newsics.com
ಯಲ್ಲಾಪುರ(ಉತ್ತರ ಕನ್ನಡ): ಅರಬೈಲ್ ಘಟ್ಟದಲ್ಲಿ ಅಡುಗೆ ಅನಿಲ ಹೊತ್ತು ಸಂಚರಿಸುತ್ತಿದ್ದ ಗ್ಯಾಸ್ ಟ್ಯಾಂಕರ್ ಚಾಲಕನಿಗೆ ಹೃದಯಘಾತವಾದ್ದರಿಂದ ವಾಹನ ಲಾರಿಗೆ ಗುದ್ದಿದ ಘಟನೆ ಸೋಮವಾರ ನಡೆದಿದೆ.
ತಮಿಳುನಾಡು ಮೂಲದ ಗ್ಯಾಸ್ ಟ್ಯಾಂಕರ್ನ ಚಾಲಕ ಅಯೂಬ್ ಖಾನ್ (63)ಗೆ ಹಠಾತ್ ಆಗಿ ಎದೆನೋವಿನಿಂದ ಚಾಲಕ ವಾಹನದಲ್ಲಿಯೇ ಸಾವನಪ್ಪಿದರು. ಅವರ ಸಾವಿನ ನಂತರ ಟ್ಯಾಂಕರ್ ಅಡ್ಡಾದಿಡ್ಡಿ ಚಲಿಸಿ ಇನ್ನೊಂದು ಲಾರಿಗೆ ಗುದ್ದಿತು.ಈ ಅಪಘಾತದಿಂದ ಎರಡು ಗಂಟೆ ವಾಹನ ದಟ್ಟಣೆ ಉಂಟಾಗಿತ್ತು.