ಮೈಸೂರು ಅರಮನೆ ಆವರಣ ದಾಟಿ ರಸ್ತೆಯಲ್ಲಿ ಅಡ್ಡಾದಿಡ್ಡಿ ಓಡಿದ ದಸರಾ ಆನೆ‌ ಕಂಜನ್, ಜನ‌ ಕಂಗಾಲು

newsics.com ಮೈಸೂರು: ದಸರಾ ಆನೆ ಕಂಜನ್ ಮೈಸೂರು ಅರಮನೆಯ ಜಯಮಾರ್ತಾಂಡ ದ್ವಾರದ ಮೂಲಕ ರಸ್ತೆಗೆ ನುಗ್ಗಿ ಅಡ್ಡಾದಿಡ್ಡಿ ಓಡಿದ್ದು, ಜನ ಭಯದಿಂದ ದಿಕ್ಕಾಪಾಲಾದ ಘಟನೆ ಶುಕ್ರವಾರ ರಾತ್ರಿ ನಡೆದಿದೆ. ಸಾಮಾಜಿಕ‌ ಜಾಲತಾಣಗಳಲ್ಲಿ ಈ ವಿಡಿಯೋ ಹರಿದಾಡಿದ್ದು, ಕಾಲಿಗೆ ಕಟ್ಟಿದ್ದ ಸರಪಳಿ ಕಿತ್ತು ಓಡಿದ ಆನೆ‌ ಕಂಜನ್ ನಿಯಂತ್ರಿಸಲು ಮಾವುತರು ಪರದಾಡಿದ್ದಾರೆ. ಕಂಜನ್ ಹಿಂದೆಯೇ ಓಡಿದ ದಸರಾ ಗಜಪಡೆಯ ಆನೆ ಮಹೇಂದ್ರ ಕಂಜನ್‌ನ್ನು ನಿಯಂತ್ರಿಸಲು ಪ್ರಯತ್ನಿಸಿದೆ. ಆದರೂ ಸಾಧ್ಯವಾಗಿಲ್ಲ. ಎರಡು ಆನೆ ಓಡುತ್ತಿರುವುದನ್ನು ಕಂಡ ಜನ ಭಯಭೀತರಾಗಿ ಓಡಿದ್ದಾರೆ. … Continue reading ಮೈಸೂರು ಅರಮನೆ ಆವರಣ ದಾಟಿ ರಸ್ತೆಯಲ್ಲಿ ಅಡ್ಡಾದಿಡ್ಡಿ ಓಡಿದ ದಸರಾ ಆನೆ‌ ಕಂಜನ್, ಜನ‌ ಕಂಗಾಲು