https://youtube.com/shorts/Z1cy8EQaCVE?si=-_cWMt02yPVoM0xd
Subscribe ನ್ಯೂಸಿಕ್ಸ್ ಕನ್ನಡ
newsics.com
ಬಾಂಗ್ಲಾದೇಶದಲ್ಲಿ ತಾರೀಖ್ ರೆಹಮಾನ್ ನೇತೃತ್ವದ ಈ ಬಾಂಗ್ಲಾದೇಶ್ ನ್ಯಾಷನಲ್ ಪಾರ್ಟಿಯ ಗೆಲುವಿನಿಂದ ಭಾರತದ ಮೇಲಾಗುವ ಪರಿಣಾಮ ಏನು ಎಂಬುದರ ಬಗ್ಗೆ ಮಾಹಿತಿ ಇಲ್ಲಿದೆ.
ಪ್ರಧಾನಿ ನರೇಂದ್ರ ಮೋದಿ, ರೆಹಮಾನ್ ಮತ್ತು ಅವರ ಬಿಎನ್ಪಿಗೆ ಅಭಿನಂದನೆ ಸಲ್ಲಿಸಿ ನಿಮ್ಮ ನಾಯಕತ್ವದ ಮೇಲೆ ಬಾಂಗ್ಲಾದೇಶದ ಜನರು ಇಟ್ಟಿರುವ ನಂಬಿಕೆಯನ್ನು ಈ ಗೆಲುವು ತೋರಿಸುತ್ತದೆ. ಭಾರತವು ಪ್ರಜಾಪ್ರಭುತ್ವ, ಪ್ರಗತಿಪರ ಮತ್ತು ಎಲ್ಲರನ್ನೂ ಒಳಗೊಂಡ ಬಾಂಗ್ಲಾದೇಶವನ್ನು ಬೆಂಬಲಿಸುತ್ತದೆ ಎಂದು ಅವರು ರೆಹಮಾನ್ ಮತ್ತು ಅವರ ಆಡಳಿತಕ್ಕೆ ಭರವಸೆ ನೀಡಿದರು. ಪ್ರಧಾನಿ ಅವರ ಈ ಸಂದೇಶದಲ್ಲಿ ಒಂದು ಒಳಾರ್ಥವಿದೆ. ಬಾಂಗ್ಲಾದೇಶವೂ ಚೀನಾ ಮತ್ತು ಪಾಕಿಸ್ತಾನದೊಂದಿಗೆ ಚೆಲ್ಲಾಟವಾಡುತ್ತಿರುವುದರಿಂದ ಅಲ್ಲಿ ಉಂಟಾದ ಅನಿಶ್ಚಿತತೆ ಮತ್ತು ಹಿಂದೂ ಅಲ್ಪಸಂಖ್ಯಾತರ ಹತ್ಯೆ ಸೇರಿದಂತೆ ಕಳೆದ 18 ತಿಂಗಳ ಕ್ರಾಂತಿಯನ್ನು ಗಮನದಲ್ಲಿಟ್ಟುಕೊಂಡು ಈ ಅಭಿನಂದನೆ ಸಲ್ಲಿಸಲಾಗಿದ್ದು, ದಶಕಗಳಷ್ಟು ಹಳೆಯದಾದ ಮಿತ್ರ ರಾಷ್ಟ್ರವು ತನ್ನ ಪಕ್ಕದಲ್ಲಿ ಉಳಿಯುವುದನ್ನು ಖಾತ್ರಿಪಡಿಸುವ ಸ್ಥಿರವಾದ ಸಂಬಂಧವನ್ನು ಸ್ಥಾಪಿಸಲು ಭಾರತ ಬಯಸುತ್ತದೆ ಎಂಬಾರ್ಥವನ್ನು ಪ್ರಧಾನಿಯವರ ಸಂದೇಶ ನೀಡುತ್ತಿದೆ ಎಂದು ವಿಶ್ಲೇಷಿಸಲಾಗುತ್ತಿದೆ.
