Subscribe ನ್ಯೂಸಿಕ್ಸ್ ಕನ್ನಡ NewsicsKannada/YouTube
newsics.com
ಬಿಗ್ ಬಾಸ್ ಕನ್ನಡ ಸೀಸನ್ 12’ರಲ್ಲಿ ಅಶ್ವಿನಿ ಗೌಡ ಅವರು ನಿರಂತರವಾಗಿ ಕಣ್ಣೀರು ಹಾಕುತ್ತಿದ್ದಾರೆ. ಅವರು ಇತ್ತೀಚೆಗೆ ಸಾಕಷ್ಟು ಕುಗ್ಗಿದ್ದಾರೆ. ಆದರೂ ತಮ್ಮ ಅಹಂ ಬಿಡುತ್ತಿಲ್ಲ. ಈಗ ರಘು ಹಾಗೂ ಅಶ್ವಿನಿ ಗೌಡ ಮಧ್ಯೆ ಕಿರಿಕ್ ಆಗಿದೆ. ಕೆಲಸ ಮಾಡುವ ವಿಷಯಕ್ಕೆ ಸಂಬಂಧಿಸಿ ರಘು ಅವರು ಅಶ್ವಿನಿ ಬಳಿ ಮಾತನಾಡಿದ್ದಾರೆ. 10 ನಿಮಿಷ ಬಿಟ್ಟು ಕೆಲಸ ಮಾಡುತ್ತೇನೆ ಎಂದು ಅಶ್ವಿನಿ ಹೇಳಿದ್ದಾರೆ. ರಘು ಹಾಗೂ ಅಶ್ವಿನಿ ಜಗಳ ಆಡಿದ್ದಾರೆ.
ಇದರಿಂದಬಿಗ್ಬಾಸ್ ಮನೆಯಲ್ಲಿ ಅಶ್ವಿನಿ ಗೌಡ ಉಪವಾಸ ಸತ್ಯಾಗ್ರಹ ಆರಂಭಿಸಿದ್ದಾರೆ. ಅದಕ್ಕೆ ಕಾರಣ ಅವರ ಸ್ವಾಭಿಮಾನಕ್ಕೆ ದಕ್ಕೆ ಆಗಿದೆಯಂತೆ.ತಮಗೆ ಆಗುತ್ತಿರುವ ನೋವುಗಳನ್ನು ಹೊರ ಹಾಕಲು ಇದೀಗ ಹೊಟ್ಟೆಗೆ ಏನೂ ತಿನ್ನದೇ ಕೂತಿದ್ದಾರೆ. ಇದು ಬಿಗ್ಬಾಸ್ ಮನೆಯ ಇತರ ಸದಸ್ಯರ ತಳಮಳಕ್ಕೂ ಕಾರಣವಾಗಿದೆ.
ಕಲರ್ಸ್ ಕನ್ನಡ ಇಂದು ಬೆಳಗ್ಗೆ ಪ್ರೊಮೋ ಒಂದನ್ನು ರಿಲೀಸ್ ಮಾಡಿದೆ. ಅದರಲ್ಲಿ ಅಶ್ವಿನಿ ಬೆಡ್ ಮೇಲೆ ಮಲಗಿಕೊಂಡಿದ್ದಾರೆ. ಜಾಹ್ನವಿ ತಟ್ಟೆಯಲ್ಲಿ ಊಟ ಹಾಕಿಕೊಂಡು ಬಂದಿದ್ದಾರೆ. ನೀವು ಫಸ್ಟು ಊಟ ಮಾಡಿ ಎಂದು ಒತ್ತಾಯ ಮಾಡಿದ್ದಾರೆ.