newsics.com
ಅನಾರೋಗ್ಯದ ಕಾರಣಗಳನ್ನು ನೀಡಿ ಜಗದೀಪ್ ಧನಕರ್ ಅವರು ಸೋಮವಾರ (ಜುಲೈ 21) ಉಪರಾಷ್ಟ್ರಪತಿ ಸ್ಥಾನಕ್ಕೆ ದಿಢೀರ್ ರಾಜೀನಾಮೆ ಘೋಷಿಸಿದ್ದು ದೇಶಾದ್ಯಂತ ಭಾರೀ ಚರ್ಚೆಗೆ ಎಡೆ ಮಾಡಿಕೊಟ್ಟಿದೆ. ಇದಕ್ಕೂ ಮೊದಲು, ರಾಜಕೀಯ ಚದುರಂಗ ಫಲಕದಲ್ಲಿ ತೆರೆಮರೆಯಲ್ಲಿ ನಡೆದ ಹಲವಾರು ನಡೆಗಳ ಧನಕರ್ ಅವರು ನಿರ್ಧಾರದಲ್ಲಿ ಪ್ರಮುಖ ಪಾತ್ರ ವಹಿಸಿರಬಹುದು ಎಂದು ಹೇಳಲಾಗುತ್ತಿದೆ.
ಕೆಲ ದಿನಗಳಿಂದ ಯಾರೇ ಭೇಟಿ ಯಾಗಲು ಹೋದರು ಕೇಂದ್ರ ಸರ್ಕಾರದ ಬಗ್ಗೆ ಧನ್ಕರ್ ಅಸಮಾಧಾನ ವ್ಯಕ್ತ ಪಡಿಸುತ್ತಿದ್ದರಂತೆ. ಕೇಂದ್ರ ಕೃಷಿ ಸಚಿವ ಶಿವರಾಜ್ ಸಿಂಗ್ ಚೌಹಾಣ್ರನ್ನ ಕರೆಸಿ ಕೊಂಡು ಸರ್ಕಾರ ತನ್ನ ಜಾಟ್ ಸಮುದಾಯದ ಬಗ್ಗೆ ಅನ್ಯಾಯ ಮಾಡಿದೆ ಎಂದೆಲ್ಲ ಧನ್ಕರ್ ಮಾತನಾಡಿದ್ದರು ಎಂದು ಹೇಳಲಾಗ್ತಿದೆ.
ಅಷ್ಟೇ ಅಲ್ಲ ಪ್ರಧಾನಿ ಮೋದಿ ಅವರ ಭದ್ರತೆಗೆ ಬಳಸುವ ವಾಹನಗಳನ್ನೇ ತನಗೆ ನೀಡಬೇಕು ಎಂದು ಬೇಡಿಕೆ ಗ್ರಹ ಇಲಾಖೆಯ ನಕಾರ ವ್ಯಕ್ತಪಡಿಸಿತ್ತು. ಆದರೆ ಯಾವಾಗ ಲೋಕಸಭೆಯಲ್ಲಿ ನ್ಯಾಯಮೂರ್ತಿ ವರ್ಮಾ ವಿರುದ್ಧದ ಅರ್ಜಿ ಸಲ್ಲಿಕೆ ಆಯಿತೋ ಆಗ ಸರ್ಕಾರವನ್ನು ವಿಶ್ವಾಸಕ್ಕೆ ಕೂಡ ತೆಗೆದು ಕೊಳ್ಳದೆ ವಿಪಕ್ಷ ಗಳ ಅರ್ಜಿ ಸ್ವೀಕಾರ ಮಾಡಿದ್ದು ಸರ್ಕಾರವನ್ನು ಕೆರಳಿಸಿದೆ.
ಜಸ್ಟಿಸ್ ವರ್ಮಾ ವಿರುದ್ಧ ಮಾಡಿದಂತೆ ವಿಎಚ್ಪಿ ಸಭೆಯಲ್ಲಿ ಭಾಗವಹಿಸಿದ್ದ ಜಸ್ಟಿಸ್ ಯಾದವ್ ವಿರುದ್ಧ ಮಾಡಿದರೆ ಅನ್ನುವ ಆತಂಕ ಮೋದಿ ಸರ್ಕಾರಕ್ಕೆ ಇತ್ತು. ಹೀಗಾಗಿ ಕೇಂದ್ರ ಸಚಿವ ಪಿಯುಶ್ ಗೊಯಲ್ ನಿವಾಸದಲ್ಲಿ ನಡೆದ ಸಭೆಯಲ್ಲಿ ಉಪರಾಷ್ಟ್ರಪತಿ ಗಳ ವಿರುದ್ಧ ಸಹಿ ಸಂಗ್ರಹ ಮಾಡುವ ಸಂಬಂಧ ಸಂಸದರ ಸಭೆ ನಡೆಯಿತು. ಹೀಗಾಗಿ ಸೋಮವಾರ ಜಗದೀಪ್ ಧನ್ ಕರ್ ರಾಜೀನಾಮೆ ಅನಿವಾರ್ಯ ಆಗಿತ್ತು ಎನ್ನುವ ವರದಿಗಳಿವೆ.