Newsics
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
NewsicsNewsics
Font ResizerAa
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
  • ಲೈಫ್‌ಸ್ಟೈಲ್
  • ಅನಾವರಣ
Search
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
Follow US
Newsics > Blog > ದೇಶ > Drunken troublemakers here face collective action ಈ ಊರಲ್ಲಿ ಕುಡಿದು ಜಗಳವಾಡಿದರೆ ಊರಿನ ಜನರೆಲ್ಲ ಸೇರಿ ಹೊಡೀತಾರೆ!
ದೇಶಪ್ರಮುಖ

Drunken troublemakers here face collective action ಈ ಊರಲ್ಲಿ ಕುಡಿದು ಜಗಳವಾಡಿದರೆ ಊರಿನ ಜನರೆಲ್ಲ ಸೇರಿ ಹೊಡೀತಾರೆ!

Share
2 Min Read
SHARE

Subscribe ನ್ಯೂಸಿಕ್ಸ್ ಕನ್ನಡ NewsicsKannada/YouTube

newsics.com

ಈ ಊರಿನಲ್ಲಿ ಯಾರಾದರೂ ಮದ್ಯ ಅಥವಾ ಮಾದಕವಸ್ತು ಸೇವಿಸಿ ಜಗಳವಾಡಿದರೆ ಇಡೀ ಊರಿನ ಆ ವ್ಯಕ್ತಿಗೆ ಹೊಡೆಯುತ್ತಾರೆ!

ಕುಡಿದು ಜಗಳ ಮಾಡಿದರೆ ಆ ವ್ಯಕ್ತಿಗೆ ಒಮ್ಮೆ ಅಥವಾ ಮೂರು ಬಾರಿ ಎಚ್ಚರಿಕೆ ನೀಡಲಾಗುತ್ತದೆ. ಮತ್ತೆಯೂ ಆ ವ್ಯಕ್ತಿ ಬದಲಾಗದಿದ್ದರೆ, ಹಳ್ಳಿಯ ಎಲ್ಲರೂ ಸೇರಿ ಆ ವ್ಯಕ್ತಿಗೆ ಕಪಾಳಮೋಕ್ಷ ಮಾಡುತ್ತಾರೆ. ನಂತರ ಊರಿನಿಂದ ಹೊರಹಾಕುತ್ತಾರೆ.
ಇದು ತೆಲಂಗಾಣದ ಅದಿಲಾಬಾದ್ ಜಿಲ್ಲೆಯ ಇಂದ್ರವೆಲ್ಲಿ ಎನ್ನುವ ಮಂಡಲದಲ್ಲಿರುವ ಬುಡಕಟ್ಟು ಗ್ರಾಮ ತುಮ್ಮಗುಡ. ದನ, ಮೇಕೆ ಮತ್ತು ಕೃಷಿಯನ್ನು ಆಧರಿಸಿ ಬದುಕುತ್ತಿರುವ 110 ಕುಟುಂಬಗಳು ಇಲ್ಲಿವೆ.

ತುಮ್ಮಗುಡದಲ್ಲಿರುವುದು ಅಕ್ಷರಶಃ 626 ಜನರು. ಗ್ರಾಮದಲ್ಲಿ ಜಗಳ ಮತ್ತು ವಿವಾದಗಳಿಲ್ಲದೆ ಒಗ್ಗಟ್ಟಿನಿಂದ ಬದುಕುವುದು ಬುಡಕಟ್ಟು ಜನಾಂಗದವರ ಪದ್ಧತಿಯಾಗಿದೆ.

ಈ ಸಂಪ್ರದಾಯವನ್ನು ಹೊಸ ಪೀಳಿಗೆಗೆ ರವಾನಿಸುವ ಉದ್ದೇಶದಿಂದ, ಕಳೆದ ಏಳು ವರ್ಷಗಳಿಂದ ಕುಡಿತದ ಅಮಲಿನಲ್ಲಿ ಜಗಳಗಳನ್ನು ಮಾಡಬಾರದು ಎಂಬ ಉದ್ದೇಶದಿಂದ ಮೂರು ಕಟ್ಟುನಿಟ್ಟಿನ ನಿರ್ಧಾರಗಳನ್ನು ಈ ಊರಿನಲ್ಲಿ ಜಾರಿಗೆ ತರಲಾಗಿದೆ.

