ಮಂಡ್ಯ: ದೇಶದ ಮೊದಲ ರೈತ ಶಾಲೆಯನ್ನು ಮಂಡ್ಯ ಜಿಲ್ಲೆಯ ಹಾಲಕರೆ ಗ್ರಾಮದಲ್ಲಿ ಪ್ರಾರಂಭವಾಗಿದೆ. ಗ್ರಾಮದ ಉಪನ್ಯಾಸಕ ಸತ್ಯಮೂರ್ತಿ ಮತ್ತು ಅವರ ತಂಡ ಗ್ರಾಮದಲ್ಲಿ ರೈತ ಶಾಲೆ ತೆರೆದಿದೆ.
ಇನ್ನು ಈ ಶಾಲೆ ಕಾರ್ಯಾರಂಭ ಮಾಡಿದ್ದು, ಮಂಡ್ಯ ಜಿಲ್ಲಾಧಿಕಾರಿ ಡಾ ಕುಮಾರ್ ಹಾಗೂ ವಿಶ್ವ ಒಕ್ಕಲಿಗರ ಮಠದ ನಿಶ್ಚಲಾನಂದನಾಥ್ ಸ್ವಾಮೀಜಿ ಉದ್ಘಾಟನೆ ಮಾಡಿದ್ದಾರೆ.ಉದ್ಘಾಟನೆಗೆ ಬಂದ ಅಥಿತಿಗಳನ್ನ ಎತ್ತಿನಗಾಡಿ ಮೂಲಕ ಗ್ರಾಮದಲ್ಲಿ ಮೆರವಣಿಗೆ ಮಾಡಲಾಯ್ತು.
ಇಲ್ಲಿ ರೈತರಿಗೆ ಕೃಷಿಯಿಂದ ಸ್ವಾವಲಂಬನೆ ಬದುಕು, ಕೃಷಿ ಮಾರುಕಟ್ಟೆ, ಕೃಷಿ ಮತ್ತು ತಂತ್ರಜ್ಞಾನ, ಕೃಷಿ ಚಟುವಟಿಕೆ ಸೇರಿದಂತೆ ಆಧುನಿಕ ಕೃಷಿ ಬಗ್ಗೆ ಮಾಹಿತಿ ನೀಡಲಿದ್ದಾರೆ. ರೈತರಿಗೆ ಉಪಯೋಗವಾಗಲಿದ್ದು, ಹಳೆ ಬೇಸಾಯ ಪದ್ದತಿಯಿಂದಾಗುವ ನಷ್ಟವನ್ನ ತಪ್ಪಿಸಬಹುದಾಗಿದೆ.
ಶಾಲೆಯು ಇಸ್ರೇಲ್ ಸೇರಿದಂತೆ ವಿವಿಧ ದೇಶಗಳ ರೈತರ ಯಶಸ್ಸಿನ ಕಥೆಗಳನ್ನು ಪ್ರದರ್ಶಿಸುತ್ತದೆ. ಆಲಕೆರೆಯಲ್ಲಿ ಎರಡು ತಿಂಗಳಲ್ಲಿ ಸೆಮಿನಾರ್ ಹಾಲ್ ಮತ್ತು ಕೆಲವು ತರಗತಿ ಕೊಠಡಿಗಳು ಸಿದ್ಧಗೊಳ್ಳಲಿವೆ. ರಾಜ್ಯಾದ್ಯಂತ ಇಂತಹ ಹಲವು ಶಾಲೆಗಳನ್ನು ತೆರೆಯುವ ಯೋಜನೆ ಒಳಗೊಂಡಿದೆ ಎಂದು ಮಂಡ್ಯದ ಉಪನ್ಯಾಸಕ ಸತ್ಯಮೂರ್ತಿ ತಿಳಿಸಿದ್ದಾರೆ.