newsics.com
ಬೆಂಗಳೂರು: ಮನೆಯಲ್ಲಿಯೇ ಇರುವ ನೈಸರ್ಗಿಕ ಪದಾರ್ಥಗಳನ್ನು ಬಳಸಿ ಮಳೆಗಾಲ ದಲ್ಲಿ ಕಾಡುವ ಶಿಲೀಂಧ್ರ ಸೋಂಕು ನಿಮ್ಮ ಹತ್ತಿರಕ್ಕೂ ಸುಳಿಯದಂತೆ ನೋಡಿಕೊಳ್ಳಬಹುದಾಗಿದೆ.
ಮಳೆಗಾಲದಲ್ಲಿ ಪ್ರಮುಖವಾಗಿ ಸ್ವಚ್ಛತೆಯನ್ನು ಕಾಪಾಡಿಕೊಳ್ಳುವುದು ಪ್ರಮುಖ ಕಾರ್ಯವಾಗಿದೆ. ಹೊರಗಡೆ ನೀರಿನಲ್ಲಿ ಕಾಲಿಡುವಾಗ ಪಾದರಕ್ಷೆಗಳ ಬಳಕೆ, ಹೊರಗಡೆಯಿಂದ ಬಂದ ಕೂಡಲೇ ಬಿಸಿ ನೀರಿನಲ್ಲಿ ಸ್ನಾನ, ಚೆನ್ನಾಗಿ ಒಣಗಿದ ಬಟ್ಟೆಗಳನ್ನೇ ಧರಿಸುವುದು ಈ ರೀತಿಯ ಅಭ್ಯಾಸಗಳನ್ನು ರೂಢಿಸಿಕೊಂಡಲ್ಲಿ ಶಿಲೀಂಧ್ರ ಸೋಂಕು ನಿಮ್ಮನ್ನು ಬಾಧಿಸುವ ಅಪಾಯ ಕಡಿಮೆ ಇರುತ್ತದೆ
ಅಲೋವೇರಾ ಅಥವಾ ಲೋಳೆಸರ ಸಾಮಾನ್ಯವಾಗಿ ಎಲ್ಲರ ಮನೆ ಅಂಗಳದಲ್ಲಿಯೂ ಬೆಳೆಯುತ್ತದೆ. ಇವುಗಳು ಕೂಡ ಪ್ರಮುಖ ರೋಗ ನಿರೋಧಕ ಶಕ್ತಿಯನ್ನು ಹೊಂದಿರುತ್ತವೆ. ಶಿಲೀಂಧ್ರ ಸೋಂಕು ಬಾಧಿಸಿದ ಜಾಗಗಳಲ್ಲಿ ಇವುಗಳ ರಸವನ್ನು ಲೇಪಿಸಿಕೊಂಡಲ್ಲಿ ಕ್ರಮೇಣವಾಗಿ ಸೋಂಕು ಮಾಯವಾಗುತ್ತದೆ.
ಬೆಳ್ಳುಳ್ಳಿ ಕೂಡ ಶಿಲೀಂಧ್ರ ಸೋಂಕಿನ ವಿರುದ್ಧ ರಾಮಬಾಣದಂತೆ ಕಾರ್ಯ ನಿರ್ವಹಿಸುತ್ತದೆ. ಬೆಳ್ಳುಳ್ಳಿ ಎಸಳುಗಳನ್ನು ಜಜ್ಜಿ ರಸ ತೆಗೆದು ಇದನ್ನು ಕೊಬ್ಬರಿ ಎಣ್ಣೆಯೊಂದಿಗೆ ಸೇರಿಸಿ ಶಿಲೀಂಧ್ರ ಸೋಂಕು ತಾಗಿದ ಜಾಗಗಳಿಗೆ ಲೇಪಿಸಿಕೊಂಡು ಬಳಿಕ ಸ್ನಾನ ಮಾಡುವ ಮೂಲಕ ನೀವು ಈ ಸಮಸ್ಯೆಯಿಂದ ಪಾರಾಗಲು ಸಾಧ್ಯವಿದೆ.