newsics.com
ಅಕ್ರಮ ಚಿನ್ನ ಸಾಗಾಟ ಪ್ರಕರಣಕ್ಕೆ ಸಂಬಂಧಪಟ್ಟಂತೆ ಈಗಾಗಲೇ ಪೊಲೀಸರು ನಟಿ ರನ್ಯಾ ರಾವ್ ಅವರನ್ನು ಬಂಧಿಸಿ ವಿಚಾರಣೆ ನಡೆಸಿದ್ದು, ಇದೀಗ ಈ ಪ್ರಕರಣಕ್ಕೆ ಬಿಗ್ ಟ್ವಿಸ್ಟ್ ಸಿಕ್ಕಿದೆ.
ರನ್ಯಾ ಕಸ್ಟಮ್ಸ್ ಅಧಿಕಾರಿಗಳ ಬಲೆಗೆ ಬೀಳಲು ಅವರ ಆ ಸ್ನೇಹಿತರೇ ಕಾರಣ ಅನ್ನೋ ಮಾಹಿತಿ ರಿವೀಲ್ ಆಗಿದೆ. ಚಿನ್ನದ ಬೆಲೆ ಗಗನಕ್ಕೆ ಏರಿರುವ ಈ ಸಮಯದಲ್ಲಿ ನಟಿ ದುಬೈನಿಂದ ಕೆಜಿ ಗಟ್ಟಲೆ ಚಿನ್ನ ತಂದು ದುಬೈನಿಂದ ಬೆಂಗಳೂರಿನ ಮಾರಾಟ ಮಾಡ್ತಿದ್ರು.
ಒಂದು ವರ್ಷದಲ್ಲಿ ಸರಿಸುಮಾರು 40 ಬಾರಿ ದುಬೈ ಪ್ರಯಾಣ ಮಾಡಿದ್ರು. ಕಳೆದ 15 ದಿನಗಳಲ್ಲಿ 3 ಮೂರು ಬಾರಿ ದುಬೈ ಹೋಗಿ ಬಂದಿರೋ ರನ್ಯಾ, ಪ್ರತಿ ಬಾರಿ ಟೂರಿಸಂ ವೀಸಾ ಬಳಸುತ್ತಿದ್ರು. ಭಾರತಕ್ಕೆ ಹೋಲಿಕೆ ಮಾಡಿದ್ರೆ, ದುಬೈಗೆ ಚಿನ್ನದ ಬೆಲೆ 1 ಗ್ರಾಂಗೆ, 2500 ರೂ ವ್ಯತ್ಯಾಸವಿದೆ. ಹೀಗಾಗಿ ಅಲ್ಲಿಂದ ಚಿನ್ನ ತಂದು ಮಾರಾಟ ಮಾಡಿ ಕಡಿಮೆ ಅವಧಿಯಲ್ಲೇ ಬೇಗ ಹಣ ಮಾಡುವ ಪ್ಲಾನ್ ಮಾಡಿದ್ದ ನಟಿ ರನ್ಯಾ ಸರಿಯಾಗಿಯೇ ಸಿಕ್ಕಿಬಿದ್ದಿದ್ದಾರೆ.
ಹಲವು ಬಾರಿ ರನ್ಯಾ ದುಬೈಗೆ ಹೋಗಿ ಬರೋದನ್ನ ಗಮನಸಿದ್ದ ಸ್ನೇಹಿತರೇ ಕಸ್ಟಮ್ಸ್ ಅಧಿಕಾರಿಗಳಿಗೆ ಮಾಹಿತಿ ನೀಡಿದ್ರು ಎನ್ನಲಾಗ್ತಿದೆ. ಇನ್ನು ಪಕ್ಕಾ ಮಾಹಿತಿಯೊಂದಿಗೆ ರನ್ಯಾಗಾಗಿ ಅಧಿಕಾರಿಗಳು ಏರ್ಪೋರ್ಟ್ ನಲ್ಲಿಯೇ ಕಾದು ಕುಳಿತಿದ್ರು. ದುಬೈನಿಂದ ನೇರವಾಗಿ ಬೆಂಗಳೂರಿಗೆ ಬರುವ ಪ್ಲೈಟ್ ನಲ್ಲಿ ಬರ್ತಿದ್ದ ರನ್ಯಾಗಾಗಿ 6 ಗಂಟೆ ಮುಂಚೆನೇ ಎರ್ಪೋಟ್ ಗೆ ಬಂದಿದ್ದ ಕಸ್ಟಮ್ಸ್ ಅಧಿಕಾರಿಗಳು. ರನ್ಯಾ ಬರ್ತಿದ್ದಂತೆ ಲಾಕ್ ಮಾಡಿದ್ರು. ರನ್ಯಾ ಬ್ಯಾಗ್ ಚೆಕ್ ಮಾಡಿ ರನ್ಯಾ ಬಳಿಯಿದ್ದ ವಸ್ತುಗಳನ್ನ ಸೀಜ್ ಮಾಡಿದ್ರು.
ನಿನ್ನೆ ವಿಚಾರಣೆ ನಡೆಸಿ ತೀರ್ಪು ಕಾಯ್ದಿರಿಸಿದ್ದ ನ್ಯಾಯಾಲಯ ಇಂದು ತೀರ್ಪು ಪ್ರಕಟಿಸಿದೆ. ನಟಿ ರನ್ಯಾ ರಾವ್ ಅವರನ್ನು 3 ದಿನಗಳ ಕಾಲ ಡಿಆರ್ ಐ ಕಸ್ಟಡಿಗೆ ನೀಡಿ ನ್ಯಾಯಮೂರ್ತಿ ವಿಶ್ವನಾಥ್ ಸಿ ಗೌಡರ್ ಆದೇಶ ಹೊರಡಿಸಿದ್ದಾರೆ.