Newsics_Kannada
Subscribe and watch video
ನ್ಯೂಸಿಕ್ಸ್ ಕನ್ನಡ
ಬನ್ನಿ ನಮ್ ಸಂಗಡ
newsics.com
ನವದೆಹಲಿ : ಏಷ್ಯಾ ಕಪ್ ಫೈನಲ್ ಪಂದ್ಯದ ನಂತರದ ಅವ್ಯವಸ್ಥೆಯ ಬಗ್ಗೆ ಪಾಕಿಸ್ತಾನ ಕ್ರಿಕೆಟ್ ಮಂಡಳಿಯ ಮುಖ್ಯಸ್ಥ ಮೊಹ್ಸಿನ್ ನಖ್ವಿ ಅವರು ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿಗೆ (ಬಿಸಿಸಿಐ) ಕ್ಷಮೆಯಾಚಿಸಿದ್ದಾರೆ.
ಏಷ್ಯನ್ ಕ್ರಿಕೆಟ್ ಮಂಡಳಿ (ಎಸಿಸಿ) ಸಭೆಯಲ್ಲಿ ನಖ್ವಿ ಅವರು ಏಷ್ಯಾಕಪ್ ವಿಜೇತರ ಟ್ರೋಫಿಯನ್ನು ಮೈದಾನದಲ್ಲಿ ಭಾರತೀಯ ತಂಡದೊಂದಿಗೆ ಆಚರಿಸಲು ಅವಕಾಶ ನಿರಾಕರಿಸಿದ ವಿವಾದಾತ್ಮಕ ದೃಶ್ಯಗಳ ನಂತರ ನಖ್ವಿ ಅವರು ಬಿಸಿಸಿಐಗೆ ಕ್ಷಮೆಯಾಚಿಸಿದ್ದಾರೆ.
ಫೈನಲ್ ಪಂದ್ಯದ ನಂತರ ಪರಿಸ್ಥಿತಿ ಹದಗೆಡಬಾರದಿತ್ತು ಎಂದು ಒಪ್ಪಿಕೊಂಡ ನಖ್ವಿ ಬಿಸಿಸಿಐಗೆ ವಿಷಾದ ವ್ಯಕ್ತಪಡಿಸಿದರು ಎಂದು ಮೂಲಗಳು ಬಹಿರಂಗಪಡಿಸಿವೆ.