newsics.com
ಬೆಂಗಳೂರು: ವಿಧಾನಸೌಧ ಮುಂದೆ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ ಸಂಜಯ್ ಎಂಬ ಯುವಕನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಈ ಯುವಕ ಹಾಸನ ಜಿಲ್ಲೆ ಚನ್ನರಾಯಪಟ್ಟಣ ಮೂಲದವನು ಎನ್ನಲಾಗಿದೆ. ಪ್ಲಾಸ್ಟಿಕ್ ಕವರ್ನಲ್ಲಿ ವಿಷ ಮತ್ತು ಕೆಲವು ದಾಖಲೆಗಳನ್ನು ತಂದಿದ್ದ ಸಂಜಯ್ ಚನ್ನಪಟ್ಟಣ ಠಾಣೆ ಪೊಲೀಸರು ಹೊಡೆದಿದ್ದಾರೆ, ನನಗೆ ನ್ಯಾಯ ಬೇಕೆಂದು ವಿಷ ಸೇವಿಸಲು ಮುಂದಾಗಿದ್ದ. ಕೂಡಲೇ ಪೊಲೀಸರು ತಡೆದು ಆಸ್ಪತ್ರೆಗೆ ಕರೆದೊಯ್ದು ಚಿಕಿತ್ಸೆ ಕೊಡಿಸಿದ್ದು, ಬಳಿಕ ಸಂಜಯ್ನನ್ನು ವಿಧಾನಸೌಧ ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.
ಚನ್ನರಾಯಪಟ್ಟಣ ಠಾಣೆ ಪೊಲೀಸರು ಹೊಡೆದು ಕಿರುಕುಳ ನೀಡಿದ್ದು, ನನಗೆ ನ್ಯಾಯಬೇಕೆಂದು ಸಂಜಯ್ ಆತ್ಮಹತ್ಯಗೆ ಯತ್ನಿಸಿದ್ದಾನೆ ಎಂದು ತಿಳಿದುಬಂದಿದೆ.
Poonam Gupta ಆರ್ಬಿಐ ಡೆಪ್ಯೂಟಿ ಗವರ್ನರ್ ಆಗಿ ಆರ್ಥಿಕ ತಜ್ಞೆ ಪೂನಂ ಗುಪ್ತಾ ನೇಮಕ