newsics.com
ಪಾಲಕ್ಕಾಡ್(ಕೇರಳ): ಪಾಲಕ್ಕಾಡ್ನ ಮೀನಾಕ್ಷಿಪುರಂನಲ್ಲಿ ಎದೆಹಾಲು ಉಣಿಸುವಾಗ ಉಸಿರುಗಟ್ಟಿ ನಾಲ್ಕು ತಿಂಗಳಿನ ಹಸುಗೂಸು ಮೃತಪಟ್ಟಿದೆ.
ಪೌಷ್ಟಿಕಾಂಶ ಕೊರತೆಯಿಂದ ಬಳಲುತ್ತಿದ್ದ ನಾಲ್ಕು ತಿಂಗಳ ಮಗುವಿನ ಗಂಟಲಿನಲ್ಲಿ ಹಾಲು ಸಿಲುಕಿದ್ದರಿಂದ ಉಸಿರುಗಟ್ಟಿ ಸಾವನ್ನಪ್ಪಿದೆ ಎಂದು ವರದಿಯಾಗಿದೆ.
ಮೀನಾಕ್ಷಿಪುರಂ ಸರ್ಕಾರಿ ಆದಿವಾಸಿ ವಸತಿಗೃಹದಲ್ಲಿ ವಾಸಿಸುತ್ತಿದ್ದ ಪಾರ್ಥಿಪನ್-ಸಂಗೀತ ದಂಪತಿಯ ಮಗಳು ಕನಿಷ್ಕಾ ಮೃತಪಟ್ಟ ಮಗು.
ತಾಯಿ ಹಾಲುಣಿಸುವಾಗ ಮಗು ಚಲನೆಯಿಲ್ಲದಿರುವುದನ್ನು ಕಂಡು ಆಸ್ಪತ್ರೆಗೆ ಕರೆದೊಯ್ಯಲಾಯಿತು. ಮಗುವಿಗೆ ಪೌಷ್ಟಿಕಾಂಶದ ಕೊರತೆಯಿತ್ತು ಎಂದು ಪೋಷಕರು ತಿಳಿಸಿದ್ದಾರೆ. ಗರ್ಭಿಣಿಯರಿಗೆ ಪ್ರತಿ ತಿಂಗಳು ನೀಡುವ 2000 ರೂ. ಸಹಾಯಧನ ಸಿಕ್ಕಿಲ್ಲ ಎಂದು ತಾಯಿ ಸಂಗೀತ ಆರೋಪಿಸಿದ್ದಾರೆ. ಎರಡು ವರ್ಷಗಳ ಹಿಂದೆ ದಂಪತಿಯ ಮೊದಲ ಮಗಳು ಕೂಡ ಇದೇ ರೀತಿ ಸಾವನ್ನಪ್ಪಿದ್ದಳು.