ನವದೆಹಲಿ: ಪಹಲ್ಗಾಮ್ ಉಗ್ರ ದಾಳಿಗೆ ಪ್ರತೀಕಾರದ ಕ್ರಮವಾಗಿ ವಿವಿಧ ರೀತಿಯ ನಿರ್ಬಂಧ ಕ್ರಮಗಳನ್ನು ಭಾರತ ಪಾಕಿಸ್ತಾನದ ಮೇಲೆ ಹೇರುತ್ತಿದೆ. ಇದೀಗ ಪಾಕಿಸ್ತಾನಕ್ಕೇ ಮತ್ತೂಂದು ಹೊಡೆತ ನೀಡಿದೆ.ಎಡಿಬಿ ಅಧ್ಯಕ್ಷ ಮಸಾಟೊ ಕಾಂಡಾ ಮತ್ತು ಇಟಾಲಿಯನ್ ಹಣಕಾಸು ಸಚಿವ ಜಿಯಾನ್ಕಾರ್ಲೊ ಗಿಯೊರ್ಗೆಟ್ಟಿ ಇಬ್ಬರನ್ನೂ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಭೇಟಿ ಮಾಡಿದ್ದು, ಅವರು ಏಷ್ಯನ್ ಅಭಿವೃದ್ಧಿ ಬ್ಯಾಂಕ್ (ಎಡಿಬಿ) ಅಧ್ಯಕ್ಷರನ್ನು ಭೇಟಿ ಮಾಡಿ ಪಾಕಿಸ್ತಾನಕ್ಕೆ ನೀಡುವ ಹಣವನ್ನು ಕಡಿತಗೊಳಿಸುವಂತೆ ಒತ್ತಾಯಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಈಗಾಗಲೇ ಆರ್ಥಿಕ ಸಂಕಷ್ಟದಲ್ಲಿ ಸಿಲುಕಿರುವ, ಹಣದುಬ್ಬರದಿಂದ ಕಂಗಾಲಾಗಿರುವ ಪಾಕಿಸ್ತಾನವು, ಫಿಲಿಪೈನ್ಸ್ ಮೂಲದ ಪ್ರಾದೇಶಿಕ ಅಭಿವೃದ್ಧಿ ಬ್ಯಾಂಕ್ ಆದ ಎಡಿಬಿಯಿಂದ ಬರುವ ನಿಧಿಯ ಮೇಲೆ ಸಂಪೂರ್ಣ ಅವಲಂಬಿತವಾಗಿದೆ. ಹೀಗಾಗಿ ಏಷ್ಯನ್ ಅಭಿವೃದ್ಧಿ ಬ್ಯಾಂಕಿನಿಂದ ಪಾಕ್ಗೆ ನೀಡುವ ಹಣವನ್ನು ಕಡಿತಗೊಳಿಸುವ ಮೂಲಕ ಪಾಕ್ನ ಗಡಿಯಾಚೆಗಿನ ಭಯೋತ್ಪಾದನೆಗೆ ಬೆಂಬಲವನ್ನು ಹತ್ತಿಕ್ಕಲು ಕ್ರಮ ಕೈಗೊಳ್ಳಬಹುದು ಎನ್ನುವುದು ಸಚಿವೆ ನಿರ್ಮಲಾ ಸೀತಾರಾಮನ್ ಈ ನಿರ್ಧಾರವನ್ನು ಕೈಗೊಂಡಿದ್ದಾರೆ ಎನ್ನಲಾಗಿದೆ.