Subscribe ನ್ಯೂಸಿಕ್ಸ್ ಕನ್ನಡ NewsicsKannada/YouTube
newsics.com
ಚಿಕ್ಕಮಗಳೂರು : ಯುವಕನೊಬ್ಬ ಯುವತಿಯನ್ನು ಪ್ರೀತಿಸಿ 5 ಲಕ್ಷ ಹಣ ಪಡೆದು ಕೈ ಕೊಟ್ಟು ಬೇರೆ ಯುವತಿಯ ಜೊತೆಗೆ ಮದುವೆ ಆಗೋಕೆ ರೆಡಿ ಆಗಿದ್ದಾನೆ. ಇದೀಗ ಯುವಕನ ಮದುವೆಯ ವೇಳೆ ಯುವತಿ ರಂಪಾಟ ಮಾಡಿರುವ ಘಟನೆ ಚಿಕ್ಕಮಗಳೂರಲ್ಲಿ ನಡೆದಿದೆ.
ಯುವತಿ ಅಶ್ವಿನಿ ದೊಡ್ಡೇಗೌಡ ಕಲ್ಯಾಣ ಮಂಟಪದಲ್ಲಿ ಮದುವೆ ಮನೆಗೆ ನುಗ್ಗಿ ಗಲಾಟೆ ಮಾಡಿದ್ದಾಳೆ. ಪ್ರೀತಿಸಿ ಮೋಸ ಮಾಡಿದ್ದಾಗಿ ಶರತ್ ಮತ್ತು ಫ್ಯಾಮಿಲಿ ವಿರುದ್ಧ ಯುವತಿ ಅಶ್ವಿನಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ನಿನ್ನೆ ಮನೆಯ ಮುಂದೆ ಇವತ್ತು ನೇರವಾಗಿ ಮದುವೆ ಮಂಟಪಕ್ಕೆ ನುಗ್ಗಿ ಗಲಾಟೆ ಮಾಡಿದ್ದಾರೆ.
ಚಿಕ್ಕಮಂಗಳೂರು ನಗರದ ಕಲ್ಯಾಣ ನಗರದ ಯುವಕ ಶರತ್ ಅಶ್ವಿನಿಯನ್ನು ಪ್ರೀತಿ ಮಾಡುತ್ತಿದ್ದನಂತೆ ಆದರೆ ಈಗ ಪ್ರೀತಿಸಿ ಕೈ ಕೊಟ್ಟು ಬೇರೆಯವರೊಂದಿಗೆ ಮದುವೆಯಾಗಲು ಶರತ್ ಮುಂದಾಗಿದ್ದ. ಅಲ್ಲದೇ ಅಶ್ವಿನಿ ಹತ್ತಿರ 5 ಲಕ್ಷ ಹಣ ಕೂಡ ಪಡೆದಿದ್ದ ಎನ್ನಲಾಗಿದೆ.
ಹಾಸನ ಜಿಲ್ಲೆಯ ಬೇಲೂರು ಮೂಲದ ಅಶ್ವಿನಿ ಹಾಗೂ ಚಿಕ್ಕಮಗಳೂರಿನ ಶರತ್ ಎಂದು ತಿಳಿದು ಬಂದಿದೆ. 8 ತಿಂಗಳ ಹಿಂದೆ ಅಲ್ದುರು ಪೊಲೀಸ್ ಠಾಣೆಗೆ ಅಶ್ವಿನಿ ದೂರು ನೀಡಿದಳು. ನಿನ್ನೆ ಶರತ್ ಮನೆಯ ಮುಂದೆ ಅಶ್ವಿನಿ ಏಕಾಂಗಿ ಹೋರಾಟ ಮಾಡಿದ್ದಾಳೆ ಇಂದು ಮದುವೆ ಮಂಟಪಕ್ಕೆ ಬಂದು 15 ಗಲಾಟೆ ಮಾಡಿದ್ದಾಳೆ ಮದುವೆ ಮಂಟಪದ ಒಳಗೆ ಅಶ್ವಿನಿ ಧರಣಿ ಕುಳಿತಿದ್ದಾಳೆ ಮದುವೆ ಮಂಟಪದಲ್ಲಿ ನನ್ನ ಮೇಲೆ ಹಲ್ಲೆ ಮಾಡಿದ್ದಾರೆ ಎಂದು ಅಶ್ವಿನಿ ಆಕ್ರೋಶ ವ್ಯಕ್ತಪಡಿಸಿದ್ದಾಳೆ. ಚಿಕ್ಕಮಗಳೂರು ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.