newsics.com
ರಾಜು ತಾಳಿಕೋಟಿ ನಿಧನರಾಗಿದ್ದು ಬಿಗ್ ಬಾಸ್ ಖ್ಯಾತಿಯ ನಟ ಶೈನ್ ಶೆಟ್ಟಿ ಅವರ ಅಂತಿಮ ದರ್ಶನ ಪಡೆದಿದ್ದಾರೆ. ಈ ವೇಳೆ ಮಾತನಾಡಿದ ಶೈನ್ ಶೆಟ್ಟಿ, ರಾಜು ತಾಳಿಕೋಟಿ ಅವರ ಅನಾರೋಗ್ಯದ ಬಗ್ಗೆ ಮಾತನಾಡಿದ್ದಾರೆ.
ಅವರನ್ನು ನಾನೇ ಆಸ್ಪತ್ರೆಗೆ ಕರೆದೊಯ್ದೆ. ನಾಲ್ಕು ತಿಂಗಳ ಹಿಂದೆಯೆ ಬ್ಲಾಕೇಜ್ ಇರೊ ಬಗ್ಗೆ ವೈದ್ಯರು ಹೇಳಿದ್ದರಂತೆ. ಸ್ಟಂಟ್ ಹಾಕುವ ಬಗ್ಗೆ ವೈದ್ಯರು ಸಲಹೆ ನೀಡಿದ್ದರಂತೆ. ಆದರೆ ಅವರು ಅದನ್ನು ಮಾಡಿಸಿಲ್ಲ. ನಾವು ಸ್ಟಂಟ್ ಹಾಕಿಸಿ ಕ್ಲಿಯರ್ ಮಾಡಿಸಿದೆವು. ಆದರೆ ಕಿಡ್ನಿ ಮತ್ತು ಬ್ರೇನ್ ವರ್ಕ್ ಆಗಲಿಲ್ಲ. ಬಹಳ ವರ್ಷಗಳ ಕಾಲ ತಾಳಿಕೋಟೆ ಅವರ ನಮ್ಮ ಸಂಬಂಧ ಇದೆ ಎಂದು ಹೇಳಿದ್ದಾರೆ.
ಅವರೊಂದಿಗೆ ಕೆಲಸ ಮಾಡುವ ಅವಕಾಶ ಕೂಡ ಸಿಕ್ಕಿತ್ತು. ಮೂರು ದಿನ ಶೂಟಿಂಗ್ ಇತ್ತು. ಬೆಳಿಗ್ಗೆ ಬೇಗ ಶೂಟಿಂಗ್ ಗೆ ಹೋಗಬೇಕಿರೊ ಕಾರಣ ಬೇಗ ಮಲಗಿದ್ದೆವು. ನಾಳೆ ಲೇಟಾಗಿ ಬರುವುದಾಗಿ ಹೇಳಿದ್ದರು. ರಾತ್ರಿ 11:50 ಸುಮಾರು ಉಸಿರಾಟದ ಸಮಸ್ಯೆ ಬಗ್ಗೆ ನಮ್ಮ ಟೀಂ ಗೆ ಹೇಳಿದ್ದರು.
ಅವರ ರೂಂ ಪಕ್ಕದಲ್ಲೇ ನನ್ನ ರೂಂ ಇದ್ದ ಕಾರಣ ನಾನೇ ಬಂದು ಆಸ್ಪತ್ರೆಗೆ ಕರೆದೊಯ್ದೆ. ಕಾರಲ್ಲಿ ಹೋಗುವಾಗ ನನ್ನೊಂದಿಗೆ ಮಾತನಾಡುತ್ತಿದ್ದರು. ಬೇಗ ಆಸ್ಪತ್ರೆಗೆ ಹೋಗು, ನನ್ನನ್ನು ಉಳಿಸಿ ಕೊಡು ಎನ್ನುತ್ತಿದ್ದರು ಎಂದಿದ್ದಾರೆ.
9 ನಿಮಿಷಗಳಲ್ಲಿ ಆಸ್ಪತ್ರೆ ತಲುಪಿದೆವು. ಆದರೆ ಕೊನೆಯ ಮೂರು ನಿಮಿಷದಲ್ಲಿ ಮಾತನಾಡಲಿಲ್ಲ. ಕಿಡ್ನಿ ಮತ್ತು ಬ್ರೇನ್ಗೆ ಆಕ್ಸಿಜನ್ ಹಾಗೂ ರಕ್ತ ಸಂಚಾರ ಆಗುತ್ತಿರಲಿಲ್ಲ. ಪ್ರಥಮ ಚಿಕಿತ್ಸೆ ಪಡೆದು ಮಣಿಪಾಲ್ ಆಸ್ಪತ್ರೆಗೆ ಹೋದೆವು ಎಂದಿದ್ದಾರೆ.
https://www.newsics.com/2025/10/14/you-can-pay-without-internet-what-is-rbis-e-rupee/