Subscribe ನ್ಯೂಸಿಕ್ಸ್ ಕನ್ನಡ NewsicsKannada/YouTubenewsics.com
ದೆಹಲಿ : ದೆಹಲಿಯಲ್ಲಿ ಭೀಕರ ಕಾರು ಸ್ಪೋಟ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿ ಅಮೀರ್ ನನ್ನು 10 ದಿನ ಎನ್ ಐ ಎ ಕಸ್ಟಡಿಗೆ ನೀಡಿ ಪಟಿಯಾಲ ಕೋರ್ಟ್ ಆದೇಶ ಹೊರಡಿಸಿದೆ.
ದೆಹಲಿ ಭಯೋತ್ಪಾದನಾ ಸ್ಫೋಟ ಪ್ರಕರಣದಲ್ಲಿ ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್ಐಎ) ಬಂಧಿಸಿದ ಆರೋಪಿ ಅಮೀರ್ ರಶೀದ್ ಅಲಿಯನ್ನು ದೆಹಲಿಯ ಪಟಿಯಾಲ ಹೌಸ್ ನ್ಯಾಯಾಲಯದಿಂದ ಕರೆದೊಯ್ಯಲಾಗುತ್ತಿದೆ.
ದೆಹಲಿ ಸ್ಫೋಟ ಪ್ರಕರಣದಲ್ಲಿ ಅಮೀರ್ ರಶೀದ್ ಅಲಿಯನ್ನು ಎನ್ಐಎ ನ್ಯಾಯಾಲಯವು 10 ದಿನಗಳ ಕಾಲ ಎನ್ಐಎ ವಶಕ್ಕೆ ನೀಡಿದೆ.
ದೆಹಲಿಯ ಕೆಂಪು ಕೋಟೆಯಲ್ಲಿ ನಡೆದ ಬಾಂಬ್ ಸ್ಫೋಟದ ತನಿಖೆಯಲ್ಲಿ ರಾಷ್ಟ್ರೀಯ ತನಿಖಾ ಸಂಸ್ಥೆ (NIA) ಮೊದಲ ಬಂಧನ ಮಾಡಿದ್ದು, ದೆಹಲಿಯಿಂದ ಆಮಿರ್ ರಶೀದ್ ಅಲಿಯನ್ನು ವಶಕ್ಕೆ ಪಡೆದಿದೆ. ಸ್ಫೋಟಕ್ಕೆ ಬಳಸಲಾದ ಹುಂಡೈ ಐ20 ಕಾರನ್ನು ಆಮಿರ್ ಹೆಸರಿನಲ್ಲಿ ನೋಂದಾಯಿಸಲಾಗಿದೆ ಎಂದು ಪ್ರಾಥಮಿಕ ತನಿಖೆಗಳು ಬಹಿರಂಗಪಡಿಸಿವೆ.
ಬಂಧಿತ ಆಮಿರ್ ರಶೀದ್ ಅಲಿ ಜಮ್ಮು ಮತ್ತು ಕಾಶ್ಮೀರದ ಪ್ಯಾಂಪೋರ್ ನಿವಾಸಿ ಎಂದು ತನಿಖೆಯಿಂದ ತಿಳಿದುಬಂದಿದೆ. ಬಾಂಬ್ ದಾಳಿ ನಡೆಸಲು ದಾಳಿಕೋರ ಡಾ. ಉಮರ್ ನಬಿ ಜೊತೆ ಆಮಿರ್ ಸಂಚು ರೂಪಿಸಿದ್ದ . ತನಿಖಾ ಸಂಸ್ಥೆಯ ಪ್ರಕಾರ, ಸ್ಫೋಟಕ್ಕಾಗಿ ಆಮಿರ್ ಕಾರು ಖರೀದಿಸಲು ಸಹಾಯ ಮಾಡಿದ್ದು ಈ ಉದ್ದೇಶಕ್ಕಾಗಿ ದೆಹಲಿಗೆ ಬಂದಿದ್ದನು.
ಇಂದು ಸಂಜೆ 5 ಗಂಟೆಗೆ ಪ್ರಧಾನಿ ಮೋದಿ ಭೇಟಿಯಾಗಲಿರುವ ಸಿದ್ದರಾಮಯ್ಯ