newsics.com
ಬೆಂಗಳೂರು: ಯೋಗ ಶಿಕ್ಷಕಿಯೊಬ್ಬರನ್ನು ಅಪಹರಿಸಿ ನಾಲ್ವರು ಅತ್ಯಾಚಾರಕ್ಕೆ ಯತ್ನಿಸಿ, ಆಕೆಯನ್ನು ಜೀವಂತ ಸಮಾಧಿ ಮಾಡಲು ಯತ್ನಿಸಿರುವ ಘಟನೆ ಚಿಕ್ಕಬಳ್ಳಾಪುರ ಜಿಲ್ಲೆಯ ಶಿಡ್ಲಘಟ್ಟ ತಾಲೂಕಿ ದಿಬ್ಬೂರಹಳ್ಳಿ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.
ಯೋಗ ಶಿಕ್ಷಕಿಯನ್ನು ಅಪಹರಣ ಮಾಡಿದ್ದಲ್ಲದೆ ಆಕೆಯ ಮೇಲೆ ನಾಲ್ವರು ದುರುಳರು ಅತ್ಯಾಚಾರಕ್ಕೆ ಯತ್ನಿಸಿದ್ದಾರೆ. ಈ ವೇಳೆ ಯೋಗ ಶಿಕ್ಷಕಿ ಅದಕ್ಕೆ ವಿರೋಧ ವ್ಯಕ್ತಪಡಿಸಿದ್ದಾರೆ. ಕೂಡಲೇ ಆಕೆಯ ಮೇಲೆ ಹಲ್ಲೆ ಮಾಡಿ ಆಕೆಯನ್ನು ಜೀವಂತ ಸಮಾಧಿ ಮಾಡಿ ಅಲ್ಲಿಂದ ತೆರಳಿದ್ದಾರೆ.
ದುರುಳರು ಯೋಗ ಶಿಕ್ಷಕಿಯನ್ನು ಬೆಂಗಳೂರಿನ ಕೆಆರ್ ಪುರಂನಲ್ಲಿ ಅಪಹರಣ ಮಾಡಿದ್ದು, ಅಂದು ಇಡೀ ಸಂಜೆ ಬೆಂಗಳೂರು ಸುತ್ತಿದ್ದಾರೆ. ನಂತರ ಆಕೆಯ ಮೇಲೆ ಅತ್ಯಾಚಾರಕ್ಕೆ ಯತ್ನಿಸಿದ್ದಾರೆ. ಅಪಹರಣ, ಅತ್ಯಾಚಾರಕ್ಕೆ ಯತ್ನ, ಹಲ್ಲೆ ಹಾಗೂ ಜೀವಂತ ಸಮಾಧಿ ಮಾಡಿದ ಬಳಿಕವೂ ಯೋಗ ಶಿಕ್ಷಕಿ ಸಮಾಧಿಯಿಂದ ಜೀವಂತವಾಗಿ ಎದ್ದು ಬಂದಿದ್ದಾರೆ.
ಬಳಿಕ ಸತ್ತಂತೆ ನಟಿಸಿ ಗುಂಡಿಯಿಂದ ಯೋಗ ಶಿಕ್ಷಕಿ ಹೊರಗಡೆ ಬಂದಿದ್ದಾರೆ. ಅರೆಬೆತ್ತಳಾಗಿ ನಿರ್ಜನ ಪ್ರದೇಶದಿಂದ ಯೋಗ ಶಿಕ್ಷಕಿ ಬಂದಿದ್ದಾರೆ. ರಾತ್ರಿ ಇಡೀ ನಡೆದು ದಿಬ್ಬೂರಹಳ್ಳಿ ತಲುಪಿದ್ದಾರೆ. ಸ್ಥಳೀಯರು ಅವರಿಗೆ ಬಟ್ಟೆ ಕೊಟ್ಟಿದ್ದರೆ. ನಂತರ ಠಾಣೆಗೆ ದೂರು ನೀಡಿದ್ದಾರೆ. ದೂರು ದಾಖಲಿಸಿಕೊಂಡ ಚಿಕ್ಕಬಳ್ಳಾಪುರ ಪೊಲೀಸರು ನಾಲ್ವರನ್ನು ಬಂಧಿಸಿದ್ದಾರೆ.
ಅಕ್ಟೋಬರ್ 23ರಂದು ಯೋಗ ಶಿಕ್ಷಕಿ ಅಪಹರಣಕ್ಕೆ ಒಳಗಾಗಿದ್ದರು. ಯೋಗ ಶಿಕ್ಷಕಿ ಪ್ರಿಯಕರ ಸಂತೋಷ್ ಕುಮಾರ್ ಪತ್ನಿಯೇ ಸುಪಾರಿ ನೀಡಿದ್ದಾರೆ ಎಂದು ಕೇಳಿಬಂದಿದೆ. ಸಂತೋಷ ಜತೆ ಶಿಕ್ಷಕಿ ಅಕ್ರಮ ಸಂಬಂಧ ಹೊಂದಿದ್ದರು. ಶಿಕ್ಷಕಿ ಹತ್ಯೆಗೆ ಸಂತೋಷ್ ಕುಮಾರ್ ಪತ್ನಿ ಸುಪಾರಿ ನೀಡಿದ್ದಾರೆ. ಮದುವೆಯಾಗಿ ಗಂಡನಿಂದ ಪ್ರತ್ಯೇಕವಾಗಿ ಯೋಗ ಶಿಕ್ಷಕಿ ಜೀವಿಸುತ್ತಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.
ಕಾಫಿ ಸೇವನೆಗೂ ಮುನ್ನ ಇರಲಿ ಹೆಚ್ಚು ಎಚ್ಚರ! ಗರ್ಭಪಾತಕ್ಕೂ ಕಾರಣವಾದೀತು…
ವಯಾಗ್ರ ಸೇವಿಸಿ ಬಾಲಕಿ ಜತೆ ಲೈಂಗಿಕ ಸಂಪರ್ಕ: ಸೂರತ್ ಡೈಮಂಡ್ ಮ್ಯಾನೇಜರ್ ಸಾವು