Subscribe ನ್ಯೂಸಿಕ್ಸ್ ಕನ್ನಡ NewsicsKannada/YouTube
newsics.com
ಒಬ್ಬ ವ್ಯಕ್ತಿ ಆರೋಗ್ಯವಾಗಿರಲು ಒಳ್ಳೆಯ ಆಹಾರ ಮಾತ್ರವಲ್ಲ, ಚೆನ್ನಾಗಿ ನಿದ್ರೆ ಮಾಡುವುದು ಕೂಡ ಬಹಳ ಮುಖ್ಯವಾಗುತ್ತದೆ. ಆದರೆ ಪ್ರಸ್ತುತ ದಿನಗಳಲ್ಲಿ, ಅನೇಕರು ಎದುರಿಸುತ್ತಿರುವ ಪ್ರಮುಖ ಸಮಸ್ಯೆಗಳಲ್ಲಿ ನಿದ್ರಾಹೀನತೆಯೂ ಒಂದು. ಇದಕ್ಕೆ ನಮ್ಮ ಆಹಾರ ಪದ್ದತಿಯೂ ಕೂಡ ಕಾರಣವಾಗಿರಬಹುದು. ಈ ಆಧುನಿಕ ಜಗತ್ತಿನಲ್ಲಿ ಬೆಂಗಳೂರಲ್ಲಿ ನೆಲೆಸಿರುವ ಬಹುತೇಕರು ಉದ್ಯೋಗಸ್ಥರು.
ಹೀಗಾಗಿ ಇಲ್ಲಿರುವ ಅನೇಕರಿಗೆ ಕೆಲಸ ಹೊರತುಪಡಿಸಿ ಯಾವುದಕ್ಕೂ ಟೈಮ್ ಸಿಗಲ್ಲ. ಆಫೀಸ್ ಟೈಂ ಹೊರತಾಗಿ ಟ್ರಾಫಿಕ್ ಸಮಸ್ಯೆಯ ಕಾರಣಕ್ಕೆ ಅಧಿಕ ಸಮಯವನ್ನು ಮಾರ್ಗದಲ್ಲೇ ಕಳೆಯಬೇಕಾದ ಸ್ಥಿತಿ ಹಲವರದ್ದು. ಹೀಗಾಗಿಯೇ ಕಡಿಮೆ ನಿದ್ದೆ, ಬೆಳಗ್ಗಿನ ಉಪಹಾರವನ್ನು ಸೇವಿಸದೇ ಇರೋದು ಅನೇಕರ ಜೀವನಶೈಲಿಯಾಗಿ ಹೋಗಿದೆ. ಆದರೆ ಇತ್ತೀಚಿನ ಅಂಕಿ ಅಂಶವೊಂದು ಅಚ್ಚರಿ ಮಾಹಿತಿ ತಿಳಿದು ಬಂದಿದೆ.
ಕಡಿಮೆ ನಿದ್ದೆಯ ಜೊತೆಗೆ ಖಾಲಿ ಹೊಟ್ಟೆಯಲ್ಲಿ ಆಫೀಸ್ಗಳತ್ತ ಮುಖಮಾಡುವವರ ಪೈಕಿ ಆಸ್ಪತ್ರೆಗೆ ದಾಖಲಾಗುವವರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಳವಾಗ್ತಿದೆ. ಅದರಲ್ಲೂ ಯುವ ಜನತೆಯೇ ಇವರಲ್ಲಿ ಹೆಚ್ಚು ಎನ್ನುವುದು ಆಘಾತಕಾರಿ ವಿಷಯ. ಖಾಲಿ ಹೊಟ್ಟೆಯಲ್ಲಿ ಪ್ರಯಾಣಿಸಿ ತಲೆ ತಿರುಗಿ ಬೀಳುವವರ ಸಂಖ್ಯೆ ನಮ್ಮ ಮೆಟ್ರೋದಲ್ಲೇ 300ರ ಗಡಿ ದಾಟಿದೆ. ಇನ್ನು ನಿದ್ದೆಗೆಟ್ಟು ಖಾಲಿ ಹೊಟ್ಟೆಯಲ್ಲಿ ಆಫೀಸ್ಗಳಿಗೆ ತೆರಳುವ ಮಂದಿಗೆ ವೈದ್ಯರೂ ಎಚ್ಚರಿಕೆ ನೀಡಿದ್ದಾರೆ.
ತಲೆಸುತ್ತು ಸಮಸ್ಯೆ ತಡೆಯುವುದು ಹೇಗೆ?
- ಕಡಿಮೆ ನಿದ್ರೆ ಮಾಡೋದು, ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಪ್ರಯಾಣ ಬೇಡ
- ಪ್ರಯಾಣಕ್ಕೂ ಮುನ್ನ ಕಡ್ಡಾಯವಾಗಿ ಬ್ರೇಕ್ಫಾಸ್ಟ್ ಸೇವಿಸಿ
- ಮನೆಯಿಂದ ಹೊರಡುವ ವೇಳೆಗ ಕನಿಷ್ಠ ಬಾಳೆಹಣ್ಣು, ಡ್ರೈಫೂಟ್ಸ್, ಕಾಳುಗಳನ್ನು ಸೇವಿಸಿ
- ಉಸಿರುಗಟ್ಟಿಸುವಂತಹ ಉಡುಪಗಳನ್ನ ಸಾಧ್ಯವಾದಷ್ಟು ಧರಿಸಬೇಡಿ
ಅಗತ್ಯವಿರುವ ನಿದ್ದೆ ಮತ್ತು ಬ್ರೇಕ್ಫಾಸ್ಟ್ ಸ್ಕಿಪ್ ಮಾಡುವುದರಿಂದ ದೇಹದಲ್ಲಿ ಸಕ್ಕರೆ ಅಂಶ ಕಡಿಮೆಯಾಗುತ್ತದೆ. ಇದರ ಜೊತೆಗೆ ನಿಂತುಕೊಂಡು ಪ್ರಯಾಣ ಮಾಡಿದರೆ ಆಯಾಸಗೊಂಡು, ಅಸ್ವಸ್ಥರಾಗುವ ಸಾಧ್ಯತೆ ಹೆಚ್ಚಿರುತ್ತೆ. ಹೀಗಾಗಿ ಕನಿಷ್ಠ 6 ಗಂಟೆಯಾದರೂ ನಿದ್ದೆಯ ಜೊತೆಗೆ ಸರಿಯಾದ ಸಮಯಕ್ಕೆ ಬೆಳಗ್ಗಿನ ಉಪಹಾರ ಸೇವಿಸುವಂತೆ ಡಾ. ದೇವಿಂದ್ರಪ್ಪ ಸಲಹೆ ನೀಡಿದ್ದಾರೆ.