newsics.com
ಸಕ್ಕರೆನಾಡು ಮಂಡ್ಯದಲ್ಲಿ ಕೆಆರ್ ಪೇಟೆಯ ವಸಂತಪುರ ಗ್ರಾಮದಲ್ಲಿ ಕಳೆದ ಹಲವು ದಿನಗಳಿಂದ ಸುಮಾರು ಮುನ್ನೂರರಿಂದ ನಾನ್ನೂರು ಕೋತಿಗಳು ದಾಂಧಲೆ ನಡೆಸುತ್ತಿದ್ದವು.ಕೋತಿಗಳ ಕಾಟದಿಂದ ಗ್ರಾಮಸ್ಥರು ಹೈರಾಣಾ ರಾಗಿದ್ದಾರೆ.
ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳು ಕೋತಿಗಳನ್ನ ಹಿಡಿದು ಕಾಡಿಗೆ ಬಿಡುವ ತೀರ್ಮಾನಕ್ಕೆ ಬಂದಿದ್ದರು. ಹೀಗಾಗಿಯೇ ಕೋತಿಗಳನ್ನ ಸೆರೆ ಹಿಡಿಯಲು ಶಿಕಾರಿಪುರದಿಂದ ಕೋತಿ ಸೆರೆ ಹಿಡಿಯುವ ಪರಿಣಿತರನ್ನು ಕರೆಸಿದರು.
ಗ್ರಾಮಕ್ಕೆ ಬಂದ ಶಿಕಾರಿಪುರದ ತಂಡ ಗ್ರಾಮದಲ್ಲಿ ಕೋತಿಗಳನ್ನ ಸೆರೆ ಹಿಡಿಯಲು ಬೋನುಗಳನ್ನ ಇರಿಸಿದರು. ಈ ವೇಳೆ ಒಂದಷ್ಟು ಕೋತಿಗಳು ಬೋನಿನ ಬಳಿ ಬಂದಿದ್ದವಾದ್ರೂ, ಬೋನಿನಲ್ಲಿ ಇರಿಸಿದ್ದ ಹಣ್ಣುಗಳು ಹಾಗೂ ತಿಂಡಿ ತಿನಿಸುಗಳನ್ನ ತಿಂದು ಎಸ್ಕೇಪ್ ಆದವು ಮತ್ತೊಂದಷ್ಟು ಮಂಗಗಳು ಕೋತಿ ಹಿಡಿಯುವ ಪರಿಣಿತರು ಬಂದಿದ್ದಾರೆ ಎಂಬ ವಿಚಾರ ತಿಳಿದು ಗ್ರಾಮದ ಹೊರ ಭಾಗದ ಜಮೀನುಗಳಲ್ಲೆ ಕಾಲ ಕಳೆದವು. ದಿನಗಟ್ಟಲೇ ಬೋನಿಟ್ಟುಕೊಂಡು ಕಾದರೂ ಕೋತಿಗಳು ಮಾತ್ರ ಸೆರೆಯಾಗಲಿಲ್ಲ.