ಬಾಂಗ್ಲಾದೇಶದಲ್ಲಿ ಹೊಸ ಸರ್ಕಾರದ ಈ ಬದಲಾವಣೆಯು ದಕ್ಷಿಣ ಏಷ್ಯಾ ಮತ್ತು ಅದರಾಚೆಗಿನ ಪ್ರಾದೇಶಿಕ ಭೌಗೋಳಿಕ ರಾಜಕೀಯವನ್ನು ಬದಲಾಯಿಸಬಹುದು ಮತ್ತು ರಾಷ್ಟ್ರೀಯ ಭದ್ರತೆಯ ಮೇಲೆ ಪರಿಣಾಮ ಬೀರಬಹುದು ಎಂಬ ಕಾರಣದಿಂದಾಗಿ ಭಾರತವು ಈ ಚುನಾವಣೆಯನ್ನು ಸೂಕ್ಷ್ಮವಾಗಿ ಗಮನಿಸಿದೆ. ಭಾರತದ ದೃಷ್ಟಿಕೋನದಲ್ಲಿ ಮೂರು ಅಂತರ್-ಸಂಪರ್ಕಿತ ಸಮಸ್ಯೆಗಳಿವೆ, ಅವುಗಳಲ್ಲಿ ದೊಡ್ಡದು ಸಂಭಾವ್ಯ ಪಾಕಿಸ್ತಾನ-ಚೀನಾ-ಬಾಂಗ್ಲಾದೇಶ ಅಕ್ಸಿಸ್(ದಕ್ಷಿಣ ಏಷ್ಯಾದಲ್ಲಿ ಭಾರತದ ಪ್ರಭಾವವನ್ನು ಎದುರಿಸಲು ವಿನ್ಯಾಸಗೊಳಿಸಲಾದ ಮೂರು ರಾಷ್ಟ್ರಗಳ ನಡುವೆ ಬೆಳೆಯುತ್ತಿರುವ ಕಾರ್ಯತಂತ್ರ, ಆರ್ಥಿಕ ಮತ್ತು ಮಿಲಿಟರಿ ಹೊಂದಾಣಿಕೆ) ರೆಹಮಾನ್ ಅವರ ಮುಂಬರುವ ಆಡಳಿತವು ಹಸೀನಾ ನೇತೃತ್ವದ ಸರ್ಕಾರಕ್ಕಿಂತ ವ್ಯತಿರಿಕ್ತವಾದ ದೆಹಲಿಯನ್ನು ವಿರೋಧಿಸುವ ವಿದೇಶಾಂಗ ನೀತಿಯನ್ನು ಹೊಂದಿದ್ದರೆ ಭಾರತಕ್ಕೆ ಈ ಸಮಸ್ಯೆ ಎದುರಾಗುವ ಸಾಧ್ಯತೆಯಾಗಿದೆ. ಪಾಕ್-ಚೀನಾ-ಬಾಂಗ್ಲಾದೇಶದ ಮೈತ್ರಿ ದಕ್ಷಿಣ ಏಷ್ಯಾದ ಮೇಲಿನ ಭಾರತದ ಹಿಡಿತವನ್ನು ದುರ್ಬಲಗೊಳಿಸಬಹುದು.
ಬಾಂಗ್ಲಾದೇಶಿಗರ ಅಕ್ರಮ ವಲಸೆ (ಮತ್ತು ದೇಶೀಯ ರಾಜಕೀಯದ ಮೇಲಿನ ಪರಿಣಾಮ, ವಿಶೇಷವಾಗಿ ಬಂಗಾಳ ಮತ್ತು ಅಸ್ಸಾಂ ಚುನಾವಣೆಗಳಿಗೆ ಮೊದಲು), ಮತ್ತು ಶೇಖ್ ಹಸೀನಾ ಅವರ ಪತನದ ನಂತರ ಭುಗಿಲೆದ್ದ ಹಿಂದೂ ವಿರೋಧಿ ಭಾವನೆಗಳಂತಹ ಕಳವಳಗಳಿಂದ ಉದ್ಭವಿಸುವ ಗಡಿ ಮತ್ತು ಆಂತರಿಕ ಭದ್ರತಾ ಪರಿಣಾಮಗಳು ಸಹ ಇದರಲ್ಲಿ ಸೇರಿವೆ. ಹಾಗೆಯೇ ವ್ಯಾಪಾರವು ಪ್ರಮುಖ ಪಾತ್ರ ವಹಿಸುತ್ತದೆ. ಬಾಂಗ್ಲಾದೇಶದ ಸಿದ್ಧ ಉಡುಪು ಉದ್ಯಮಕ್ಕೆ 80 ಪ್ರತಿಶತಕ್ಕಿಂತ ಹೆಚ್ಚಿನ ಕಚ್ಚಾ ಹತ್ತಿಯನ್ನು ಭಾರತ ಪೂರೈಸುತ್ತಿದೆ, ಇದು ಅದರ ರಾಷ್ಟ್ರೀಯ ಆರ್ಥಿಕತೆಯ ಪ್ರಮುಖ ಚಾಲಕವಾಗಿದೆ, ಆದರೂ ಮೇಲಿನ ಮೂರಕ್ಕಿಂತ ಕಡಿಮೆ ಪ್ರಾಮುಖ್ಯತೆಯನ್ನು ಹೊಂದಿದ್ದರೂ ವ್ಯಾಪಾರವು ಸಹ ಪರಿಗಣಿಸಬೇಕಾದ ಅಂಶವಾಗಿದೆ.
