Subscribe ನ್ಯೂಸಿಕ್ಸ್ ಕನ್ನಡ NewsicsKannada/YouTube
newsics.com
ಬೆಂಗಳೂರು: ಬಿಗ್ ಬಾಸ್ ಮನೆಯಲ್ಲಿ ಯಾವುದೇ ಎಲಿಮಿನೇಷನ್ ನಡೆದಿಲ್ಲ. ರಕ್ಷಿತಾ – ಧ್ರುವಂತ್ ಅವರನ್ನು ಸೀಕ್ರೆಟ್ ರೂಮ್ನಲ್ಲಿ ಇರಿಸಲಾಗಿದೆ. ಆದರೆ ಈ ವಿಚಾರ ಮನೆಯವರಿಗೆ ಗೊತ್ತಿಲ್ಲ.
ಇತ್ತ ಮನೆ ಸಹಜ ಸ್ಥಿತಿಗೆ ಬಂದಿದೆ. ವೀಕೆಂಡ್ನಲ್ಲಿ ಸುದೀಪ್ ಅವರಿಂದ ಕಿವಿ ಮಾತು ಕೇಳಿದವರು ಟಾಸ್ಕ್ ಆಡಿ ತಮ್ಮನ್ನು ತಾವು ಸರಿ ಎಂದು ಸಾಬೀತುಪಡಿಸುವ ಪ್ರಯತ್ನದಲ್ಲಿದ್ದಾರೆ.
ಈ ವಾರದ ಆರಂಭದಲ್ಲೇ ಎರಡು ತಂಡಗಳನ್ನು ರಚಿಸಲಾಗಿದೆ. ಇದರಲ್ಲಿ ಟಾಸ್ಕ್ ಸೋಲುವ ತಂಡದ ನಾಯಕರು ಎಲಿಮಿನೇಷನ್ಗೆ ನಾಮಿನೇಟ್ ಆಗಲಿದ್ದಾರೆ. ಹೀಗಾಗಿ ಜಿದ್ದಾಜಿದ್ದಿಯಾಗಿ ಸ್ಪರ್ಧಿಯಾಗಿ ಟಾಸ್ಕ್ ಗೆಲ್ಲುವುದಕ್ಕೆ ಹೋರಾಡಿದ್ದಾರೆ.
ಸೂರಜ್ – ರಜತ್ ಟಾಸ್ಕ್ನಲ್ಲಿ ಕಿತ್ತಾಟ ನಡೆಸಿದ್ದಾರೆ. ಇನ್ನೊಂದು ಕಡೆ ಅಶ್ವಿನಿ – ಚೈತ್ರಾ ಅವರು ಟಾಸ್ಕ್ ಗೆಲ್ಲುವ ನಿಟ್ಟಿನಲ್ಲಿ ಕಿತ್ತಾಡಿಕೊಂಡಿದ್ದಾರೆ.
ಚೈತ್ರಾ ನನಗೆ ಕೈ ನೋವಾಗುತ್ತಿದೆ ಎಂದಿದ್ದಾರೆ. ಇದಕ್ಕೆ ಉಸ್ತುವಾರಿ ವಹಿಸಿಕೊಂಡಿರುವ ಕ್ಯಾಪ್ಟನ್ ರಾಶಿಕಾ ಅವರು ನೀವೆಷ್ಟು ನಾಟಕದವರು ಅಂತ ಈ ಟಾಸ್ಕ್ ಅಲ್ಲೇ ಗೊತ್ತಾಗುತ್ತಿದೆ. ನಿಮ್ಮದು ಒಂದು ಡಿಸ್ಕ್ ತೆಗೆಯುತ್ತಿದ್ದೇನೆ ಎಂದು ರಾಶಿಕಾ ಹೇಳಿದ್ದಾರೆ.
ಇದಕ್ಕೆ ಚೈತ್ರಾ ಸಿಕ್ಕಾಪಟ್ಟೆ ಗರಂ ಆಗಿದ್ದಾರೆ. “ಇವರಿಗೆ ಬೇಕದವರನ್ನು ಸೇಫ್ ಮಾಡೋದಾದ್ರೆ, ಇವರಿಗೆ ಯಾವ ನೈತಿಕತೆ ಇದೆ. ದೇವರು ಇದ್ರೆ ಇದೇ ಉಸ್ತುವಾರಿ ನಿನಗೆ ಕರ್ಮ ರಿಟರ್ನ್ ಅಂತ ಹೊಡೆದೇ ಹೊಡೆಯುತ್ತದೆ” ಎಂದಿದ್ದಾರೆ.
ಇದನ್ನೆಲ್ಲ ನೋಡಿಕೊಂಡು ಸೀಕ್ರೆಟ್ ರೂಮ್ನಲ್ಲಿ ಧ್ರುವಂತ್ ಅವರು “ಬರೀ ನಾಟಕ”ವೆಂದಿದ್ದಾರೆ.
ಸೀಕ್ರೆಟ್ ರೂಮ್ನಲ್ಲಿರುವ ರಕ್ಷಿತಾ ಅವರು ಧ್ರುವಂತ್ ಜತೆ ಹೇಗೆ ಇರುವುದು ಎಂದು ತಲೆ ಮೇಲೆ ಕೈಯಿಟ್ಟುಕೊಂಡಿದ್ದಾರೆ.
ಆಕಸ್ಮಾತ್ ನೀವು ಒಬ್ಬರೇ ಸೀಕ್ರೆಟ್ ರೂಮ್ ಅಲ್ಲಿದ್ದು, ನಾನು ಅಲ್ಲಿ ಇದ್ದಿದ್ರೆ ಯಾರು ಬೆಸ್ಟ್ ಅಂತ ಅನ್ನಿಸ್ತಾ ಇತ್ತು ಎಂದು ಧ್ರುವಂತ್ ಕೇಳಿದ್ದಾರೆ. ಇದಕ್ಕೆ ರಕ್ಷಿತಾ ನಾನೇ ಬೆಸ್ಟ್ ಎಂದಿದ್ದಾರೆ.