ಗ್ರಾಮದಲ್ಲಿ ಯಾರೂ ಕುಡಿದು ಜಗಳವಾಡಬಾರದು. ಹೆಂಡತಿ, ಮಕ್ಕಳು ಮತ್ತು ಪೋಷಕರನ್ನು ಬೈಯಬಾರದು ಅಥವಾ ಹೊಡೆಯಬಾರದು. ಇತರ ಹಳ್ಳಿಗಳು ಮತ್ತು ಪ್ರದೇಶಗಳಿಗೆ ಹೋಗುವಾಗ ಕುಡಿದು ಹೋಗಿ ಜಗಳವಾಡಬಾರದು. ಯಾವುದೇ ಅಧಿಕಾರಿಗಳು, ಸಾರ್ವಜನಿಕ ಪ್ರತಿನಿಧಿಗಳು ಅಥವಾ ಬೇರೆ ಯಾರೂ ಗ್ರಾಮಕ್ಕೆ ಕುಡಿದು ಬಂದು ತೊಂದರೆ ಉಂಟುಮಾಡಬಾರದು ಎಂಬ ದೃಢ ನಿರ್ಧಾರಗಳನ್ನು ತುಮ್ಮಗುಡ ಒಟ್ಟಾಗಿ ಸೇರಿ ಜಾರಿಗೆ ತಂದಿದೆ.

ಯಾವುದೇ ಗ್ರಾಮಸ್ಥರು ಮದ್ಯ ಸೇವಿಸಿ ಜಗಳವಾಡಿದ್ದಾರೆ ಎಂದು ಕಂಡುಬಂದರೆ, ಈ ಊರಿನ ಹಿರಿಯರು ಮೊದಲು ಆ ವ್ಯಕ್ತಿಯನ್ನು ಒಮ್ಮೆ ಅಥವಾ ಎರಡು ಬಾರಿ ಕರೆದು ಕ್ಷಮಿಸಿ, ಬುದ್ಧಿ ಹೇಳಲು ಪ್ರಯತ್ನಿಸುತ್ತಾರೆ. ಆ ರೀತಿ ಮತ್ತೆ ಅಪರಾಧ ಮಾಡುವುದಿಲ್ಲ ಎಂದು ಲಿಖಿತ ರೂಪದಲ್ಲಿ ಬರೆಸಿಕೊಳ್ಳುತ್ತಾರೆ.
ಒಂದು ವೇಳೆ ಇಷ್ಟು ಮಾಡಿಯೂ ಮತ್ತೆ ಆ ವ್ಯಕ್ತಿ ಕುಡಿದಿರುವುದು ಕಂಡುಬಂದರೆ, ಮೊದಲ ಒಂದು ತಿಂಗಳು ಬೆಳಗ್ಗೆ ಮತ್ತು ಸಂಜೆ ಹಳ್ಳಿಯಲ್ಲಿರುವ ಆಂಜನೇಯ ಸ್ವಾಮಿ ದೇವಸ್ಥಾನದಲ್ಲಿ ವಿಶೇಷ ಪೂಜೆಗಳನ್ನು ಮಾಡಬೇಕು. ಮತ್ತೆ ಅದೇ ತಪ್ಪು ಮಾಡಿದರೆ ಅವರಿಗೆ 5,051 ರೂ. ದಂಡ ವಿಧಿಸಲಾಗುತ್ತದೆ. ಮತ್ತೆಯೂ ಬದಲಾಗದಿದ್ದರೆ ಗುಡೆಮ್ನಲ್ಲಿರುವ 110 ಕುಟುಂಬಗಳ ಪ್ರತಿಯೊಬ್ಬರ ಬಳಿಗೆ ಬಂದು, ಅವರಿಂದ ಕಪಾಳಕ್ಕೆ ಹೊಡೆಸಿಕೊಳ್ಳಬೇಕು. ನಂತರ ಆ ವ್ಯಕ್ತಿಯನ್ನು ಗ್ರಾಮದಿಂದ ಹೊರ ಹಾಕಲಾಗುತ್ತದೆ. ಈ ನಿಯಮಗಳಿಂದಾಗಿ ತುಮ್ಮಗುಡ ಗ್ರಾಮದಲ್ಲಿ ಇದುವರೆಗೆ ಕುಡಿದು ಜಗಳವಾಡಿದ ಪ್ರಸಂಗಗಳು ನಡೆದಿಲ್ಲ.

https://www.newsics.com/2025/12/26/explosion-near-mysore-palace-nia-probes/

Gold Price Hike ಬಂಗಾರದ ಬೆಲೆ ಬಾನೆತ್ತರಕ್ಕೆ: 1.40 ಲಕ್ಷ ಗಡಿ ದಾಟಿದ 10 ಗ್ರಾಂ ಚಿನ್ನದ ಬೆಲೆ

ಒಂದೇ ಕುಟುಂಬದ ನಾಲ್ವರು ನಿಗೂಢ ಸಾವು – ಸಾವಿನ ಸುತ್ತ ಅನುಮಾನದ ಹುತ್ತ!

