Newsics
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
NewsicsNewsics
Font ResizerAa
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
  • ಲೈಫ್‌ಸ್ಟೈಲ್
  • ಅನಾವರಣ
Search
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
Follow US
Newsics > Blog > ಕರ್ನಾಟಕ > ಪಟಾಕಿ ಚೀಟಿ: 20 ಸಾವಿರ ಮಂದಿಗೆ ಮೋಸ, 12 ಕೋಟಿ ಕಳೆದುಕೊಂಡವರ ಪರದಾಟ, ಬೀದಿಯಲ್ಲೇ ಜಾಗರಣೆ
ಕರ್ನಾಟಕಪ್ರಮುಖ

ಪಟಾಕಿ ಚೀಟಿ: 20 ಸಾವಿರ ಮಂದಿಗೆ ಮೋಸ, 12 ಕೋಟಿ ಕಳೆದುಕೊಂಡವರ ಪರದಾಟ, ಬೀದಿಯಲ್ಲೇ ಜಾಗರಣೆ

Share
2 Min Read
SHARE

Subscribe NewsicsKannada/YouTube

newsics.com

ಕೋಲಾರ: ದೀಪಾವಳಿ ಹಬ್ಬ ಆಚಿರಿಸೋಕೆ, ಒಂದಷ್ಟು ಹಣ ಕೂಡಿಟ್ಟುಕೊಳ್ಳೊಕೆ. ಪಟಾಕಿ ಚೀಟಿಯನ್ನು ಹಾಕೋದು ಮಾಮೂಲಿ, ಆದರೆ ಕೋಲಾರದಲ್ಲಿ ಬರೋಬ್ಬರಿ 20 ಸಾವಿರ ಜನರು ಪಟಾಕಿ ಚೀಟಿ ಹಾಕಿ ಮೋಸ ಹೋಗಿದ್ದು, 12 ಕೋಟಿ ರೂಪಾಯಿ ಮೊತ್ತದ ಹಣ ಕಟ್ಟಿಸಿಕೊಂಡವನು ನಾಪತ್ತೆಯಾಗಿದ್ದಾನೆ.

ಮಾಲೀಕನಿಗಾಗಿ ಕಚೇರಿ ಎದುರು ಮೋಸ ಹೋದ‌ ಜನ ಕಾಯ್ತಿದ್ದು,
ಬೀದಿ ಬದಿಯ ಎಲ್ಲೆಂದರಲ್ಲಿ ಮಲಗಿ ಮೋಸ ಮಾಡಿ ನಾಪತ್ತೆಯಾಗಿರುವ ವ್ಯಕ್ರಿಗಾಗಿ ಕಾಯುತ್ತಿದ್ದಾರೆ.

ಕೋಲಾರ ಜಿಲ್ಲೆಯ ಬಂಗಾರಪೇಟೆ ನಗರದ ಮಹಿಳಾ ಕಾಲೇಜು ಎದುರೇ ಇರುವ ರಸ್ತೆಯಲ್ಲಿ ಭರತ್ ಎಂಬುವರು ತಾಯಿ ಚೌಡೇಶ್ವರಿ ದೀಪಾವಳಿ ಸಾಮಗ್ರಿಗಳು ಎಂಬ ಹೆಸರಲ್ಲಿ ಚೀಟಿ ವ್ಯವಹಾರ ನಡೆಸಿದ್ದರು.

