newsics.com
ಜಮ್ಮು: ಕಾಶ್ಮೀರದ ಪಹಲ್ಗಾಮ್ನಲ್ಲಿ ನಡೆದ ಭಯೋತ್ಪಾದಕ ದಾಳಿಯಲ್ಲಿ 28 ಮಂದಿ ಪ್ರವಾಸಿಗರು ಸಾವನ್ನಪ್ಪಿದ್ದಾರೆ. ಭಾರತೀಯ ನೌಕಾಪಡೆಯ ಅಧಿಕಾರಿ ಲೆಫ್ಟಿನೆಂಟ್ ವಿನಯ್ ನರ್ವಾಲ್ ಉಗ್ರರ ಗುಂಡಿನ ದಾಳಿಗೆ ಬಲಿಯಾಗಿದ್ದಾರೆ.
ಅವರು ಮೂಲತಃ ಹರಿಯಾಣದ ಕರ್ನಾಲ್ ಜಿಲ್ಲೆಯವರಾಗಿದ್ದರು. ಅವರು ಇತ್ತೀಚೆಗೆ ಏಪ್ರಿಲ್ 16 ರಂದು ಹಿಮಾಂಶಿ ಎಂಬುವವರ ಜೊತೆ ವಿವಾಹವಾಗಿದ್ದರು. ಏಪ್ರಿಲ್ 19ರಂದು ರಿಸಪ್ಶನ್ ಮಾಡಿಕೊಂಡಿದ್ದರು. ಈ ಹಿನ್ನೆಲೆ ಅವರು ತಮ್ಮ ಪತ್ನಿಯ ಜೊತೆ ಪ್ರವಾಸಕ್ಕೆಂದು ಕಾಶ್ಮಿರಕ್ಕೆ ತೆರಳಿದ್ದರು ಆದ್ರೆ, ಉಗ್ರರ ಅಟ್ಟಹಾಸಕ್ಕೆ ಅವರು ಕೊನೆಯುಸಿರೆಳೆದಿದ್ದಾರೆ. ಸದ್ಯ ಅವರ ಪಾರ್ಥೀವ ಶರೀರ ತವರಿಗೆ ಮರಳಿದ್ದು, ಇದೀಗ ಅಂತಿಮ ನಮನದ ಸಂದರ್ಭದಲ್ಲಿ ದುಃಖ ತಾಳಲಾರದೆ ಅವರು ಬಿಕ್ಕಿ ಬಿಕ್ಕಿ ಕಣ್ಣೀರು ಹಾಕಿರುವ ದೃಶ್ಯ ಮನಕಲಕುವಂತಿದೆ.