ಚಿಕ್ಕಮಗಳೂರು ಬಳಿ ಕುಣಿಗಲ್ ಮೂಲದ ಮಹಿಳೆ ಪ್ರಿಯಾಂಕ, ಡೇವಿಡ್ ಎಂಬುವನ ಜೊತೆಗೆ ಸಿಕ್ಕಿಬಿದ್ದಿದ್ದಾರೆ. ಬೇಲೂರು ಪೊಲೀಸರು ಮಹಿಳೆ ಮತ್ತು ಡೇವಿಡ್ನನ್ನ ಕರೆದೊಯ್ಯುತ್ತಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.
ನಿಗೂಢರೀತಿಯಲ್ಲಿಕಣ್ಮರೆಯಾಗಿದ್ದಮಹಿಳೆ
ತುಮಕೂರು ಜಿಲ್ಲೆ ಕುಣಿಗಲ್ನಿಂದ ಚಿಕ್ಕಮಗಳೂರು ಮದುವೆಗೆ ಬಂದಿದ್ದ ಮಹಿಳೆ ಪ್ರಿಯಾಂಕ ನಿಗೂಢವಾಗಿ ಕಣ್ಮರೆಯಾಗಿದ್ದರು. ಹಾಸನ ತಾಲ್ಲೂಕಿನ ಕಲ್ಕೆರೆ ಬಳಿ ಮಹಿಳೆಯ ಸಂಪೂರ್ಣ ಉಡುಪು ಪತ್ತೆಯಾಗಿತ್ತು. ಮಹಿಳೆಯ ಚಪ್ಪಲಿ, ವ್ಯಾನಿಟಿ ಬ್ಯಾಗ್ ಪತ್ತೆಯಾಗಿತ್ತು. ಇದಷ್ಟೇ ಅಲ್ಲದೇ ಮಹಿಳೆಯ ಬಳಿ ಸುಮಾರು 30 ಲಕ್ಷ ಚಿನ್ನಾಭರಣ ಇತ್ತು ಎನ್ನಲಾಗಿತ್ತು. ಒಡವೆ ಸಮೇತ ಮಹಿಳೆ ನಾಪತ್ತೆಯಾಗಿದ್ದರು. ಮಹಿಳೆ ಮೇಲಿದ್ದ ಒಡವೆಗಾಗಿ ಅತ್ಯಾಚಾರ ಎಸಗಿ ಕೊಲೆ ಮಾಡಿರೊ ಆರೋಪ ಕೂಡ ಕೇಳಿ ಬಂದಿತ್ತು.
ಪೊಲೀಸರಿಗೆ ತಲೆ ನೋವಾಗಿ ಪರಿಣಮಿಸಿದ್ದ ಕೇಸ್
ಮಹಿಳೆ ನಾಪತ್ತೆ ಬಗ್ಗೆ ದೂರು ಬರ್ತಿದ್ದಂತೆ ಪೊಲೀಸರು ಫುಲ್ ಅಲರ್ಟ್ ಆಗಿದ್ದರು. ಮಹಿಳೆಯನ್ನು ಕೊಲೆಯಾಗಿದೆ ಶಂಕಿಸಿ ಡ್ರೋನ್ ಬಳಸಿ ಕಾರ್ಯಾಚರಣೆಗೂ ಪೊಲೀಸರು ಮುಂದಾಗಿದ್ದರು. ಅಷ್ಟೇ ಅಲ್ಲದೇ ಬೇಲೂರು ಪೊಲೀಸರ ವಿರುದ್ಧ ಸಂಬಂಧಿಕರ ಆಕ್ರೋಶ ಕೂಡ ವ್ಯಕ್ತಪಡಿಸಿದ್ದರು.
ರಾತ್ರೋ ರಾತ್ರಿ ಕೆರೆಯಲ್ಲಿ ಮುಳುಗು ತಜ್ಞರಿಂದ ಶೋಧ
ಇನ್ನು ಇದೇ ಪ್ರಕರಣಕ್ಕೆ ಸಂಬಂಧಪಟ್ಟಂತೆ ಖ್ಯಾತ ಮುಳುಗು ತಜ್ಞ ಈಶ್ವರ್ ಮಲ್ಪೆ ತಂಡದಿಂದ ಕೆರೆಯಲ್ಲಿ ಶೋಧಕಾರ್ಯ ಕೂಡ ನಡೆಸಲಾಗಿತ್ತು. ಬೆಳಿಗ್ಗೆಯಿಂದ ಸಂಜೆವರೆಗೂ ಅಗ್ನಿಶಾಮಕ ಸಿಬ್ಬಂದಿ ಕೆರೆಯಲ್ಲಿ ಶೋಧ ಕಾರ್ಯ ನಡೆಸಿದ್ದರು. ಇಡೀ ದಿನ ಶೋಧ ನಡೆಸಿದರೂ ಕೂಡ ಮಹಿಳೆಯ ಸುಳಿವು ಪತ್ತೆಯಾಗಿರಲಿಲ್ಲ. ಕೊಲೆ ಮಾಡಿ ಕೆರೆಯಲ್ಲಿ ಎಸೆಯಲಾಗಿದೆ ಎನ್ನೋ ಅನುಮಾನದಲ್ಲಿ ಶೋಧ ಕಾರ್ಯ ನಡೆಸಲಾಗಿತ್ತು.
ಆದ್ರೀಗ ಮಹಿಳೆ ಜೀವಂತವಾಗಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ. ನಿಗೂಢ ರೀತಿಯಲ್ಲಿ ಕಣ್ಮರೆಯಾಗಿ ಪೊಲೀಸ್ ಇಲಾಖೆಯ ದಿಕ್ಕೆಡಿಸಿದ್ದ ಮಹಿಳೆ ವ್ಯಕ್ತಿಯೊಬ್ಬನ ಜೊತೆ ಪತ್ತೆಯಾಗಿದ್ದಾರೆ. ಸದ್ಯ ಬೇಲೂರು ಪೊಲೀಸರು ಇಬ್ಬರನ್ನು ವಶಕ್ಕೆ ಪಡೆದು ವಿಚಾರಣೆ ಮುಂದುವರಿಸಿದ್ದಾರೆ.