ಸಾರ್ವಜನಿಕರಿಗೆ ಕೊಟ್ಟಿರೊ ಕಾರ್ಟ್‌ನಲ್ಲಿ ಬಂಗಾರಪೇಟೆಯ ಅಮರಾವತಿ ನಗರದಲ್ಲಿ ಕಚೇರಿ ಇರುವುದಾಗಿ ಹೇಳಿದ್ದರು. ಆದರೆ ಎಲ್ಲಾ ಕಾರ್ಯ ಚಟುವಟಿಕೆ ನಡೀತಿರೊದು ಹೊಂಬೆಳಕು ಕಟ್ಟಡ ಕಾರ್ಮಿಕರ ಸಂಘದ ಕಚೇರಿಯಲ್ಲಿ.
ಒಂದೋ, ಎರಡೂ, ಹತ್ತು ಲಕ್ಷ ಇಲ್ಲಿ ವಂಚನೆ ಮಾಡಿಲ್ಲ. ಬರೋಬ್ಬರಿ 20 ಸಾವಿರಕ್ಕೂ ಹೆಚ್ಚು ಜನರು ಇದೇ ಚೀಟಿ ವ್ಯವಹಾರದಲ್ಲಿ ಹಣ ಹೂಡಿದ್ದು, 12 ಕೋಟಿ ರೂಪಾಯಿಗೂ ಹೆಚ್ಚು ಮೊತ್ತದ ವಂಚನೆ ಆಗಿದೆಯೆಂದು ಹೇಳಲಾಗಿದೆ.

ಭರತ್ ಎಂಬುವರು ನಡೆಸ್ತಿದ್ದ ಪಟಾಕಿ ಚೀಟಿಯಲ್ಲಿ ಪ್ರತಿ ತಿಂಗಳು 500 ರೂ ಕಟ್ಟಬೇಕು, ಹೀಗೆ 11 ತಿಂಗಳು ಕಟ್ಟಿದರೆ, ಪೂರ್ತಿ ಹಣಕ್ಕೆ 25 ಕೆಜಿ ತೂಕದ ಒಂದು ಅಕ್ಕಿ ಮೂಟೆ, 15 ಲೀಟರ್ ಎಣ್ಣೆ, ಒಂದು ಪಟಾಕಿ ಬಾಕ್ಸ್, ಆಕರ್ಷಕ ಗಿಫ್ಟ್, ಹಬ್ಬದ ಸಾಮಗ್ರಿಯ ರೇಷನ್ ಕಿಟ್ ನೀಡುವುದಾಗಿ ಕಾರ್ಡ್‌ನಲ್ಲಿ ಮಾಹಿತಿ ನೀಡಲಾಗಿದೆ. ಆದರೆ ದೀಪಾವಳಿ ಹಬ್ಬಕ್ಕೆ ಒಂದು ತಿಂಗಳ ಹಿಂದೆಯೇ ಕೊಡಬೇಕಿದ್ದ ಸಾಮಗ್ರಿಗಳಲ್ಲಿ ಒಂದನ್ನೂ ನೀಡದೇ, ಮಾಲೀಕ ಭರತ್ ನಾಪತ್ತೆಯಾಗಿದ್ದಾನೆ ಎಂಬ ಆರೋಪ ಕೇಳಿಬಂದಿದೆ.

ಕೋಲಾರ, ಚಿಕ್ಕಬಳ್ಳಾಪುರ, ಬೆಂಗಳೂರು ಗ್ರಾಮಾಂತರ ಜಿಲ್ಲೆಯ 20 ಸಾವಿರಕ್ಕೂ ಹೆಚ್ಚು ಜನರು ಚೀಟಿ ವ್ಯವಹಾರದಲ್ಲಿ ತೊಡಗಿಸಿಕೊಂಡವರು ಇದೀಗ ಮೋಸ ಹೋಗಿದ್ದಾರೆ.

ತಿಂಗಳು ಪೂರ್ತಿ ಕೂಲಿ ಮಾಡಿ, ಹಣ ಹೊಂದಿಸಿಕೊಂಡು ಪಟಾಕಿ ಚೀಟಿ ಕಟ್ಟಿದವರು ಈಗ ಬಾಯಿ ಬಾಯಿ ಬಡಿದುಕೊಳ್ತಿದ್ದಾರೆ, 20 ಸಾವಿರ ಜನರಲ್ಲಿ ಶೇಕಡಾ 90 ರಷ್ಟು ಮಹಿಳೆಯರೇ ಇದ್ದಾರೆ ಎಂದು ತಿಳಿದುಬಂದಿದೆ.

