Subscribe ನ್ಯೂಸಿಕ್ಸ್ ಕನ್ನಡ NewsicsKannada/YouTube
newsics.com
ಯಲ್ಲಾಪುರ(ಉತ್ತರ ಕನ್ನಡ): ಪ್ರೀತಿ ನಿರಾಕರಿಸಿದ ಮಹಿಳೆಯನ್ನು ಅಡ್ಡಗಟ್ಟಿ ಕುತ್ತಿಗೆ ಕೊಯ್ದು ಕೊಲೆ ಮಾಡಿ ಪರಾರಿಯಾಗಿದ್ದ ಆರೋಪಿ ರಫೀಕ್ ಇಮಾಮಸಾಬ ಯಳ್ಳೂರ (30) ಕಾಡಿನಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ.
ರಾಮಾಪುರ ಸರ್ಕಾರಿ ಶಾಲೆಯಲ್ಲಿ ಅಡುಗೆ ಸಹಾಯಕಿಯಾಗಿ ಕಾರ್ಯ ನಿರ್ವಹಿಸುತ್ತಿದ್ದ ರಂಜಿತಾ ಮಲ್ಲಪ್ಪ ಬನಸೋಡೆ (30) ವಿವಾಹಿತೆಯನ್ನು ಚಾಕು ಇರಿದು ರಫೀಕ್ ಕೊಲೆಮಾಡಿ ಪರಾರಿಯಾಗಿದ್ದ.
ಹೀಗೆ ಕೊಲೆ ಮಾಡಿ ಕಾಡಿನತ್ತ ಓಡಿ ತಪ್ಪಿಸಿಕೊಂಡಿದ್ದ ಆರೋಪಿ ರಫೀಕ್ ಆತ್ಮಹತ್ಯೆಗೆ ಶರಣಾಗಿದ್ದಾನೆ. ಈತನ ಶವ ರಾಮಾಪುರ ಕಾಡಿನಲ್ಲಿ ಪತ್ತೆಯಾಗಿದೆ. ಮರವೊಂದಕ್ಕೆ ನೇಣು ಬಿಗಿದುಕೊಂಡ ಸ್ಥಿತಿಯಲ್ಲಿ ಶವ ಪತ್ತೆಯಾಗಿದೆ.
ಮೃತ ಆರೋಪಿ ರಫೀಕ್ ಯಲ್ಲಾಪುರದ ಕಾಳಮ್ಮನಗರ ನಿವಾಸಿಯಾಗಿದ್ದ. ರಂಜಿತಾ ಬನ್ಸೊಡೆ ಹತ್ಯೆ ಹಿನ್ನೆಲೆಯಲ್ಲಿ ಶನಿವಾರದಿಂದ ಪೊಲೀಸರು ಈತನಿಗಾಗಿ ವ್ಯಾಪಕ ಶೋಧ ಕೈಗೊಂಡಿದ್ದರು.
ವಿವಾಹವಾಗಿ ಹತ್ತು ವರ್ಷ ಸಂಸಾರ ನಡೆಸಿದ್ದ ರಂಜಿತಾ ಬನ್ಸೊಡೆ ಬಳಿಕ ವಿಚ್ಛೇದನ ಪಡೆದು ರಾಮಾಪುರ ಶಾಲೆಯಲ್ಲಿ ಅಡುಗೆ ಸಹಾಯಕಿಯಾಗಿ ಕೆಲಸ ಮಾಡುತ್ತಿದ್ದಳು. ಈ ವೇಳೆ ರಫೀಕ್ ಜತೆ ಸ್ನೇಹವಾಗಿತ್ತು. ಇಬ್ಬರ ಈ ಸ್ನೇಹ ಅನೈತಿಕ ಸಂಬಂಧವಾಗಿ ಮಾರ್ಪಟ್ಟಿತ್ತು. ಈ ಮಧ್ಯೆ, ತನ್ನನ್ನು ಮದುವೆಯಾಗುವಂತೆ ರಂಜಿತಾಗೆ ರಫೀಕ್ ಪೀಡಿಸುತ್ತಿದ್ದ. ಆದರೆ ರಂಜಿತಾ ಮದುವೆಯನ್ನು ನಿರಾಕರಿಸಿದ್ದಲ್ಲದೆ ರಫೀಕ್ನಿಂದ ದೂರವಾಗಿದ್ದಳು.
ಬಂದ್ಗೆ ಭಾರೀ ಸ್ಪಂದನೆ:
ಈ ಘಟನೆ ಯಲ್ಲಾಪುರದಲ್ಲಿ ತೀವ್ರ ಆಕ್ರೋಶಕ್ಕೆ ಕಾರಣವಾಗಿತ್ತಲ್ಲದೇ, ಹಿಂದು ಪರ ಸಂಘಟನೆಗಳು ಇಂದು (ಭಾನುವಾರ) ಯಲ್ಲಾಪುರ ಬಂದ್ಗೂ ಕರೆನೀಡಿವೆ.
ಯಲ್ಲಾಪುರ್ ಬಂದ್ ಹಿನ್ನೆಲೆಯಲ್ಲಿ ನಗರದ ಎಲ್ಲ ಅಂಗಡಿ ಮುಗ್ಗಟ್ಟುಗಳು ಸಂಪೂರ್ಣ ಬಂದ್ ಆಗಿವೆ.
ಮದುವೆಗೆ ನಿರಾಕರಿಸಿದ ಮಹಿಳೆಯನ್ನು ಚಾಕು ಇರಿದು ಕೊಂ*ದ ಪ್ರೇಮಿ, ಹತ್ಯೆ ಖಂಡಿಸಿ ಇಂದು ಯಲ್ಲಾಪುರ ಬಂದ್