ಹಸೀನಾ ಅಧಿಕಾರದಲ್ಲಿದ್ದಾಗ ದೆಹಲಿ ಮತ್ತು ಢಾಕಾ ಸ್ಥಿರವಾದ ಸಂಬಂಧವನ್ನು ಹೊಂದಿದ್ದವು. ಉಚ್ಛಾಟನೆಯ ನಂತರ ಬಾಂಗ್ಲಾದೇಶದಲ್ಲಿ ದೇಶದ್ರೋಹದ ಆರೋಪದ ಮೇಲೆ ಮರಣದಂಡನೆ ಶಿಕ್ಷೆಗೆ ಗುರಿಯಾಗಿರುವ ಶೇಕ್ ಹಸೀನಾ ಅವರು ತಾವು ಪ್ರಧಾನಿಯಾಗಿದ್ದಾಗ ವ್ಯಾಪಾರ, ಸಾರಿಗೆ, ಗಡಿ ಭದ್ರತೆ ಮತ್ತು ನೀರು ಹಂಚಿಕೆ ಒಪ್ಪಂದಗಳ ಮೇಲೆ ಕೇಂದ್ರೀಕರಿಸಿದ ಭಾರತ ಪರ ಸರ್ಕಾರವನ್ನು ನಡೆಸುತ್ತಿದ್ದರು. ಭಾರತ ಬಾಂಗ್ಲಾದೇಶದಲ್ಲಿ ಶೇಕ್ ಹಸೀನಾ ಅಧಿಕಾರ ಹಿಡಿಯಬೇಕು ಎಂದು ಬಯಸಿದ್ದರು. ಭೌಗೋಳಿಕ ರಾಜಕೀಯ ವಿಶ್ಲೇಷಕರು ಭಾರತ ಸರ್ಕಾರವು ಢಾಕಾದಲ್ಲಿ ಶೀಘ್ರದಲ್ಲೇ ಅಧಿಕಾರದ ಬದಲಾವಣೆಯನ್ನು ಗುರುತಿಸುತ್ತದೆ ಎಂದು ಒಪ್ಪಿಕೊಂಡಿದ್ದಾರೆ.
