newsics.com
ಛತ್ತೀಸ್ ಗಢ: ಮದ್ಯದ ಅಮಲಿನಲ್ಲಿದ್ದ ವ್ಯಕ್ತಿ ತನ್ನ ಬೈಕಿನಲ್ಲಿ ಅಂಗಡಿಗೆ ನುಗ್ಗಿ ವಿಕಲಚೇತನ ತನ್ನ ತಂದೆಯ ಮೇಲೆ ಚಾಕುವಿನಿಂದ 15 ಬಾರಿ ಚುಚ್ಚಿ ಹಲ್ಲೆ ನಡೆಸಿದ ಘಟನೆ ಛತ್ತೀಸ್ ಗಢದ ಬಲೋಡಾಬಜಾರ್ ನಲ್ಲಿ ನಡೆದಿದೆ. ಈ ದೃಶ್ಯ ಅಂಗಡಿಯ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ.
ಜೂನ್ 17 ರಂದು ಈ ಘಟನೆ ನಡೆದಿದ್ದು, ನರೇಂದ್ರ ಸಿಂಗ್ ಚಾವ್ಲಾ ಅವರ ಹಿರಿಯ ಮಗ ಅಮರ್ಜೀತ್ ತನ್ನ ದ್ವಿಚಕ್ರ ವಾಹನದಲ್ಲಿ ಅಂಗಡಿಗೆ ಭೇಟಿ ನೀಡಿ ತಂದೆಯ ಮೇಲೆ ಆಕ್ರಮಣಕಾರಿಯಾಗಿ ಹಲ್ಲೆ ನಡೆಸಿದ್ದಾನೆ.
ನರೇಂದ್ರ ಎಂದಿನಂತೆ ಅಂಗಡಿಯಲ್ಲಿ ಗ್ರಾಹಕರಿಗಾಗಿ ಕಾಯುತಿದ್ದರು. ಇತ್ತ ಮಗ ಬೈಕ್ ಬರುತ್ತಿರುವುದನ್ನು ಗಮನಿಸಿದ ಅವರು ಕುಂಟುತ್ತಾ ಹೊರಕ್ಕೆ ಹೋಗಲು ನೋಡುತ್ತಾರೆ. ಆದರೆ ಮಗ ಬಂದು ತಂದೆಯ ಮೇಲೆ ಹಲ್ಲೆ ನಡೆಸಿದ್ದಾರೆ. ಹಲ್ಲೆಗೆ ನಿಖರವಾದ ಕಾರಣ ಇನೂ ತಿಳಿದು ಬಂದಿಲ್ಲ.