ಚೀಟಿ ಕಟ್ಟಿ ಮೋಸ ಹೋದವರು ಇದೀಗ, ಮಾಲೀಕ ಕಚೇರಿಗೆ ಪ್ರತಿದಿನ ಅಲೆಯುತ್ತಿದ್ದಾರೆ. ಕೆಲವರಂತೂ ಮಾಲೀಕ ಬರ್ತಾರೆ ಎಂಬ ಭರವಸೆಯಿಂದ ಹಗಲೂ ರಾತ್ರಿ ಮನೆಗೂ ಹೋಗದೆ ಕಚೇರಿಯಲ್ಲೇ ಕುಳಿತು ಬಾಗಿಲು ಕಾಯ್ತಿದ್ದಾರೆ.

ಮನೆಗೆ ಹೋದರೆ ಗಂಡಂದಿರು ಹೊಡಿತಾರೆ ಎಂಬ ಭಯದಿಂದ ಕೆಲ ಮಹಿಳೆಯರು ಮನೆಗೇ ಹೋಗಿಲ್ಲ.
ಚೀಟಿ ವ್ಯವಹಾರದಲ್ಲಿ ಗ್ರಾಮಗಳಲ್ಲಿ ಏಜೆಂಟ್ ನೇಮಿಸಿದ್ದ ಭರತ್, ಅವರಿಗೆಲ್ಲಾ ಒಂದೊಂದು ಚೀಟಿ ಫ್ರೀ ಆಫರ್ ಕೊಟ್ಟಿದ್ದ. ಅದಕ್ಕಾಗಿ ಏಜೆಂಟರು ಜನರ ಬಳಿ ಹಣ ಸಂಗ್ರಹಿಸಿ, ಮಾಲೀಕನಿಗೆ ನೀಡ್ತಿದ್ದವರೂ ಇದೀಗ ಸಂಕಷ್ಟಕ್ಕೆ ಸಿಲುಕಿದ್ದಾರೆ.

ಪೊಲೀಸರಿಗೆ ದೂರು ಕೊಡೋದು, ಮಾಧ್ಯಮಕ್ಕೆ ಹೇಳಿಕೆ ಕೊಡೋದು ಮಾಡಿದ್ರೆ, ಅವರ ಹತ್ರಾನೆ ಹಣ ತಗೊಳ್ಳಿ ಎಂದು ಆರೋಪಿ ಭರತ್ ಧಮ್ಕಿ ಹಾಕಿದ್ದಾನೆ. ಹಾಗಾಗಿ ಯಾರೋಬ್ಬರು ಬಂಗಾರಪೇಟೆ ಪೊಲೀಸ್ ಠಾಣೆಗೂ ದೂರು ನೀಡದೆ ಮಾಲೀಕರ ಆಗಮನಕ್ಕೆ ಎಂದು ಕಾಯ್ತಿದ್ದಾರೆ.

ದೀಪಾವಳಿ ಹಬ್ಬಕ್ಕೆ ದುಬಾರಿ ಕಾರು ಉಡುಗೊರೆ ನೀಡಿದ ಫಾರ್ಮಾ ಕಂಪನಿ ಮಾಲೀಕ ಭಾಟಿಯಾ

ಕೆ.ಎಸ್.ಈಶ್ವರಪ್ಪಗೆ ನೀಡಿದ್ದ ಭದ್ರತೆ ವಾಪಸ್ ಪಡೆದ ಸರ್ಕಾರ

ತಲಕಾವೇರಿ ಬ್ರಹ್ಮಕುಂಡಿಕೆಯಲ್ಲಿ ಆವಿರ್ಭವಿಸಿದ ಮಾತೆ ಕಾವೇರಿ

TAGGED:000 people cheated12 crores lostaccused goes missingFirecracker ticket scam: 20
Share This Article
Facebook Twitter Copy Link Print
Previous Article ದೀಪಾವಳಿ ಹಬ್ಬಕ್ಕೆ ದುಬಾರಿ ಕಾರು ಉಡುಗೊರೆ ನೀಡಿದ ಫಾರ್ಮಾ ಕಂಪನಿ ಮಾಲೀಕ ಭಾಟಿಯಾ
Next Article ನಟ ‘ವಿಜಯ್ ಪಕ್ಷಕ್ಕೆ ಮಾನ್ಯತೆ ಇಲ್ಲ’ ; ನ್ಯಾಯಾಲಯಕ್ಕೆ ಚುನಾವಣಾ ಆಯೋಗ ಮಾಹಿತಿ

