newsics.com
ಚಂಡಿಗಢ: ಭಾರತದ ಅತ್ಯಂತ ಶ್ರೀಮಂತ ಮಹಿಳೆ ಸಾವಿತ್ರಿ ಜಿಂದಾಲ್, ಹರಿಯಾಣ ವಿಧಾನಸಭಾ ಚುನಾವಣೆಯ ಕಣಕ್ಕೆ ಇಳಿದಿದ್ದಾರೆ. ಈ ಬಾರಿ ಹಿಸ್ಸಾರ್ ಕ್ಷೇತ್ರದಿಂದ ಸಾವಿತ್ರಿ ಜಿಂದಾಲ್ ಬಿಜೆಪಿಯಿಂದ ಟಿಕೆಟ್ ಸಿಗುವ ನಿರೀಕ್ಷೆಯಲ್ಲಿದ್ದರು. ಆದ್ರೆ ಬಿಜೆಪಿ ಸಾವಿತ್ರಿಯವರಿಗೆ ಟಿಕೆಟ್ ನಿರಾಕರಿಸಿ ಹಿಸ್ಸಾರ್ ಕ್ಷೇತ್ರದಿಂದ ಹಾಲಿ ಸಚಿವ ಕಮಲ್ ಗುಪ್ತಾ ಅವರಿಗೆ ಟಿಕೆಟ್ ನೀಡಿದೆ.
74 ವರ್ಷದ ಸಾವಿತ್ರಿ ಜಿಂದಾಲ್ ಈಗ ಸ್ವತಂತ್ರ ಅಭ್ಯರ್ಥಿಯಾಗಿ ಹಿಸ್ಸಾರ್ ಕ್ಷೇತ್ರದ ಕಣಕ್ಕೆ ಇಳಿದಿದ್ದಾರೆ. ಈಗಾಗಲೇ ನಾಮಪತ್ರ ಸಲ್ಲಿಸಿರುವ ಸಾವಿತ್ರಿ ಜಿಂದಾಲ್ ಅವರು, ಹಿಸ್ಸಾರದ ಜನತೆ ನನ್ನ ಕುಟುಂಬವಿದ್ದಂತೆ. ಅವರು ನಾನು ಚುನಾವಣೆಗೆ ಸ್ಪರ್ಧಿಸಲೇಬೇಕು ಎಂದು ಹೇಳುತ್ತಿದ್ದಾರೆ. ಹೀಗಾಗಿ ನಾನು ಅವರಿಗೆ ಇಲ್ಲ ಎಂದು ಹೇಳಲಾಗುವುದಿಲ್ಲ. ಚುನಾವಣೆ ಇರುವುದೇ ಸ್ಪರ್ಧಿಸುವುದಕ್ಕೆ, ಜನರ ಭಾವನೆಗೆ ಗೌರವ ಕೊಡಬೇಕಾಗಿದ್ದು ನನ್ನ ಕರ್ತವ್ಯ. ಹೀಗಾಗಿ ನಾನು ಚುನಾವಣೆಯ ಕಣಕ್ಕೆ ಇಳಿದಿದ್ದೇನೆ ಎಂದು ಸಾವಿತ್ರಿ ಹೇಳಿದ್ದಾರೆ.
ಸಾವಿತ್ರಿ ಜಿಂದಾಲ್ ಸ್ವತಂತ್ರವಾಗಿ ಕಣಕ್ಕೆ ಇಳಿದ ಕೂಡಲೇ ಕಾಂಗ್ರೆಸ್ ಮಾಜಿ ಎಂಎಲ್ಎ ಸಾವಿತ್ರಿ ಜಿಂದಾಲ್ ಅವರ ಬೆಂಬಲಕ್ಕೆ ನಿಂತಿದ್ದಾರೆ.
ಹರಿಯಾಣ ಚುನಾವಣೆ; ಬಿಜೆಪಿ ವಿರುದ್ಧ ಭಾರತದ ಶ್ರೀಮಂತ ಮಹಿಳೆ ಕಣಕ್ಕೆ