ಆದ್ದರಿಂದ ಈಗ ಬಾಂಗ್ಲಾದೇಶದಲ್ಲಿ ಅಧಿಕಾರದಲ್ಲಿರುವ ಬಿಎನ್ಪಿ ಭಾರತದ ಚಿಂತೆಗೆ ಕಾರಣವಾಗುವುದಿಲ್ಲ, ರೆಹಮಾನ್ ಅವರು ಭಾರತದ ಹಿತಾಸಕ್ತಿಗಳನ್ನು ಗೌರವಿಸುವುದಾಗಿ ಹೇಳಿದ್ದಾರೆ, ಇದು ಅವರ ತಾಯಿಯ ಬಾಂಗ್ಲಾದೇಶ ಮೊದಲು ಎಂಬ ನೀತಿಗಿಂತ ವಿಭಿನ್ನವಾಗಿದೆ. ಆದರೆ ಇದು ಪ್ರಾಯೋಗಿಕವಾಗಿ ಹೇಗಿರುತ್ತದೆ ಎಂಬುದನ್ನು ಕಾದು ನೋಡಬೇಕಿದೆ. ಆದರೆ ಭಾರತಕ್ಕೆ ಒಂದು ಒಳ್ಳೆಯ ಸುದ್ದಿ ಏನೆಂದರೆ ಬಿಎನ್ಪಿ ಬದಲು ಕಠಿಣ ಇಸ್ಲಾಮಿಕ್ ವಾದಿ ಸಂಘಟನೆಯಾದ ಜಮಾತೆ-ಇ-ಇಸ್ಲಾಮಿ ಸಂಘಟನೆಯು ಬಿಎನ್ಪಿ ಪಾಲುದಾರನಾಗಿದ್ದಾರೆ ಅದನ್ನು ನಿರ್ವಹಿಸುವುದಕ್ಕೆ ಕಷ್ಟವಾಗುತ್ತಿತ್ತು. ಆದರೆ ಬಿಎನ್ಪಿ ಸ್ಪಷ್ಟ ಬಹುಮತದ ಗೆಲುವಿನತ್ತ ಸಾಗುತ್ತಿರುವುದರಿಂದ ಅಂತದೊಂದು ತೊಂದರೆ ಭಾರತಕ್ಕೆ ಎದುರಾಗಿಲ್ಲ.
ಭಾರತಕ್ಕೆ ಸಂಬಂಧಿಸಿದಂತೆ, ಜಮಾತ್ ಒಳಗೊಂಡ ಬಾಂಗ್ಲಾದೇಶ ಸರ್ಕಾರವು ದ್ವಿಪಕ್ಷೀಯ ಸಂಬಂಧಗಳನ್ನು ಅಸ್ಥಿರಗೊಳಿಸುವ ಸಾಮರ್ಥ್ಯವನ್ನು ಹೊಂದಿತ್ತು. ಹೆಚ್ಚು ಗಮನಾರ್ಹವಾಗಿ, ಅದು ಪಾಕಿಸ್ತಾನಕ್ಕೆ ಹತ್ತಿರವಾಗಬಹುದಿತ್ತು. ಪಾಕ್ ಸಂಬಂಧಿತ ಅಥವಾ ಬೆಂಬಲಿತ ಭಯೋತ್ಪಾದಕ ಗುಂಪುಗಳು ಈಶಾನ್ಯದಲ್ಲಿ ದಾಳಿ ಮಾಡಲು ಬಾಂಗ್ಲಾದೇಶವು ಲಾಂಚ್ಪ್ಯಾಡ್ ಆಗುವ ಸಾಧ್ಯತೆ ಇತ್ತು. ಹೀಗಾಗಿ ಪಶ್ಚಿಮದಲ್ಲಿ ದೆಹಲಿಯ ಎರಡು ಭದ್ರತಾ ಹೊರೆಯನ್ನು ಹೆಚ್ಚಿಸಬಹುದಿತ್ತು. ಭಾರತದ ಈಶಾನ್ಯ ಭಾಗದ ಮೇಲೆ ಪಾಕಿಸ್ತಾನದ ಹಿಡಿತದ ಪರಿಣಾಮವೆಂದರೆ, ಅದರಿಂದ ಉಂಟಾಗುವ ಯಾವುದೇ ಅಸ್ಥಿರತೆಯು ಚೀನಾದ ಕೈಗೆ ಸಿಗಬಹುದು, ಏಕೆಂದರೆ ಅದು ಅರುಣಾಚಲ ಪ್ರದೇಶವನ್ನು ಅಕ್ರಮವಾಗಿ ಹಕ್ಕು ಸಾಧಿಸಲು ಪ್ರಯತ್ನಿಸುತ್ತಿದೆ.
ಆದರೆ ಜಮಾಅತ್ ಇಲ್ಲದೆ, ರೆಹಮಾನ್ ನೇತೃತ್ವದ ಸರ್ಕಾರವು ಭಾರತದೊಂದಿಗೆ ಕಡಿಮೆ ವಿರೋಧದ ನಿಲುವಿನತ್ತ ಒಲವು ತೋರಬಹುದು ಎಂದು ವಿಶ್ಲೇಷಕರು ನಂಬುತ್ತಾರೆ.
