newsics.com
ಬೆಂಗಳೂರು: ದರ್ಶನ್ ಅವರು ಈಗ ಬಳ್ಳಾರಿ ಜೈಲಿನಲ್ಲಿ ಸಾಮಾನ್ಯ ಖೈದಿಯಂತೆ ದಿನ ಕಳೆಯುತ್ತಿದ್ದಾರೆ. ಇಂದು (ಆಗಸ್ಟ್ 29) ಬಳ್ಳಾರಿ ಸೆಂಟ್ರಲ್ ಜೈಲಿನಲ್ಲಿ ರಾತ್ರಿ ಊಟ ಸೇವಿಸಿದ್ದಾರೆ.
ದರ್ಶನ್ 2 ಚಪಾತಿ-ಪಲ್ಯ, ಅನ್ನ ಸಾಂಬರ್, ಮಜ್ಜಿಗೆ ನೀಡಲಾಗಿದೆ. ಜೈಲಿನ ನಿಯಮದಂತೆ 355 ಗ್ರಾಂ ಅನ್ನ, 650 ಗ್ರಾಂ ಸಾಂಬರ್, 205 ಗ್ರಾಂ ಮಜ್ಜಿಗೆಯನ್ನು ಜೈಲಿನ ಸಿಬ್ಬಂದಿ ನೀಡಿದ್ದಾರೆ.
ಇಷ್ಟು ದಿನ ಮನೆಯೂಟ ಬೇಕು ಎನ್ನುತ್ತಿದ್ದ ದರ್ಶನ್ ಈಗ ಜೈಲಿನ ಊಟವನ್ನೇ ಮಾಡುವುದು ಅನಿವಾರ್ಯ ಆಗಿದೆ.
ಬಳ್ಳಾರಿ ಶೈಲಿಗೆ ಶಿಫ್ಟ್ ಆ ಬಳಿಕ ಬೆಳಗ್ಗೆ, ಮಧ್ಯಾಹ್ನ ದರ್ಶನ್ ಅವರು ಊಟ ನಿರಾಕರಿಸಿದ್ದರು. ಆದರೆ ರಾತ್ರಿ ಊಟ ಸೇವಿಸಿದ್ದಾರೆ. ಜೈಲಿನ ನಿಗದಿತ ಸಮಯದಂತೆ ಸಂಜೆ 7 ಗಂಟೆಗೆ ಊಟ ನೀಡಲಾಗಿದೆ. ಸಾಮಾನ್ಯ ಖೈದಿಗಳಂತೆ ದರ್ಶನ್ ಕೂಡ ಜೈಲೂಟ ಸೇವಿಸಿ ಸೆಲ್ಗೆ ತೆರಳಿದ್ದಾರೆ. ಪರಪ್ಪನ ಅಗ್ರಹಾರದಲ್ಲಿ ಇದ್ದಾಗ ಮನೆಯೂಟಕ್ಕಾಗಿ ದರ್ಶನ್ ಅರ್ಜಿ ಸಲ್ಲಿಸಿದ್ದರು. ಆದರೆ ಅದಕ್ಕೆ ಕೂರ್ಟ್ ಅನುಮತಿ ನೀಡಿರಲಿಲ್ಲ.