newsics.com
ತುಮಕೂರು: ಪ್ರೇಮ ನಿರಾಕರಣೆ ಮಾಡಿದ ತೃತೀಯಲಿಂಗಿಗೆ ಸಾರ್ವಜನಿಕ ಸ್ಥಳದಲ್ಲೇ ಚಾಕುವಿನಿಂದ ಇರಿದು ಪರಾರಿಯಾಗುತ್ತಿದ್ದ ಯುವಕನನ್ನು ಸಾರ್ವಜನಿಕರು ಸಿನಿಮೀಯ ರೀತಿಯಲ್ಲಿ ಬೆನ್ನಟ್ಟಿ ಹಿಡಿದು ಥಳಿಸಿ ಪೊಲೀಸರ ವಶಕ್ಕೆ ನೀಡಿದ ಘಟನೆ ಬುಧವಾರ ರಾತ್ರಿ ಜಿಲ್ಲೆಯ ಕುಣಿಗಲ್ನಲ್ಲಿ ನಡೆದಿದೆ.
ಕುಣಿಗಲ್ನ ಕೋಟೆ ಪ್ರದೇಶದ ತೃತೀಯಲಿಂಗಿ ಹಾಗೂ ಮಂಡ್ಯದ ಯುವಕ ಆದಿಲ್ ಕಳೆದ ಆರು ತಿಂಗಳಿಂದ ಪ್ರೀತಿಸುತ್ತಿದ್ದರು. ತೃತೀಯಲಿಂಗಿ ಕಾರ್ಯನಿಮಿತ್ತ ಹೊರ ಊರುಗಳಿಗೆ ಹೋಗುತ್ತಿದ್ದುದನ್ನು ಸಹಿಸದ ಪ್ರೇಮಿ ಆದಿಲ್ ಆಕ್ಷೇಪ ವ್ಯಕ್ತಪಡಿಸಿ ಹಲ್ಲೆ ನಡೆಸುತ್ತಿದ್ದ. ಇದರಿಂದ ಬೇಸತ್ತು ಪ್ರೇಮ ನಿರಾಕರಿಸುತ್ತಿದ್ದ ಹಿನ್ನೆಲೆಯಲ್ಲಿ ತೃತೀಯಲಿಂಗಿ ಜತೆ ಮಾತನಾಡಲು ಆದಿಲ್ ಕುಣಿಗಲ್ಗೆಬಂದಿದ್ದ.
ಗ್ರಾಮದೇವತಾ ವೃತ್ತದ ಬಳಿ ಇಬ್ಬರ ನಡುವೆ ಮಾತಿನ ಚಕಮಕಿ ನಡೆದು ಅಸಮಾಧಾನಗೊಂಡಿದ್ದ ಆದಿಲ್, ತೃತೀಯಲಿಂಗಿಗೆ ಚಾಕುವಿನಿಂದ ಇರಿದು ಪರಾರಿಯಾಗುತ್ತಿದ್ದ ಸಮಯದಲ್ಲಿ ಪುರಸಭೆ ಸದಸ್ಯ ರಂಗಸ್ವಾಮಿ ಮತ್ತು ಬೆಂಬಲಿಗರು ಬೆನ್ನಟ್ಟಿ ಆರೋಪಿಯನ್ನು ಹಿಡಿದು ಪೊಲೀಸರ ವಶಕ್ಕೆ ನೀಡಿದ್ದಾರೆ. ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.
ಮೈಮುಟ್ಟಿ ಬಾಲಕಿ ಜತೆ ಅನುಚಿತ ವರ್ತನೆ: ಟ್ಯೂಷನ್ ಶಿಕ್ಷಕನನ್ನು ವಿವಸ್ತ್ರಗೊಳಿಸಿ ಹಲ್ಲೆ, ಮೆರವಣಿಗೆ
ಕುರ್ಚಿಗೆ ಕಟ್ಟಿ ಹಾಕಿ ಚಿತ್ರಹಿಂಸೆ ಕೊಟ್ಟು ಬೆಂಗಳೂರಲ್ಲಿ ಮಹಿಳೆಯ ಕೊಲೆ
ಲವರ್ಸ್ ಎಂದು ಭಾವಿಸಿ ಸ್ವಂತ ಅಣ್ಣ-ತಂಗಿಯನ್ನೇ ಜೈಲಿಗೆ ಹಾಕಿದ ಪೊಲೀಸ್