Subscribe ನ್ಯೂಸಿಕ್ಸ್ ಕನ್ನಡ NewsicsKannada/YouTube
newsics.com
ಮದುವೆ ಮಂಟಪದಲ್ಲಿದ್ದ ವರನಿಗೆ ಚಾಕುವಿನಿಂದ ಇರಿದ ಘಟನೆ ಮಹಾರಾಷ್ಟ್ರದ ಅಮರಾವತಿಯ ದೊಡ್ಡ ಕಾಂಪೌಂಡಿನಲ್ಲಿ ಓಪನ್ ಸ್ಪೇಸ್ನಲ್ಲಿ ನಡೆದಿದೆ.
ಅಮರಾವತಿ ನಗರದ ಬಡನೆರ ರಸ್ತೆಯಲ್ಲಿರುವ ಸಹಿಲ್ ಲಾನ್ನಲ್ಲಿ 22 ವರ್ಷದ ಸುಜಲ್ ರಾಮ್ ಸಮುದ್ರ ಅವರ ವಿವಾಹ ಮಹೋತ್ಸವ ಜರುಗಿತ್ತು. ಕಾಂಪೌಂಡ್ ಹೊರಗೆ ರಾತ್ರಿ 9.30ರ ಸುಮಾರಿಗೆ ಸ್ನೇಹಿತನ ಜೊತೆ ಬೈಕಿನಲ್ಲಿ ಹಂತಕನ ಪ್ರವೇಶ ಆಗಿತ್ತು. ಕಾಂಪೌಂಡ್ ಪ್ರವೇಶಿಸಿದ ಆರೋಪಿ ರಾಘೋ ಜಿತೇಂದ್ರ ಬಕ್ಷಿ. ನೇರವಾಗಿ ಮದುವೆಯ ವಧು-ವರ ನಿಂತಿದ್ದ ವೇದಿಕೆಗೆ ನುಗ್ಗಿ ಚಾಕುವಿನಿಂದ ಇರಿದು ಆರೋಪಿ ಬೈಕ್ ಹತ್ತಿ ಪರಾರಿಯಾಗಿದ್ದಾನೆ
ಮದುವೆ ಮನೆಯಲ್ಲಿ ಫೋಟೋಗ್ರಫಿ ಮಾಡ್ತಿದ್ದ ವ್ಯಕ್ತಿ ತಾನು ನಿಯಂತ್ರಿಸುತ್ತಿದ್ದ ಡ್ರೋನ್ ಅನ್ನು ಓಡಿಹೋಗುತ್ತಿದ್ದ ಆರೋಪಿಯ ಕಡೆಗೆ ತಿರುಗಿಸಿದ್ದ.. ಡ್ರೋನ್ ಆ ದಾಳಿಕೋರ ಕಾಂಪೌಂಡಿನಿಂದ ಆಚೆ ಹೋಗಿ ಸ್ನೇಹಿತನ ಬೈಕ್ ಹತ್ತಿ ಪರಾರಿಯಾಗುವುದೆಲ್ಲವನ್ನ ಚಿತ್ರೀಕರಿಸಿದ್ದಾನೆ. ಅಷ್ಟೇ ಅಲ್ಲ, ಅವರ ಬೈಕ್ ಹೋಗಿರುವ ಸುಮಾರು 2 ಕಿಮೀ ದೂರದವರೆಗೆ ಡ್ರೋನ್ ಚೇಸ್ ಮಾಡಿದೆ..
ಸದ್ಯ ಡ್ರೋನ್ ವಿಡಿಯೋ ಸಹಾಯದಿಂದ ಆರೋಪಿಯ ಗುರುತು ಪತ್ತೆ ಆಗಿದೆ. ಆರೋಪಿಗಳು ಸಾಗಿದ ದಿಕ್ಕು ಪರಿಶೀಲಿಸಿ ಕೆಲವೇ ಗಂಟೆಗಳಲ್ಲಿ ಹೆಡೆಮುರಿ ಕಟ್ಟಿದ್ದಾರೆ.
ಇತ್ತೀಚೆಗೆ ನಡೆದ ಸಮಾರಂಭದಲ್ಲಿ ಆರೋಪಿಗೂ, ವರನಿಗೂ ಜಗಳವಾಗಿತ್ತಂತೆ. ಅದು ಡಿಜೆ ಪ್ರದರ್ಶನದ ಸಂದರ್ಭದಲ್ಲಿ ಸಣ್ಣ ಗಲಾಟೆಗೆ ಕಾರಣವಾಗಿದೆ. ನೃತ್ಯ ಮಾಡುವಾಗ ವರ ಮತ್ತು ಆರೋಪಿ ಪರಸ್ಪರ ತಳ್ಳಾಡಿಕೊಂಡಿದ್ರಂತೆ. ಇದರ ನಂತ್ರ ನಡೆದ ವಾಗ್ವಾದವು ಬಕ್ಷಿಯನ್ನ ಕೆರಳಿಸಿತ್ತು. ಈ ದಾಳಿಗೆ ಕಾರಣ ಎಂದು ಪೊಲೀಸರು ತಿಳಿಸಿದ್ದಾರೆ.