Subscribe ನ್ಯೂಸಿಕ್ಸ್ ಕನ್ನಡ NewsicsKannada/YouTube
newsics.com
ಧಾರವಾಡ: ಸಣ್ಣಸೋಮಾಪುರ ನಿರ್ಜನ ಪ್ರದೇಶದಲ್ಲಿ ಅನುಮಾನಾಸ್ಪದ ರೀತಿಯಲ್ಲಿ ಮೃತಪಟ್ಟ ಜಾಕೀಯಾ ಮುಲ್ಲಾಳನ್ನು (19) ಆಕೆ ಪ್ರಿಯಕರ ಹತ್ಯೆ ಮಾಡಿರುವುದು ಪೊಲೀಸ್ ತನಿಖೆಯಿಂದ ದೃಢಪಟ್ಟಿದೆ.
ಧಾರವಾಡ ನಗರದ ನಿವಾಸಿ ಸಾಬೀರ್ ಮುಲ್ಲಾ (20) ಕೊಲೆ ಮಾಡಿದ ಹಂತಕ.
ಪ್ಯಾರಾ ಮೆಡಿಕಲ್ ಓದುತ್ತಿದ್ದ ಸಾಬೀರ ಮುಲ್ಲಾ ಮತ್ತು ಜಾಕೀಯಾ ಮುಲ್ಲಾ ಇಬ್ಬರೂ ಪ್ರೀತಿಸುತ್ತಿದ್ದರು. ಮದುವೆ ನಿಶ್ಚಿಯವಾಗಿತ್ತು. ಆದರೆ, ಸಾಬೀರ್ ಮುಲ್ಲಾ ಅನೇಕ ಹುಡುಗಿಯರ ಜತೆ ಸಂಬಂಧ ಹೊಂದಿದ್ದನ್ನು ಜಾಕೀಯಾ ತಿಳಿದ ನಂತರವೇ ಮದುವೆ ನಿರಾಕರಿಸಿದ್ದಳು.
ಕುಪಿತಗೊಂಡ ಸಾಬೀರ, ಮಂಗಳವಾರ ಮಾತನಾಡಬೇಕು. ಹೊರಗಡೆ ಬರುವಂತೆ ಜಾಕೀಯಾಳನ್ನು ಕೋರಿದ್ದು, ಹೊರಬಂದ ಜಾಕೀಯಾಳನ್ನು ನಿರ್ಜನ ಪ್ರದೇಶಕ್ಕೆ ಕರೆದೊಯ್ದು, ಆಕೆ ದುಪ್ಪಟಾದಿಂದ ಕುತ್ತಿಗೆ ಬಿಗಿದು ಹತ್ಯೆ ಮಾಡಿದ್ದು, ಬುಧವಾರ ಮೃತದೇಹ ಪತ್ತೆಯಾಗಿತ್ತು.