newsics.com
ತ್ರಿಶೂರ್: ಮರದಲ್ಲಿ ಪ್ರಧಾನಿ ನರೇಂದ್ರ ಮೋದೀಯವರನ್ನು ಕೆತ್ತಲಾಗಿದ್ದು, ಈ ಕುರಿತ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ವೈರಲ್ ಆಗಿದೆ.
ಮೋದಿಯವರ ಆರು ಅಡಿ ವಿಗ್ರಹವನ್ನು ತೇಗದ ಮರದಿಂದ ಕೆತ್ತಲಾಗಿದ್ದು, ಕೇರಳದ ತ್ರಿಶೂರಿನ ಶಿಲ್ಪಿ ಕೊಂಡಗಲ್ಲೂರಿನ ರವಿಚಂದ್ರನ್ ಎಂಬುವರು ಈ ವಿಗ್ರಹ ಕೆತ್ತಿದ್ದಾರೆ.
ಎಕ್ಸ್ನಲ್ಲಿ ಕರಮುಡಿಮುತ್ತು ಹೆಸರಿನಲ್ಲಿ ಮಾಡಲಾಗಿರುವ ಪೋಸ್ಟ್ನಲ್ಲಿ ಈ ಕುರಿತು ಮಾಹಿತಿ ನೀಡಲಾಗಿದೆ.
ಈ ಬಗ್ಗೆ ಹಲವು ನೆಟ್ಟಿಗರು ಬಗೆಬಗೆಯ ಕಮೆಂಟ್ ಮಾಡಿದ್ದು, ಚಂದ್ರಹಾಸ್ ಎನ್ನುವವರು ಮೋದಿ ವಿಗ್ರಹವನ್ನು ಕರ್ನಾಟಕದಲ್ಲಿ ಬೆಳೆದ ತೇಗದಿಂದಲೇ ಕೆತ್ತಲಾಗಿದೆ ಎಂದು ಹೇಳಿಕೊಂಡಿದ್ದಾರೆ.
https://x.com/KaramudiMuttu/status/1931271025486106716?t=63Hf5sQT-zRGIgc4Zyw53A&s=19