Popular Posts

‘ಸ್ಮಾರ್ಟ್ ಆಗಿ ಪ್ಯಾಕ್ ಮಾಡಿ, ಸುರಕ್ಷಿತವಾಗಿ ಊಟ ಮಾಡಿ’: ಆರೋಗ್ಯಕರ ಲಂಚ್‌ಬಾಕ್ಸ್‌ಗೆ FSSAI ಸಲಹೆಗಳು

1 Min Read

ಭಾರತೀಯರ ಆತಿಥ್ಯಕ್ಕೆ ಸಾಟಿಯಿಲ್ಲ: ಭಾರತದಲ್ಲಿ ಒಂದು ತಿಂಗಳು ಏಕಾಂಗಿಯಾಗಿ ಸಂಚರಿಸಿದ ವಿದೇಶಿ ಯುವತಿಯ ಮನದಾಳದ ಮಾತು ವೈರಲ್

2 Min Read

ಅಮೆಜಾನ್ ಉದ್ಯೋಗಿನಿಯ ಭಾವನಾತ್ಮಕ ಕ್ಷಣ: ಪೋಷಕರಿಗೆ ಕಚೇರಿ ತೋರಿಸಿ ಕನಸು ನನಸು

1 Min Read

ಶರ್ಮಿಳಾ ಮಾಂಡ್ರೆ ನಿಶ್ಚಿತಾರ್ಥ ಸುದ್ದಿ ಕೇಳಿ ಪವನ್ ಕುಮಾರ್‌ಗೆ ‘ಹಾರ್ಟ್ ಬ್ರೇಕ್’; ವೈರಲ್ ಆಯ್ತು ಫನ್ನಿ ವಿಡಿಯೋ!

2 Min Read

You Might Also Like

ಪ್ರಮುಖ

ಆರ್‌ಎಸ್‌ಎಸ್ ವಿರುದ್ಧ ಕ್ರಮ ಕೈಗೊಳ್ಳಲು ಪ್ರಿಯಾಂಕ್ ಖರ್ಗೆಗೆ ಅಧಿಕಾರವಿದೆಯೇ? ಮಹೇಶ್ ಜೇಠ್ಮಲಾನಿ ಕಾನೂನು ವಿವರಣೆ

2 Min Read
ಪ್ರಮುಖದೇಶ

Ex CM mamata ಮಮತಾ ಬ್ಯಾನರ್ಜಿ ಭದ್ರತಾ ಸಿಬ್ಬಂದಿ ಬದಲಿಸಿದ ಸುವೇಂದು ಸರ್ಕಾರ: ರಾಜಕೀಯ ಉದ್ದೇಶದ ನಡೆ ಎಂದ ಟಿಎಂಸಿ

1 Min Read
ಪ್ರಮುಖ

ಮುಂಗಾರಿಗೆ ಗ್ರಹಣ? ಉಪಗ್ರಹ ಚಿತ್ರಗಳಲ್ಲಿ ಆತಂಕಕಾರಿ ಸುಳಿವು; ಭಾರತದ ಆಕಾಶದಲ್ಲಿ ದಟ್ಟ ಮೋಡಗಳೇ ಕಾಣೆಯಾದವು.

1 Min Read
ಕರ್ನಾಟಕಪ್ರಮುಖ

ಮಕ್ಕಳು ಆಟವಾಡುವಾಗ ಗೇಟ್ ಸಮೇತ ಕುಸಿದುಬಿದ್ದ ಕಾಂಪೌಂಡ್ ಗೋಡೆ; 5 ವರ್ಷದ ಮಗು ಸಾವು

1 Min Read

Social Networks

Facebook-f Instagram Twitter
Welcome Back!

Sign in to your account

Lost your password?