TAGGED:Drunken troublemakers here face collective action
Share This Article
Facebook Twitter Copy Link Print
Previous Article ಚಿತ್ರದುರ್ಗ ಬಸ್ ಅಪಘಾತದಲ್ಲಿ ಬಲಿಯಾದ ಗೆಳತಿಯರ ದುರಂತ ಕಥೆ – ಒಟ್ಟಿಗೆ ಕೆಲಸಕ್ಕೆ ಸೇರಿದ್ರು.. ಒಟ್ಟಿಗೆ ಮಸಣದತ್ತ ಪಯಣ ಬೆಳೆಸಿದ್ರು
Next Article ಮೆಟ್ರೋ ರೈಲಲ್ಲಿ ಯುವತಿಯ‌ ಮೈ ಮುಟ್ಟಿ ಅಸಭ್ಯ ವರ್ತನೆ: ಪೊಲೀಸರಿಂದ ಎಚ್ಚರಿಕೆ

Popular Posts

ಐಪಿಎಲ್ ರೂವಾರಿ ಲಲಿತ್ ಮೋದಿ ಬಯೋಪಿಕ್: ಮುಖ್ಯ ಪಾತ್ರದಲ್ಲಿ ರಣವೀರ್ ಸಿಂಗ್?

2 Min Read

ಈ ಲಕ್ಷಣ ಕಂಡುಬಂದರೆ ಮನೆಯಲ್ಲಿ ನಕಾರಾತ್ಮಕ ಶಕ್ತಿ ಹರಿದಾಡುತ್ತಿದೆ ಎಂದರ್ಥ?

2 Min Read

5300 ವರ್ಷಗಳಷ್ಟು ಹಳೆಯದಾದ ಐಸ್ ಮಮ್ಮಿಯಲ್ಲಿ ಇನ್ನೂ ಇದೆ ಜೀವ!

2 Min Read

ಟ್ರೆಕ್ಕಿಂಗ್ ವೇಳೆ ಎಂಬಿಎ ವಿದ್ಯಾರ್ಥಿನಿ ನಿಗೂಢ ನಾಪತ್ತೆ: ಇಬ್ಬರು ಸ್ನೇಹಿತರ ಬಂಧನ!

2 Min Read

You Might Also Like

ಪ್ರಮುಖ

ಐಪಿಎಲ್ ಹಗರಣ; ಹಿರಿಯ ರಾಜಕೀಯ ನಾಯಕರ ಹೆಸರು ಬಾಯ್ಬಿಟ್ಟ ಲಲಿತ್ ಮೋದಿ

3 Min Read
ಪ್ರಮುಖಮನರಂಜನೆ

Adah Sharma: ನಾನು ತಾಯಿಯಾಗಲಿದ್ದೇನೆ ಎಂದ ನಟಿ ಅದಾ ಶರ್ಮಾ, ಫ್ಯಾನ್ಸ್ ಶಾಕ್! ಅಷ್ಟಕ್ಕೂ ಅಸಲಿ ಸಂಗತಿ ಏನು?

1 Min Read
ಪ್ರಮುಖಕರ್ನಾಟಕ

ಯತೀಂದ್ರ ಸಿದ್ದರಾಮಯ್ಯಗೆ ಮಂತ್ರಿಗಿರಿ; ಕೈ ಪಾಳಯದಲ್ಲಿ ಅಸಮಾಧಾನ?

2 Min Read
ಪ್ರಮುಖಕರ್ನಾಟಕ

ನನ್ನ ಹಿಂದೆ ಫೋಟೋಗೆ ಪೋಸ್ ಕೊಟ್ಕೊಂಡು ಯಾರೂ ಕೂತ್ಕೋಬಾರ್ದು: ಡಿಕೆ ಶಿವಕುಮಾರ್ ಗರಂ

1 Min Read

Social Networks

Facebook-f Instagram Twitter
Welcome Back!

Sign in to your account

Lost your password?