ಬಾಂಗ್ಲಾದೇಶದ ಪ್ರಧಾನಿಯಾಗಲಿರುವ ತಾರೀಖ್ ರೆಹಮಾನ್ ಬಾಂಗ್ಲಾದೇಶದ ಮಾಜಿ ಅಧ್ಯಕ್ಷ ಜಿಯಾವುರ್ ರೆಹಮಾನ್ ಹಾಗೂ ಮಾಜಿ ಪ್ರಧಾನಿ ಖಲೀದಾ ಜಿಯಾ ಅವರ ಪುತ್ರ . 2017ರಲ್ಲಿ ಭ್ರಷ್ಟಾಚಾರ, ಅಕ್ರಮ ಹಣ ವರ್ಗಾವಣೆ ಆರೋಪಗಳ ನಂತರ ಬಂಧನಕ್ಕೊಳಗಾದ ಅವರು 2008ರಲ್ಲಿ ಚಿಕಿತ್ಸೆಯ ನೆಪದಲ್ಲಿ ದೇಶ ತೊರೆದವರು ನಂತರ ಬರೋಬ್ಬರಿ 17 ವರ್ಷಗಳ ಕಾಲ ಲಂಡನ್ನಲ್ಲಿಯೇ ನೆಲೆಸಿದ್ದರು. ಆದರೆ ಡಿಸೆಂಬರ್ 2025ರಲ್ಲಿ ಅವರ ತಾಯಿ ಮಾಜಿ ಪ್ರಧಾನಿ ಖಾಲೀದಾ ಜಿಯಾ ಅವರು ಸಾವನ್ನಪ್ಪಿದ ನಂತರವೇ ಅವರು ದೇಶಕ್ಕೆ ಮರಳಿದ್ದರು.
ಹೀಗೆ 17 ವರ್ಷಗಳ ನಂತರ ದೇಶಕ್ಕೆ ಮರಳಿದ 60 ವರ್ಷದ ತಾರೀಖ್ ರೆಹಮಾನ್ ಅವರಿಗೆ ಈಗ ಬಾಂಗ್ಲಾದೇಶದ ಜನ ಅದ್ಭುತ ಗೆಲುವು ನೀಡಿ ಭಾವುಕ ಉಡುಗೊರೆ ನೀಡಿದ್ದಾರೆ. ಬಾಂಗ್ಲಾದೇಶಕ್ಕಾಗಿ ನನ್ನ ಬಳಿ ಯೋಜನೆ ಇದೆ ಎಂದು ಪ್ರಚಾರ ಆರಂಭಿಸಿದ ಅವರ ಗೆಲುವಿನ ನಂತರ ಈಗ ಭಾರತ, ಮತ್ತು ದಕ್ಷಿಣ ಏಷ್ಯಾದ ಉಳಿದ ಭಾಗಗಳು ಮತ್ತು ಅಮೆರಿಕ, ಆ ಯೋಜನೆ ಕಾರ್ಯರೂಪಕ್ಕೆ ಬರಲು ಕಾಯುತ್ತಿವೆ. ಇಂದು ಮುಂಜಾನೆ ಅವರು ಅದ್ಭುತವಾದ ಗೆಲುವು ದಾಖಲಿಸುತ್ತಿದ್ದಂತೆ ಚೀನಾ ಪಾಕಿಸ್ತಾನಕ್ಕೂ ಮೊದಲೇ ಬಾಂಗ್ಲಾದೇಶದ ಹೊಸ ನಾಯಕನಿಗೆ ಅಭಿನಂದನೆ ಸಲ್ಲಿಸಿ ಸ್ವಾಗತಿಸಿತು. ಈ ಬೆಳವಣಿಗೆ ಮುಂದೆ ಢಾಕಾಗೆ ಸಂಬಂಧಿಸಿದ ಯಾವುದೇ ವಾದ ಅಥವಾ ಜಗಳದಲ್ಲಿ ಪ್ರಮುಖ ಪಾತ್ರ ವಹಿಸಬಹುದು ಎಂದು ವಿಶ್ಲೇಷಕರು ಹೇಳುತ್ತಾರೆ.
Director Jo Simon is no more ಸ್ಯಾಂಡಲ್ವುಡ್ ನಿರ್ದೇಶಕ ಜೋಸೈಮನ್ ಇನ್ನಿಲ್ಲ