newsics.com
ಬೆಂಗಳೂರು: ದೇಶದಲ್ಲಿ ಇದೇ ಮೊದಲ ಬಾರಿಗೆ, ಗ್ರೇಟರ್ ಬೆಂಗಳೂರು ಪ್ರಾಧಿಕಾರ (GBA) ನಗರದಾದ್ಯಂತ ಬೀದಿ ನಾಯಿಗಳಿಗೆ ಬೇಯಿಸಿದ ಊಟ ನೀಡಲು ಮುಂದಾಗಿದೆ.
ಸಾವಿರಾರು ಬೀದಿ ನಾಯಿಗಳ ಕಲ್ಯಾಣಕ್ಕಾಗಿ ಈ ಯೋಜನೆಯನ್ನು ಪ್ರಾರಂಭಿಸಲಾಗುವುದು ಎಂದು ಜಿಬಿಎ ಅಧಿಕಾರಿಗಳು ತಿಳಿಸಿದ್ದು, ಇದರಿಂದ ಮನುಷ್ಯರ ಮೇಲೆ ಅದರಲ್ಲೂ ವಿಶೇಷವಾಗಿ ಮಕ್ಕಳ ಮೇಲೆ ನಾಯಿಗಳು ನಡೆಸುತ್ತಿರುವ ದಾಳಿಯನ್ನು ತಡೆಯುವ ಉದ್ದೇಶ ಹೊಂದಲಾಗಿದೆ ಎಂದಿದ್ದಾರೆ.
ಈ ಯೋಜನೆಯನ್ನು ಕಾರ್ಯಗತಗೊಳಿಸಲು ಬಿಬಿಎಂಪಿ ₹2.80 ಕೋಟಿ ಮೊತ್ತದ ಟೆಂಡರ್ ಕರೆದಿದೆ. ಇದರ ಅಡಿಯಲ್ಲಿ ನಗರದ ಎಂಟು ಬಿಬಿಎಂಪಿ ವಲಯಗಳಲ್ಲಿ ಪ್ರತಿಯೊಂದರಲ್ಲೂ 600 ರಿಂದ 700 ಬೀದಿ ನಾಯಿಗಳು ದೈನಂದಿನ ಊಟವನ್ನು ಪಡೆಯಲಿವೆ. ಮೆನುವಿನಲ್ಲಿ ಮಾಂಸ, ಕೋಳಿ ಮತ್ತು ಮೊಟ್ಟೆ, ಅನ್ನ ಸೇರಿದೆ.
ಪ್ರಾಣಿ ಕಲ್ಯಾಣ ಕಾರ್ಯಕರ್ತರು ಈ ನಿರ್ಧಾರವನ್ನು ಸ್ವಾಗತಿಸಿದ್ದರೂ, ಈ ಕ್ರಮವು ಸಾರ್ವಜನಿಕ ಟೀಕೆಗೆ ಗುರಿಯಾಗಿದೆ. ಕೆಲವು ನಾಗರಿಕರು ಸರ್ಕಾರದ ಆದ್ಯತೆಗಳನ್ನು ಪ್ರಶ್ನಿಸಿದ್ದಾರೆ. ಜನರು ಮೂಲಭೂತ ಆಹಾರ ಪಡೆಯಲು ಹೆಣಗಾಡುತ್ತಿರುವಾಗ, ಬೀದಿ ನಾಯಿಗಳಿಗೆ ಬಿರಿಯಾನಿ ಶೈಲಿಯ ಊಟ ನೀಡುವುದು ಸೂಕ್ತವಲ್ಲ. ತೆರಿಗೆದಾರರ ಹಣ ದುರುಪಯೋಗವಾಗಬಹುದು ಎಂದು ಹೇಳಿದ್ದಾರೆ.
ಆದರೆ, ಬೆಂಗಳೂರು ನಗರದಲ್ಲಿ ಬೆಳೆಯುತ್ತಿರುವ ಬೀದಿ ನಾಯಿ ಸಂಖ್ಯೆ, ಅವುಗಳ ಆರೋಗ್ಯಕ್ಕಾಗಿ ಈ ಯೋಜನೆ ಅತ್ಯಗತ್ಯ ಎಂದು ಜಿಬಿಎ ಹೇಳುತ್ತಿದೆ. ಈ ಯೋಜನೆ ಶೀಘ್ರದಲ್ಲೇ ಪ್ರಾರಂಭವಾಗುವ ನಿರೀಕ್ಷೆಯಿದ್ದು, ಎಲ್ಲಾ ಬಿಬಿಎಂಪಿ ವಲಯಗಳಲ್ಲಿ ದೈನಂದಿನ ಊಟದ ಸೇವೆಗಳು ಸಿಗಲಿವೆ.
Students ಶಾಲೆಯಲ್ಲಿ ಗದರಿದ್ದಕ್ಕೆ ಪ್ರಾಂಶುಪಾಲರನ್ನೇ ಚಾಕುವಿನಿಂದ ಇರಿದು ಕೊಂದ ವಿದ್ಯಾರ್ಥಿಗಳು!
ಗಾಣಗಾಪುರ ದತ್ತನ ಸನ್ನಿಧಿಯಲ್ಲಿ ಭಕ್ತರ ಭಾರೀ ನೂಕುನುಗ್ಗಲು: ಕಾಲ್ತುಳಿತದಲ್ಲಿ ಮಹಿಳೆ ಸಾವು