Newsics_Kannada
Subscribe and watch video
ನ್ಯೂಸಿಕ್ಸ್ ಕನ್ನಡ
ಬನ್ನಿ ನಮ್ ಸಂಗಡ
newsics.com
ನಾವು ಹೆದ್ದಾರಿಗಳಲ್ಲಿ ಸಂಚರಿಸುವಾಗ ರಸ್ತೆಯ ಡಿವೈಡರ್ ಗಳಲ್ಲಿ ಸದಾ ಗುಲಾಬಿ ಬಣ್ಣದ ಸುಂದರ ಹೂವು ಬಿಡುವ ಕಣಗಿಲೆ ಗಿಡಗಳನ್ನು ಗಮನಿಸಿದ್ದೇವೆ. ಆದರೆ ಪ್ರಶ್ನೆ ಏನೆಂದರೆ, ಏಕೆ ಪ್ರತಿಯೊಂದು ಹೆದ್ದಾರಿ ಡಿವೈಡರ್ ನಲ್ಲಿ ಕೇವಲ ಈ ಗಿಡವನ್ನೇ ನೆಡುತ್ತಾರೆ? ಇದರ ಹಿಂದೆ ವೈಜ್ಞಾನಿಕ ಕಾರಣವಿದೆ.
ಹೆದ್ದಾರಿಗಳ ಮಧ್ಯ ಭಾಗದಲ್ಲಿರುವ ಡಿವೈಡರ್ಗಳಲ್ಲಿ ಕೇವಲ ಗುಲಾಬಿ ಬಣ್ಣದ ಹೂವುಗಳನ್ನು ಬಿಡುವಂತಹ ಕಣಗಿಲೆ ಸಸ್ಯವನ್ನೇ ನೆಡಲಾಗುತ್ತದೆ, ಏಕೆಂದರೆ ನಗರಗಳಲ್ಲಿನ ಹೆದ್ದಾರಿಗಳಲ್ಲಿ ಪ್ರತಿಕ್ಷಣವೂ ವಾಹನಗಳೂ ಓಡಾಡುತ್ತಲೇ ಇರುತ್ತವೆ.
ಈ ವಾಹನಗಳಿಂದ ಹೊರಸೂಸುವ ಹೊಗೆಯು ಬಹಳಷ್ಟು ಇಂಗಾಲದ ಡೈ ಆಕ್ಸೈಡ್ ಅನ್ನು ಬಿಡುಗಡೆ ಮಾಡುತ್ತವೆ. ಈ ಇಂಗಾಲದ ಡೈ ಆಕ್ಸೈಡ್ ಅನ್ನು ಹೀರಿ ಶುದ್ಧವಾದ ಆಮ್ಲಜನಕವನ್ನು ನೀಡುವ ಸಾಮರ್ಥ್ಯ ಈ ಸಸ್ಯಕ್ಕಿದೆ. ಹೌದು ಈ ಸಸ್ಯದ ಎಲೆಗಳು ಮತ್ತು ಹೂವುಗಳು ಇಂಗಾಲದ ಡೈ ಆಕ್ಸೈಡ್ ಅನ್ನು ಹೀರಿಕೊಳ್ಳುವುದಲ್ಲದೆ ವಾಯುವಿನ ಮಾಲೀನ್ಯಕಾರಕಗಳನ್ನು ತೆಗೆದುಹಾಕುವ ಮೂಲಕ ಶುದ್ಧ ಗಾಳಿಯನ್ನು ನೀಡುತ್ತದೆ. ಇದರಿಂದ ಹೆದ್ದಾರಿಯಲ್ಲಿ ಪ್ರಯಾಣಿಸುವರು ಶುದ್ಧ ಗಾಳಿಯನ್ನು ಉಸಿರಾಡಬಹುದು. ಇದೇ ಕಾರಣಕ್ಕೆ ಹೆದ್ದಾರಿಗಳಲ್ಲಿ ಈ ಸಸ್ಯವನ್ನೇ ಹೆಚ್ಚಾಗಿ ನೆಡಲಾಗುತ್ತದೆ.
ಅಷ್ಟೇ ಅಲ್ಲದೆ ಒಣ ಪ್ರದೇಶದಲ್ಲೂ ಸೊಂಪಾಗಿ ಬೆಳೆಯುವ ಈ ಸಸ್ಯಗಳಿಗೆ ಅಷ್ಟಾಗಿ ನೀರು, ಗೊಬ್ಬರ ಇತ್ಯಾದಿ ನಿರ್ವಹಣೆಯ ಅಗತ್ಯವಿಲ್ಲ. ಹೀಗಾಗಿ ಸುಲಭ ನಿರ್ವಹಣೆಯ ಕಾರಣಕ್ಕಾಗಿಯೂ ಈ ಸಸ್ಯಗಳನ್ನು ಬೆಳೆಸಲಾಗುತ್ತದೆ. ಜೊತೆಗೆ ಓಲಿಯಾಂಡರ್ ಸಸ್ಯಗಳು ಮಣ್ಣಿನ ಸವಕಳಿಯನ್ನು ತಡೆಯುತ್ತದೆ ಮತ್ತು ಶಬ್ದ ಮಾಲೀನ್ಯವನ್ನು ಕಡಿಮೆ ಮಾಡುವ ಶಕ್ತಿಯೂ ಈ ಸಸ್ಯಕ್ಕಿದೆ. ಈ ಎಲ್ಲಾ ಕಾರಣಕ್ಕಾಗಿ ಇದೇ ಸಸ್ಯವನ್ನು ಹೆದ್ದಾರಿಯ ಮಧ್ಯೆ ಭಾಗದಲ್ಲಿ ನೆಡಲಾಗುತ್ತದೆ.