newsics.com
ಮೈಸೂರು: ‘ತಮ್ಮ ಅಂತ್ಯಕ್ರಿಯೆಯನ್ನು ಮಕ್ಕಳು ಉದಯ ಶಂಕರ್ ಮತ್ತು ರವಿಶಂಕರ್ ನಡೆಸುವಂತಿಲ್ಲ’ ಎಂದು ಲೇಖಕ ಎಸ್. ಎಲ್. ಭೈರಪ್ಪ ಅವರು ಮಾಡಿರುವ ವಿಲ್ ಈಗ ಗೊಂದಲಕ್ಕೆ ಕಾರಣವಾಗಿದೆ.
ಭೈರಪ್ಪ ಅವರ ವಿಲ್ನ್ನು ಅವರ ಅಭಿಮಾನಿ ಫಣೀಶ್ ಎಂಬುವರು ಪ್ರದರ್ಶಿಸಿದ್ದರಿಂದ ಮೈಸೂರಿನ ಕಲಾಮಂದಿರ ಆವರಣದಲ್ಲಿ ಗುರುವಾರ ಸಂಜೆ ಗೊಂದಲಕ್ಕೆ ಕಾರಣವಾಗಿ, ಬಿಗುವಿನ ವಾತಾವರಣ ನಿರ್ಮಾಣವಾಯಿತು.
ವಿಲ್ ಪ್ರದರ್ಶಿಸಿದ ಭೈರಪ್ಪ ಅಭಿಮಾನಿ ಫಣೀಶ್ ಅವರನ್ನು ಪೊಲೀಸರು ವಶಕ್ಕೆ ಪಡೆದು ಠಾಣೆಗೆ ಕರೆದೊಯ್ದಿರುವುದಾಗಿ ಸರಸ್ವತಿಪುರಂ ಪೊಲೀಸರು ತಿಳಿಸಿದ್ದಾರೆ.

ನಾಳೆ (ಸೆ.26) ಮೈಸೂರಿನ ಚಾಮುಂಡಿ ಬೆಟ್ಟದ ತಪ್ಪಲಿನಲ್ಲಿ ಭೈರಪ್ಪ ಅಂತ್ಯಕ್ರಿಯೆ ನಡೆಯಲಿದ್ದು, ಅಂತ್ಯಕ್ರಿಯೆ ವೇಳೆಯೂ ಗೊಂದಲವಾಗುವ ಸಾಧ್ಯತೆಯಿದೆ.
ಬೆಂಗಳೂರಿನ ಕೆಂಗೇರಿಯ ಸುದರ್ಶನ್ ಎಂಬುವರ ಪತ್ನಿ, ಮಗಳಾದ ಶ್ರೀಮತಿ ಸಹನಾ ವಿಜಯ್ ಕುಮಾರ್ ನಡೆಸಬೇಕು ಎಂದು ವಿಲ್ನಲ್ಲಿ ಭೈರಪ್ಪ ಅವರು ಉಲ್ಲೇಖ ಮಾಡಿದ್ದಾರೆ.
S. L. Bhyrappa : ಹಿರಿಯ ಸಾಹಿತಿ ಎಸ್.ಎಲ್ ಭೈರಪ್ಪನವರ ಸ್ಮಾರಕ ನಿರ್ಮಿಸಲು ರಾಜ್ಯ ಸರ್ಕಾರ ಗ್ರೀನ್ ಸಿಗ್ನಲ್
ಬಾಡಿಗೆ ತಾಯಿ ಮೂಲಕ ಪಡೆದ ಮಗುವಿಗಾಗಿ 2,934 ಕೋಟಿ ಆಸ್ತಿ ಮಾಡಿಟ್ಟ ಕನ್ನಡದ ಏಕೈಕ ನಟಿ ಇವರೇ ನೋಡಿ